ದಮ್ಮಾಮ್ (ವಿಶ್ವ ಕನ್ನಡಿಗ ನ್ಯೂಸ್): ಕೋವಿಡ್ 19 ಬಿಕ್ಕಟ್ಟಿನಿಂದಾಗಿ ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ 180 ಮಂದಿ ಅನಿವಾಸಿ ಕನ್ನಡಿಗರನ್ನು ಹೊತ್ತ ಕೆ.ಎಂ.ಟಿ ಕಂಪೆನಿಯ ಚಾರ್ಟೆಡ್ ವಿಮಾನವು ಮಂಗಳವಾರದಂದು ದಮ್ಮಾಮ್ ನಿಂದ ಹೊರಟಿದೆ.
ಜುಲೈ 14 ರಂದು 6:30ಕ್ಕೆ ಇಂಡಿಗೊ ವಿಮಾನವು ಸೌದಿ ಅರೇಬಿಯಾದ ದಮ್ಮಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಿದ್ದು, ಸ್ಥಳೀಯ ಕಾಲಮಾನ ಮಧ್ಯಾಹ್ನ 01.30ರ ವೇಳೆಗೆ ಮಂಗಳೂರು ತಲುಪಲಿದೆ ಎಂದು ಸಂಸ್ಥೆಯ ಸಿ.ಇ.ಒ ಅಬ್ದುಲ್ ರಝಾಕ್ ತಿಳಿಸಿದ್ದಾರೆ.
ವಿಮಾನವು ಒಟ್ಟು 180 ಮಂದಿ ಪ್ರಯಾಣಿಕರನ್ನು ಹೊತ್ತುಕೊಂಡು ತವರಿನತ್ತ ಸಾಗಿದ್ದು ಅವರಲ್ಲಿ 6 ಶಿಶುಗಳೂ ಒಳಗೊಂಡಿವೆ. ಕೆ.ಎಂ.ಟಿ ಕಂಪೆನಿಯ ವತಿಯಿಂದ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಆರೋಗ್ಯ ಸುರಕ್ಷಾ ಕಿಟ್ ಗಳನ್ನು ವಿತರಿಸಲಾಯಿತು.
ಕೋವಿಡ್ 19 ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ ಗರ್ಭಿಣಿ ಮಹಿಳೆಯರು, ಹೃದ್ರೋಗ ಒಳಗೊಂಡಂತೆ ವಿವಿಧ ಗಂಭೀರ ಕಾಯಿಲೆಗೆ ಗುರಿಯಾಗಿರುವವರು ಮತ್ತು ಕಳೆದ ಹಲವು ತಿಂಗಳುಗಳಿಂದ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿಕೊಂಡವರು ಕೆ.ಎಂ.ಟಿ ವಿಮಾನದ ಮೂಲಕ ತವರಿಗೆ ಹೊರಟಿದ್ದಾರೆ. ಇವರಲ್ಲಿ ತೀವ್ರ ಸಂಕಷ್ಟದಲ್ಲಿರುವ ಕೆಲವು ಮಂದಿಗೆ ಕೆ.ಎಂ.ಟಿ ಉಚಿತ ಟಿಕೆಟ್ ನೀಡಿದೆ.
ಕೆ.ಎಂ.ಟಿ ಕಂಪೆನಿಯು ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡೂರಿನ ಶೌಕತ್, ಅಬ್ದುಲ್ ರಝಾಕ್, ಸಿದ್ದೀಕ್ ಮತ್ತು ಅಬ್ದುಲ್ ರಹ್ಮಾನ್ ಅವರ ಪಾಲುದಾರಿಕೆಯಲ್ಲಿ ಸ್ಥಾಪಿಸಿದ ಸಂಸ್ಥೆಯಾಗಿದ್ದು, ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.
ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ನೆರವಾಗುವುದಕ್ಕಾಗಿ ಚಾರ್ಟೆಡ್ ವಿಮಾನವನ್ನು ಏರ್ಪಾಡುಗೊಳಿಸುವುದರಲ್ಲಿ ಕೆ.ಎನ್.ಆರ್.ಐ ಸೌದಿ ಅರೇಬಿಯಾದ ಮಾಜಿ ಅಧ್ಯಕ್ಷೆ ಡಾ.ಆರತಿ ಕೃಷ್ಣ ಅವರ ಪಾತ್ರ ಮಹತ್ವದ್ದಾಗಿದ್ದು, ಇದಕ್ಕಾಗಿ ಕೆ.ಎಂ.ಟಿ ಸಿ.ಇ.ಒ ಅಬ್ದುಲ್ ರಝಾಕ್ ಅವರನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ. ಅದೇ ರೀತಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಸ್ಯಾಕೊ ಕಂಪೆನಿ ಮಾಲಕ ಅಲ್ತಾಫ಼್ ಉಳ್ಳಾಲ ಮತ್ತು ಇಡೀ ಕಾರ್ಯಾಚರಣೆಗೆ ಸಹಕರಿಸಿದ ಕೆ.ಎಂ.ಟಿ ಕಂಪೆನಿಯ ಆಪರೇಶನ್ ಮ್ಯಾನೇಜರ್ ಸಾದಿಕ್ ಅಹ್ಮದ್ ಮತ್ತು ತಂಡಕ್ಕೆ ಅಬ್ದುಲ್ ರಝಾಕ್ ಕೃತಜ್ನತೆ ಸಲ್ಲಿಸಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.