ದುಬೈ(ವಿಶ್ವಕನ್ನಡಿಗ ನ್ಯೂಸ್): SKSSF ಕರ್ನಾಟಕ ಯುಎಇ ಸಮಿತಿಯು ಯುಎಇಯ ನಾನಾ ಭಾಗಗಳಲ್ಲಿ ಕರ್ನಾಟಕದ ವಿವಿಧ ಭಾಗದ ಸಂಕಷ್ಟದಲ್ಲಿರುವವರಿಗಾಗಿ ಎರಡನೇ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿ ಇಂದು ತಾಯಿನಾಡಿಗೆ ಕಳುಹಿಸಿದೆ, ದುಬೈ, ಅಬುಧಾಬಿ ಮತ್ತು ಶಾರ್ಜಾ ದಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡವರನ್ನು ರಾಸ್ ಅಲ್ ಖೈಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು (10.7.2020) ಬೆಳಗಿನ ಜಾವ 3:15ಕ್ಕೆ ಹೊರಟು ಬೆಳಿಗ್ಗೆ 8:30ಕ್ಕೆ ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ, ಪ್ರಯಾಣಿಕರಿಗೆ ದುಬೈ, ಅಬುಧಾಬಿ ಮತ್ತು ಶಾರ್ಜಾ ದಿಂದ ಉಚಿತ ಬಸ್ ವ್ಯವಸ್ಥೆ ಏರ್ಪಡಿಸಾಲಾಗಿತ್ತು.
ಬೀಳ್ಕೊಡುಗೆ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ, ಉಪಾಧ್ಯಕ್ಷರಾದ ಶೆರೀಫ್ ಕಾವು, ಮುಹಮ್ಮದ್ ರಫೀಕ್ ಆತೂರು, ಕೋಶಾದಿಕಾರಿ ಅಬ್ದುಲ್ ಲತೀಫ್ ಕೌಡಿಚ್ಚಾರ್, ಕಾರ್ಯದರ್ಶಿ ಹುಸೈನ್ ಫೈಝಿ, ಅಶ್ರಫ್ ಪರ್ಲಡ್ಕ, ವಿಖಾಯ ಚಯರ್ ಮೇನ್ ನವಾಝ್ ಬಿ ಸಿ ರೋಡ್, ಹೆಮ್ಮೆಯ ಕನ್ನಡಿಗರು ಸಂಘಟನೆಯ ರಫೀಕ್ ಅಲಿ ಕೊಡಗು ಮೊದಲಾದವರು ಮಾತನಾಡಿ ಪ್ರಯಾಣಿಕರಿಗೆ ಶುಭ ಹಾರೈಸಿದರು, ಕನ್ವೀನರ್ ಅಝೀಝ್ ಸೋಂಪಾಡಿ ಅವರು ಸಹಕರಿಸಿದ ಎಲ್ಲರಿಗೂ ಧನ್ಯವಾದಗೈದರು.
ರಾಸಲ್ ಖೈಮಾದಿಂದ ಹೊರಟ ಸ್ಪೈಸ್ ಜೆಟ್ ಸಂಸ್ಥೆಯ ವಿಮಾನದಲ್ಲಿ 175 ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಹೊತ್ತು ಹೊರಟ ವಿಮಾನದಲ್ಲಿ ಆದ್ಯತೆಯ ಮೇರೆಗೆ ಗರ್ಭಿಣಿಯರಿಗೆ, ತುರ್ತು ಚಿಕಿತ್ಸಾ ರೋಗಿಗಳಿಗೆ, ಹಿರಿಯ ನಾಗರಿಕರಿಗೆ, ವಿಸಿಟ್ ವೀಸಾದಲ್ಲಿ ಬಂದು ಸಿಲುಕಿಕೊಂಡವರಿಗೆ, ಕೆಲಸ ಕಳೆದುಕೊಂಡವರಿಗೆ ಅವಕಾಶ ಕಲ್ಪಿಸಲಾಗುತ್ತು. ಯುಎಇ ವಿವಿಧ ಭಾಗಗಳಿಂದ ಸಾರಿಗೆ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು ಹಾಗೂ ವಿಖಾಯ ತಂಡದ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.