(www.vknews.in) . ಆನ್ಲೈನ್ ಶಿಕ್ಷಣ ಎನ್ನುವ ಪದ ಈ ಲೋಕ್ ಡೌನ್ ಸಮಯದಲ್ಲಿ ಅತೀ ಹೆಚ್ಚು ಜನರ ಬಾಯಲ್ಲಿ ಪ್ರಚಲಿತವಾದ ಮಾತು.
ಇದು ಹಲವು ಖಾಸಗಿ ಶಾಲೆಗಳು ತಮ್ಮ ಜೇಬು ತುಂಬಿಸಲು ಹಾಗೂ ಪೋಷಕರಿಂದ ಶಾಲೆಯ ಫೀಸ್ ತೆಗೆದು ಕೊಳ್ಳುವುದಕ್ಕೊಸ್ಕರ ಈ ಮಾತನ್ನು ಹೆಚ್ಚು ಹೆಚ್ಚು ಉಪಯೋಗಿಸಿ ಕೊಂಡರು ಎಂದರೂ ತಪ್ಪಿಲ್ಲ,
ಇದರೊಂದಿಗೆ ಅಪರೂಪದಲ್ಲಿ ಕೆಲವು ಖಾಸಗಿ ಶಾಲೆಗಳು ಪೋಷಕರ ಕಷ್ಟವನ್ನರಿತು ಮಕ್ಕಳಿಗೆ ಮೊಬೈಲ್ ತೆಗೆದು ಕೊಟ್ಟು ಶಾಲಾ ಫೀಸ್ ಗೆ ಸಾವಕಾಶವನ್ನು ಕೊಟ್ಟು ಹೃದಯ ವೈಶಾಲ್ಯತೆಯನ್ನು ತೋರಿಸಿ ಕೊಟ್ಟಿರುವುದು ಕೂಡ ಸುಳ್ಳಲ್ಲ.
ಈ ಶಾಲೆ, ಪೋಷಕರು ಮತ್ತು ಮಕ್ಕಳ ಮದ್ಯೆ ತಮ್ಮ ಟಿ ಅರ್ ಪಿ ಗೋಸ್ಕರ ಅರ್ದ0ಬರ್ದ ವ್ಯವಸ್ತೆಯ ಬಗ್ಗೆ ತಿಳಿದುಕೊಂಡು ಸರಕಾರವನ್ನು ಮತ್ತು ಪೋಷಕರನ್ನು ಚಿಂತಿಸುವ ರೀತಿಯಲ್ಲಿ ಆನ್ಲೈನ್ ಶಿಕ್ಷಣದ ಬಗ್ಗೆ ಹಲವು ಪಾನಲ್ ಚರ್ಚೆಗಳನ್ನು ಮಾಡಿದ ಮಾಧ್ಯಮ ಗಳು ಜನರನ್ನು ಮಂಕು ಬೂದಿ ಎರಚಿ ರುವುದು ಮಾತ್ರ ಸತ್ಯ.
ಆನ್ಲೈನ್ ಶಿಕ್ಷಣದ ಬಗ್ಗೆ ಸರಕಾರವು ತಜ್ಞರ ಸಮಿತಿಯನ್ನು ರಚಿಸಿ ಅವರಿಂದ ಸವಿಸ್ತಾರವಾದ ವರದಿಯನ್ನು ಪಡೆದುಕೊಂಡು ,ಅದರ ಬಗ್ಗೆ ಇಲಾಖೆಯು ಚರ್ಚಿಸುವ ಮೊದಲೇ ಒಂದು ಮಾಧ್ಯಮವು ಸರಕಾರ ಹಾಗೂ ತಜ್ಞರ ಸಮಿತಿ ಆನ್ಲೈನ್ ಶಿಕ್ಷಣಕ್ಕೆ ಅನುಮತಿಯನ್ನು ಕೊಟ್ಟಿತು ಎನ್ನುವ ರೀತಿಯಲ್ಲಿ ಜನರಿಗೆ ತಿಳಿಸಿತು, ಇದರ ಬಗ್ಗೆ ಕೊನೆಗೆ ಶಿಕ್ಷಣ ಸಚಿವರೇ ಮಾಧ್ಯಮದಲ್ಲಿ ಸೃಷ್ಟೀಕರಣ ಕೊಡಬೇಕಾಯಿತು.
ಆನ್ಲೈನ್ ಶಿಕ್ಷಣ ಎಂದಾದರೂ ಸರಕಾರ ಅಸ್ತು ಎನ್ನುವುದಾದರೆ ಅತೀ ಹೆಚ್ಚು ತೊಂದರೆಗೆ ಒಳಪಡುವವರು ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಸಮಾಜದಲ್ಲಿ ಸಾಂಪತ್ತಿಕವಾಗಿ ಕೆಳ ಸ್ತರದಲ್ಲಿರುವ ಬಡ ಮಕ್ಕಳು ಎನ್ನುವುದರಲ್ಲಿ ಸಂಶಯವಿಲ್ಲ.
ಆದರಿಂದ ಸರಕಾರಿ ಶಾಲೆಗಳು ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಗಳಾಗಲಿ ಎನ್ನುವ ದ್ಯೇಯ ವಾಕ್ಯದೊಂದಿಗೆ ರಾಜ್ಯವ್ಯಾಪಿ. ಕಾರ್ಯಾಚರಿಸುತ್ತಿರುವ ಸರಕಾರಿ ಶಾಲೆಗಳ ಎಸ್ ಡಿ ಎಂ ಸಿ ಗಳ ಸಮನ್ವಯ ವೇದಿಕೆಯು ಆತಂಕವನ್ನು ಪ್ರಕಟಿಸಿತು. ಈ ಆತಂಕದ ಭಾಗವಾಗಿ ತಜ್ಞರ ಸಮಿತಿಯಲ್ಲಿ ಇದ್ದಂತಹ ಖ್ಯಾತ ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ . ವಿ. ಪಿ ಯವರೊಂದಿಗೆ ವೆಬಿನಾರ್ ಸಂವಾದವನ್ನು ಏರ್ಪಡಿಸಿ ಆತಂಕವನ್ನು ದೂರ ಮಾಡುವ ಪ್ರಯತ್ನವು ಯಶಸ್ವಿಯಾಯಿತು.
ಯಾಕೆಂದರೆ ಮಾಧ್ಯಮಗಳಲ್ಲಿ ಬರುತ್ತಿದ್ದ ಆನ್ಲೈನ್ ಶಿಕ್ಷಣ ದ ಬಗೆಗಿನ ವಾರ್ತೆಯು ತಜ್ಞರ ಸಮಿತಿಯು ಕೊಟ್ಟಂತಹ ವರದಿಯ ಆಯ್ದ ಭಾಗವಾಗಿತ್ತು, ವರದಿಯ ಸಂಪೂರ್ಣ ಚಿತ್ರಣ ವಾಗಿರಲಿಲ್ಲ. ವರದಿಯಲ್ಲಿ ಸರಕಾರಿ ಶಾಲೆಗಳ ,ಅಥವಾ ಖಾಸಗಿ ಶಾಲೆಗಳ ಬಡಮಕ್ಕಳಿಗೆ ಪೂರಕವಾಗುವಂತಹ ಟೆಲಿವಿಷನ್ ಮುಖಾಂತರ ಶಿಕ್ಷಣ, ರೇಡಿಯೋ ಶಿಕ್ಷಣ ಇದು ಯಾವುದೂ ಇರದಂತಹ ಸ್ಥಳಗಳಿಗೆ ಸ್ಥಳೀಯ ಶಾಲೆಗಳ ಶಿಕ್ಷಕರು ಕನಿಷ್ಟ 2 ದಿನಕ್ಕೊಮ್ಮೆ ಮಕ್ಕಳ ಮನೆಯ ಬಳಿ ಹೋಗಿ ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳನ್ನು ಕೊಡುವ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಿರುವುದನ್ನು ಯಾವ ಮಾಧ್ಯಮವೂ ತಿಳಿಸದಿರುವುದು ಪೋಷಕರ ಮನಸ್ಸಲ್ಲಿ ಆತಂಕಕ್ಕೆ ಎಡೆಮಾಡಿ ಕೊಟ್ಟಿತ್ತು.
ಈ ವರದಿಯು ಖಂಡಿತವಾಗಿಯೂ ಸರಕಾರಿ ಶಾಲೆಗಳ ಮಕ್ಕಳಿಗೆ ವರದಾನವಾಗಿದೆ. ರಾಜ್ಯದಲ್ಲಿ ಸುಮಾರು 45000 ದಷ್ಟು ಪ್ರಾಥಮಿಕ ಶಾಲೆಗಳಿಗೆ 1,70,000 ಶಿಕ್ಷಕರು ಇದ್ದಾರೆ. ಎಲ್ಲೆಲ್ಲಿ ಯಾವ ಮಾಧ್ಯಮವೂ ತಲುಪುವುದಿಲ್ಲ ಅಲ್ಲಿಗೆ ಇಚ್ಛಾಶಕ್ತಿ ಇರುವಂತಹ ಶಿಕ್ಷಕರನ್ನು ತಲುಪಿಸಿ ಮಕ್ಕಳಿಗೆ ಶೈಕ್ಷಣಿಕವಾಗಿ ಚಟುವಟಿಕೆಗಳನ್ನು ಕೊಡಲು ತೊಂದರೆ ಆಗಲಿಕ್ಕಿಲ್ಲ.
ಮುಚ್ಚುವ ಹಂತಕ್ಕೆ ತಲುಪಿದ ಶಾಲೆಗಳು ಕೂಡ ಪುನಶ್ಚೇತನ ವಾಗಲು ಇದೊಂದು ಅವಕಾಶ ಕೂಡ ಆಗಿದೆ . ಸರಕಾರ ಇಂತಹ ಅವಕಾಶವನ್ನು ಬಳಸಿಕೊಂಡು ,ಇಚ್ಛಾಶಕ್ತಿ ಯೊಂದಿಗೆ ತಜ್ಞರು ಕೊಟ್ಟಂತಹ ವರದಿಯನ್ನು ಜಾರಿಗೊಳಿಸುವುದು. ಇದರಿಂದ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಕೊಟ್ಟು ನಾಡಿನ ಸತ್ಪ್ರಜೆಗಳಿಗೆ ದಾರಿ ದೀಪವಾಗ ಬೇಕಿದೆ.
ಆನ್ಲೈನ್ ಶಿಕ್ಷಣ ಎನ್ನುವುದು ಮೊಬೈಲ್ , ಲಾಪ್ ಟಾಪ್ ಇರುವವರಿಗೆ ಮಾತ್ರ ಎನ್ನುವ ಪೋಷಕರ ಆತಂಕ ದೂರಮಾಡಬೇಕು. ಆದಷ್ಟು ಬೇಗ ಸರಕಾರ ಇದರ ಬಗ್ಗೆ ಗಮನಹರಿಸಲಿ .
ಮೊಯ್ದಿನ್ ಕುಟ್ಟಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ವೇದಿಕೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.