ಮಂಗಳೂರು ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಅಜ್ಜಿನಡ್ಕ ಜಂಕ್ಷನ್ ನ ಬಹುಕಾಲ ಬೇಡಿಕೆಯಾಗಿದ್ದ ಹೈ ಮಾಸ್ಟ್ ದಿಪವನ್ನು ಎಸ್.ವೈ.ಎಸ್- ಎಸ್.ಎಸ್.ಎಫ್- ಎ.ಸಿ.ಎಫ್ ಅಜ್ಜಿನಡ್ಕ ವತಿಯಿಂದ ದಿನಾಂಕ ಜುಲೈ 07.2020 ಬೆಳಿಗ್ಗೆ 10 ಘಂಟೆಗೆ ಲೋಕಾರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ರಾಜ್ಯ ಸಮಿತಿ ಸದಸ್ಯರಾದ ಬಹು|ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಸ್ತಾದರು ದುಆ ನೆರೆವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಾಖಾ ಪ್ರ.ಕಾರ್ಯದರ್ಶಿ ಇಬ್ರಾಹಿಂ ಬಾತಿಷ್ ಸ್ವಾಗತಿಸಿದರು.
ಬದ್ರಿಯಾ ಜುಮಾ ಮಸ್ಜಿದ್ ಅಜ್ಜಿನಡ್ಕ ಇದರ ಪ್ರ.ಕಾರ್ಯದರ್ಶಿ ಅಹ್ಮದ್ ಅಜ್ಜಿನಡ್ಕ ರವರು ಹಿತವಚನ ನೀಡಿದರು.ಶಾಸಕರಾದ ಯು.ಟಿ ಖಾದರ್ ರವರು ಹೈ ಮಾಸ್ಟ್ ದೀಪ ಉದ್ಘಾಟಿಸಿ ಕಾರ್ಯಕ್ರಮದ ಬಗ್ಗೆ ಹಾಗೂ ಸೇರಿದ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಿದರು.ಶಾಖಾ ಸದಸ್ಯರಾದ ಸೆಲೀಂ ಕೆ ಎ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು.
ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.