ಉಪ್ಪಿನಂಗಡಿ (www.vknews.com) ; ನಾವು ಮಾಡುತ್ತಿರುವ ಯಾವುದೇ ಆರಾಧನಾ ಕರ್ಮಗಳಿಂದ ಅಲ್ಲಾಹನಿಗೆ ಲಾಭವೋ ಅಥವಾ ಪ್ರಾರ್ಥನೆಗಳನ್ನು ಮತ್ತು ಒಳಿತಿನ ಕಾರ್ಯಗಳನ್ನು ಮಾಡದಿದ್ದರೆ ಅಲ್ಲಾಹನಿಗೆ ಯಾವುದೇ ನಷ್ಟವೋ ಉಂಟಾಗುವುದಿಲ್ಲ. ನಾವು ಒಳಿತನ್ನು ಮಾಡಿ ಕೆಡುಕಿನಿಂದ ದೂರ ಇರುವುದು ನಮ್ಮದೇ ಇಹ ಪರ ಲಾಭಕ್ಕೋಸ್ಕರ ಮಾತ್ರವಾಗಿದೆ. ದೇವನು ನಮ್ಮನ್ನು ಸೃಷ್ಟಿಸಿ ನಮ್ಮದೇ ಶಾಂತಿಯುತ ಜೀವನಕ್ಕಾಗಿ ಮಾರ್ಗದರ್ಶನ ನೀಡಿದ್ದಾನೆ. ಮಾನವನ ಪರಿಮಿತ ಬುದ್ದಿಗೆ ನಿಲುಕದ ಹಲವು ರಹಸ್ಯಗಳು ಜಗದ ಸೃಷ್ಟಿಯಲ್ಲಿ ಅಡಕ ಗೊಂಡಿದೆ. ಜಗವೇ ದೇವನ ಒಂದು ಪರೀಕ್ಷೆಯಾಗಿದೆ. ಆ ಪರೀಕ್ಷೆಯ ಶಿಭಿರಾರ್ಥಿಗಳು ಮಾನವನಾಗಿದ್ದಾನೆ. ಕೊರೋನದ ಕಾರಣ ಪವಿತ್ರ ರಮಝಾನಿನಲ್ಲೂ ಕೂಡಾ ಮಸೀದಿಗಳು ಮುಚ್ವಿದವು. ಇದರಿಂದಾಗಿ ಅಲ್ಲಾಹನ ಖಜಾನೆಯಲ್ಲಿ ಯಾವುದೇ ಕೊರತೆ ಸಂಭವಿಸಿಲ್ಲ ಎಂದು ಎಸ್ ಬಿ ಮುಹಮ್ಮದ್ ದಾರಿಮಿ ಉಸ್ತಾದ್ ಇಂದು ಜುಮಾ ಭಾಷಣದಲ್ಲಿ ಪ್ರತಿಪಾದಿಸಿದ್ದಾರೆ.
ಉಪ್ಪಿನಂಗಡಿ ಸರಹದ್ದಿನ ನಿನ್ನಿಕಲ್ ಮಸೀದಿಯಲ್ಲಿ ಜುಮಾ ಖುತುಬಾ ನಿರ್ವಹಿಸಿದ ನಂತರ ಹೃಸ್ವ ಭಾಷಣ ಮಾಡಿದ ಉಸ್ತಾದರು, ನಾವಿಂದು ಅಲ್ಲಾಹನ ಶಿಕ್ಷೆಗೆ ಗುರಿಯಾಗಿದ್ದೇವೆ. ಭಯಂಕರ ಭಯ ನಮ್ಮನ್ನು ಆವರಿಸಿದೆ. ಇದ್ದಕ್ಕಿಂದ್ದಂತೆ ಹಲವು ಸಾವುಗಳು ಸಂಭವಿಸಿದೆ.ಅರೋಗ್ಯವಂತರೂ ಕುಸಿದು ಬಿದ್ದು ಸಾಯವ ದೃಷ್ಯ ಸಾಮಾನ್ಯವಾಗಿ ಬಿಟ್ಟಿದೆ. ಅರೋಗ್ಯ ಕ್ಷೇತ್ರದಲ್ಲಿ ದುಡಿಯವವರೇ ಸೋಂಕು ತಗುಲಿಸಿಕೊಂಡಿದ್ದಾರೆ. ವ್ಯಾಪಾರ ವಹಿವಾಟುಗಳಲು ಮುಗ್ಗರಿಸಿದೆ. ನಮ್ಮ ಮುಂದೆ ಭಯಾನಕ ದಿನಗಳ ಚಿತ್ರಣ ಮೂಡಿ ಬರುತ್ತಿದೆ. ಇದು ಹೀಗೇ ಮುಂದುವರಿದರೆ ಹಸಿವಿನಿಂದಲೂ ಜನ ಸಾಯುವ ದಿನ ದೂರ ಇಲ್ಲ. ಈ ಶಿಕ್ಷೆ ಎಷ್ಟು ಕಾಲ ಇರಬಹುದು ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಆದಾಗ್ಯೂ ಜನ ಇದರಿಂದ ಪಾಠ ಕಲಿತಂತೆ ಕಾಣುವುದಿಲ್ಲ. ಅದೇ ಈ ಹಿಂದಿನ ದ್ವೇಷ ಹರಡುವ ಚಾಳಿ ಮುಂದುವರಿದಿದೆ. ಸಾಮಾಜಿಕ ತಾಣಗಳಲ್ಲಿ ಇದರ ವಿರಾಟ್ ರೂಪ ಪ್ರದರ್ಶನವಾಗುತ್ತಿದೆ.
ಪಾರ್ಟಿ, ಪಂಗಡ, ಪಕ್ಷ, ಜಾತಿ, ಧರ್ಮದ ಆದಾರದಲ್ಲಿ ಅಪಹಾಸ್ಯ, ಗೇಲಿ, ಟೀಕೆ, ಟಿಪ್ಪಣಿ, ವಾದ, ಪ್ರತಿವಾದ, ದ್ವೇಷಾಸೂಯೆಗಳು ಮುಂದುವರಿದಿದೆ. ನಾವು ಹೀಗೇ ಇರುತ್ತೇವೆ ಎಂಬ ಸಂಕಲ್ಪ ತೊಟ್ಟು ಹಠ ಹಿಡಿದು ಕುಳಿತಂತಿದ್ದೇವೆ. ಇದೇ ರೀತಿ ಕೊರೋಣವೂ ಹಠ ಹಿಡಿದರೆ ನಮ್ಮಪಾಡು ಏನಾಗಬಹುದು ಎಂದು ಚಿಂತಿಸ ಬೇಕಾಗಿದೆ ಎಂಬ ಎಚ್ಚರಿಕೆ ನೀಡಿದ ಅವರು ಪಾಶ್ಚಾತ್ತಾಪ ಪಟ್ಟು ದೇವನಿಗೆ ನಿಕಟವಾಗದೇ ನಮಗೆ ಎರಗಿದ ವಿಫತ್ತು ಬಿಟ್ಡು ಹೋಗುವುದು ಕಷ್ಟದ ಮಾತು ಎಂದರು.
ಪೂರ್ವ ಕಾಲದಲ್ಲಿ ಇಂತಹ ವಿಫತ್ತು ಎರಗಿದಾಗ ಅಂದಿನ ಜನ ಮಾಡಿದ ಅದೇ ಮಾರ್ಗ ನಾವು ಇಂದು ಕೂಡಾ ಅವಂಲಭಿಸಿ ಪೂರ್ವಿಕ ಅಂಬಿಯಾ ಅವುಲಿಯಾ ಸಲಫು ಸಾಲಿಹುಗಳ ಕೀರ್ತನೆ,ಧಿಕ್ರ್ ,ಸಲಾತ್,ಕುರ್ಹಾನ್ ಪಾರಾಯಣ ಹೆಚ್ಚಿಸುವ ಮೂಲಕ ಅಲ್ಲಾಹನ ಸಂತೃಪ್ತಿ ಗಳಿಸಲು ಪ್ರುಯತ್ನಿಸ ಬೇಕು ಎಂದ ಅವರು ಅದೇ ರೀತಿ ಬಹಳಷ್ಟು ಜಾಗೃತೆಯಿಂದ ನಮ್ಮ ದಿನಚರಿಯನ್ನು ಮಾಡ ಬೇಕಾಗಿದ್ದು ಯಾವುದೇ ಕಾರಣಕ್ಕೂ ಆರೋಗ್ಯ ಕಾರ್ಯಕರ್ತರ ಎಚ್ವರಿಕೆಯನ್ನು ನಿರ್ಲಕ್ಷ್ಯ ಮಾಡದೇ ಪ್ರತೀ ನಿಮಿಷ ಎಚ್ವರಿಕೆಯಿಂದ ಇರ ಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದರು.
ವರದಿ; ಮುಹಮ್ಮದ್ ಮುಸ್ತಫಾ ನಿನ್ನಿಕಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.