ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು ಕರ್ನಾಟಕ ಕಾರ್ಮಿಕ ಘಟಕ ಕಾಂಗ್ರೆಸ್ ಇಂಟಕ್ ರಾಜ್ಯ ಉಪಾಧ್ಯಕ್ಷರು ಮತ್ತು ಮುಸ್ಲಿಂ ಜಸ್ಟಿಸ್ ಫಾರಂ ಇದರ ಅಧ್ಯಕ್ಷರಾದ ಅಮೀರ್ ತುಂಬೆ ರವರು ರೋಗಿಗಳ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ದಿಡೀರ್ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದೌಡಾಯಿಸಿದರು.
ಇನ್ನು covid -19 ನೋವೆಲ್ ಕರೋನ ವೈರಸ್ ನಿಂದ ಬರುತ್ತಿದ್ದವರು ಅದೇ ರೀತಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳು ಪ್ರತ್ಯೇಕವಾಗಿ ಗರ್ಭಿಣಿ ಸ್ತ್ರೀಯರ ಬಗ್ಗೆ ಹಲವಾರು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇವತ್ತು ಆಸ್ಪತ್ರೆ ಬೋರ್ಡ್ ರೂಂ ಮತ್ತು ಆಸ್ಪತ್ರೆಯ ಮೆಡಿಕಲ್ ಸೂಪರ್ಡೆಂಟ್ ರವರಿಗೆ ಆಸ್ಪತ್ರೆಯಲ್ಲಿ ರೋಗಿಗಳು ಬರುವ ಸಂಕಷ್ಟ ದ ಸ್ಥಿತಿಗತಿಯ ಬಗ್ಗೆ ಮುತ್ತು ರೋಗಿಗಳ ಆರೋಗ್ಯ ಕ್ಷೇಮದ ಬಗ್ಗೆ ಕರೋನ ಸೋಂಕುವಿ ನಿಂದ ಬಳಲುತ್ತಿದ್ದವರು, ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳು, ಪ್ರತ್ಯೇಕವಾಗಿ ಗರ್ಭಿಣಿ ಸ್ತ್ರೀಯರ ಬಗ್ಗೆ, ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ, ಆಸ್ಪತ್ರೆಯ ಬೋರ್ಡ್ ರೂಂ , ಮತ್ತು ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ರವರಿಗೆ ದೂರು ಬಂದ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಿದರು, ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ರೋಗಿಗಳ ಆರೋಗ್ಯ ಕ್ಷೇಮ ವಿಚಾರಿಸಬೇಕು, ಇನ್ನು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ವರಿಗೆ ಚಿಕಿತ್ಸೆಗೆ ಸಹಕರಿಸಬೇಕು ಹತ್ತು ಹಲವಾರು ವಿಷಯದ ಬಗ್ಗೆ ಆಸ್ಪತ್ರೆಯವರಿಗೆ ಮನವರಿಕೆ ಮಾಡಿಕೊಡಲಾಯಿತು, ಇತ್ತೀಚಿನ ದಿನಗಳಲ್ಲಿ ಕೆಲವೊಂದು ಖಾಸಗಿ ಆಸ್ಪತ್ರೆಗಳು, ಕೆಲವೊಂದು ಮೆಡಿಕಲ್ ಕಾಲೇಜ್ ಆಸ್ಪತ್ರೆಗಳು, ಮತ್ತು ಕೆಲವೊಂದು ಸರಕಾರಿ ಆಸ್ಪತ್ರೆಗಳು, ಬಡರೋಗಿಗಳ ಅಹವಾಲನ್ನು ಮತ್ತು ರೋಗಿಗಳರೋದನೆಗೆ ಸ್ಪಂದಿಸುವುದಿಲ್ಲ ಎಂದು ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮ, ಮತ್ತು ಪತ್ರಿಕೋದ್ಯಮದಿಂದ ಮತ್ತು ಸೋಶಿಯಲ್ ಮೀಡಿಯಾ ದಿಂದ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿರುವುದು ನಾವೆಲ್ಲ ನೋಡುತ್ತಿದ್ದೇವೆ ಕಾಣುತ್ತಿದ್ದೇವೆ, ಇನ್ನಾದರೂ ಎಚ್ಚೆತ್ತುಕೊಂಡು ರೋಗಿಗಳ ಆರೋಗ್ಯ ಕ್ಷೇಮದ ಬಗ್ಗೆ ನಿಗಾವಹಿಸಿ ಅವರಿಗೆ ಉತ್ತಮವಾದ ಚಿಕಿತ್ಸೆ ಕೊಡಿಸಿ ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು, ಮುಂದೇನಾದರೂ ಈ ರೀತಿಯ ದೂರುಗಳು ಕೇಳಿ ಬಂದರೆ ಉಗ್ರವಾದ ಪ್ರತಿಭಟನೆ ಮಾಡಬೇಕಾದಿತು ಎಂದು ಎಚ್ಚರಿಸಿದರು.
ಜಿಲ್ಲಾ, ತಾಲ್ಲೂಕು ಮಟ್ಟ ಗ್ರಾಮಮಟ್ಟದಲ್ಲಿ ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜ್ ಆಸ್ಪತ್ರೆಗಳ. ಸರಕಾರಿ ಆಸ್ಪತ್ರೆಗಳ ಮುಂದೆ, ಬೃಹತ್ ಪ್ರತಿಭಟನೆ ಮಾಡಬೇಕಾದಿ ತು ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಖಾಸಗಿ ಆಸ್ಪತ್ರೆಗಳಿಗೆ, ಮೆಡಿಕಲ್ ಕಾಲೇಜ್ ಆಸ್ಪತ್ರೆಗಳಿಗೆ ಮತ್ತು ಸರಕಾರಿ ಆಸ್ಪತ್ರೆಗಳಿಗೆ, ಸರ್ಕಾರ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಬೇಕು, ಎಂದುಅಮೀರ್ ತುಂಬೆ ಹೇಳಿದರು.
ನಿಯೋಗದಲ್ಲಿ, ಅಮೀರ್ ತುಂಬೆ, ಸೋಶಿಯಲ್ ಫಾರೂಕ್, ಮುನೀರ್ ಬಾವ ಶಾಂತಿ ಬಾಗ್ ಮತ್ತು ರೋಗಿಗಳ ಕುಟುಂಬಸ್ಥರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.