(www.vknews.com) : ರಾಶ್ ಬ್ಯಾರಿ ರಾಶಿದ್ ಎಲ್ಲರಿಗೂ ಚಿರಪರಿಚಿತ. ಅವರ ಸಾಮಾಜಿಕ ಸೇವೆ ಮತ್ತು ಬಡ ಹೆಣ್ಣು ಮಕ್ಕಳ ಮದುವೆಯ ಬಗ್ಗೆ ಸಂಸ್ಥೆಯನ್ನು ಸ್ಥಾಪಿಸಿ ಅವರ ಮಾಡುತ್ತಿರುವ ಹಲವಾರು ಸೇವೆಯ ಬಗ್ಗೆ ದೂರದಿಂದಲೇ ಅರಿತುಕೊಂಡಿದ್ದೆ. ಒಂದು ದಿನ ಅಜ್ಮಾನ್ ಕೆಸಿಎಫ್ ಇಹ್ಸಾನ್ ಕಾರ್ಯದರ್ಶಿ ಅಬೂಬಕ್ಕರ್ ಸಿದ್ಧೀಕ್ ಪಾಣೆಮಂಗಳೂರುರವರ ಮನೆಯಲ್ಲಿ ನಡೆದ ಮೌಲೂದ್ ಮಜ್ಲಿಸ್ ನಲ್ಲಾಗಿತ್ತು ನಮ್ಮ ಮೊದಲ ಭೇಟಿ. ಈ ವ್ಯಕ್ತಿ ಯುಎಇ ಯಲ್ಲಿದ್ದುಕೊಂಡೇ ಊರಲ್ಲಿ ಇಷ್ಟೆಲ್ಲ ಕಾರುಬಾರು ನಡೆಸುತ್ತಿದ್ದಾರೆ ಅಂತ ಆವತ್ತೇ ಗೊತ್ತಾಗಿದ್ದು. ಅಜ್ಮಾನ್ ಝೋನ್ ಕೆಸಿಎಫ್ ನಾಯಕರು ಕಾರ್ಯಕರ್ತರು ಅಂದಿನ ಮಜ್ಲಿಸ್ ನಲ್ಲಿ ಪಾಲ್ಗೊಂಡಿದ್ದರು. ಮಜ್ಲಿಸ್ ಮುಗಿದ ನಂತರ ಮಜ್ಲಿಸ್ ನಲ್ಲಿ ರಾಶ್ ಬ್ಯಾರಿಯವರ ಸಾಮಾಜಿಕ ಸೇವೆಯ ಬಗ್ಗೆ ಚುಟುಕಾಗಿ ಪರಿಚಯಿಸಿದ್ದೆ.
ಅಂದೇ ನಮ್ಮ ಗೆಳೆತನಕ್ಕೂ ಮುನ್ನುಡಿ ಬರೆಯಿತು. ಅದು ನಿರಂತರ ವಾಟ್ಸಾಪ್ ಮುಖಾಂತರ ಮುಂದುವರೆದಿತ್ತು. ಲಾಕ್ ಡೌನ್ ಸಮಯದಲ್ಲಿ ಕೆಲವು ಬಡ ಕುಟುಂಬವನ್ನು ತೋರಿಸಿಕೊಟ್ಟು ಕಿಟ್ ತಲುಪಿಸಿಕೊಡಲು ಹೇಳಿದ್ದೆ. ಒಂದು ವಾರದ ಹಿಂದೆ ಯುಎಇಯಿಂದ ಚಾರ್ಟರ್ಡ್ ವಿಮಾನದಲ್ಲಿ ಯಾತ್ರೆ ಮಾಡಿದ ಗರ್ಭಿಣಿ ಮಹಿಳೆಯೊಬ್ಬರಿಗೆ ಸಹಾಯ ಮಾಡುವಂತೆ ರಾಶ್ ಬ್ಯಾರಿಯವರನ್ನು ಕೇಳಿಕೊಂಡಿದ್ದೆ. ಆ ಮಹಿಳೆಯ ಗಂಡ ತುಂಬಾ ತಿಂಗಳುಗಳಿಂದ ಸಂಬಳವಿಲ್ಲದೆ ಹತಾಶರಾಗಿದ್ದರು. ಪತ್ನಿಯನ್ನು ಊರಿಗೆ ಕಳುಹಿಸಿಕೊಡಲು ಟಿಕೇಟ್ ಹಣ ಹೊಂದಿಸಲು ಸಾಧ್ಯವಾಗದೆ ಕಂಗಾಲಾಗಿದ್ದರು. ಅವರ ಕಷ್ಟಕ್ಕೆ ಮರುಗಿದ ಕೆಸಿಎಫ್ ಮತ್ತು ಐಸಿಎಫ್ ಟಿಕೇಟ್ ವ್ಯವಸ್ಥೆ ಮಾಡಿಕೊಟ್ಟಿತ್ತು. ಆದರ ನಂತರ ಏಳು ದಿನಗಳಿಗೆ ಕ್ವಾರಿಂಟಿನ್ ಗೆ ಹಣ ಒಗ್ಗೂಡಿಸಿ ಕೊಡುವುದು ಕೂಡ ಅವರಿಗೆ ಕಷ್ಟವಾಗಿತ್ತು. ಅದಕ್ಕಾಗಿ ಆ ಮಹಿಳೆಯ ಪತಿ ನಿರಂತರ ಮೆಸೇಜ್ ಮಾಡಿ ಗಂಟಲು ಧ್ರವ ಪರೀಕ್ಷೆಗೆ ಅಧಿಕಾರಿಗಳನ್ನು ಕೈರಳಿ ಹೋಟಲ್ ಗೆ ಕಳುಹಿಸಿಕೊಡುವಂತೆ ಒತ್ತಡ ಹೇರುತ್ತಿದ್ದರು. ಅಧಿಕಾರಿಗಳಿಗೆ ಒತ್ತಡ ಹೇರವುದು ಆಸಾಧ್ಯ ಎಂದು ಹೇಳಿದಾಗ, ನನ್ನಲ್ಲಿ ಕ್ವಾರಿಂಟಿನ್ ಗೆ ಕೊಡಲು ಹಣವಿಲ್ಲ ಎಂದು ಹೇಳಿದರು. ಅದಿಕಾರಿಗಳು ಆದಷ್ಟು ಬೇಗ ಬಂದರೆ ಬೇಗ ಮನೆಗೆ ಹೋಗಬಹುದಲ್ಲವೇ ಎಂಬುದು ಅವರ ಅಭಿಲಾಷೆಯಾಗಿತ್ತು. ಅಗ ಕ್ವಾರೈಂಟೇನ್ ಬಿಲ್ ಕೂಡ ಕಡಿಮೆಯಾಗುತ್ತದೆ.
ಪ್ರತೀ ದಿನವೂ ಅದೇ ರೀತಿ ಮೆಸೇಜ್ ಮಾಡಿದಾಗ, ಕ್ವಾರಿಂಟಿನ್ ಪೇಯ್ಮೆಂಟ್ ಗೆ ಏನಾದರೂ ವ್ಯವಸ್ಥೆ ಮಾಡೋಣ. ಸ್ವಲ್ಪ ಸಮಯ ಕೊಡಿ ಎಂದು ಕೇಳಿಕೊಂಡೆ. ಯಾರಲ್ಲಿ ಕೇಳುವುದು? ಎಲ್ಲರೂ ತುಂಬಾ ಕಷ್ಟದಲ್ಲಿದ್ದಾರೆ. ವ್ಯಾಪಾರ ವಹಿವಾಟು ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಜನ ಪರದಾಡುತ್ತಿದ್ದಾರೆ. ಫೇಸ್ಬುಕ್ ನಲ್ಲಿ ಒಂದು ಪೋಸ್ಟ್ ಹಾಕಲೇ ಎಂದು ಆಲೋಚಿಸುತ್ತಿದ್ದೆ. ಯಾರಾದರೂ ಸಹಾಯ ಮಾಡಬಹುದು. ಆವಾಗಲೇ ರಾಶ್ ಬ್ಯಾರಿಯವರು ಯಾವುದೋ ಒಂದು ವಿಷಯವನ್ನು ಪ್ರಸ್ತಾಪಿಸಲು ಸಂಪರ್ಕಿಸಿದರು.
ಅಲ್ ಹಂದುಲಿಲ್ಲಾಹ್… ಒಳಿತಿನ ಕೆಲಸಕ್ಕೆ ಖಂಡಿತವಾಗಿಯೂ ಅಲ್ಲಾಹನ ಸಹಾಯವಿದೆ ಅಂದುಕೊಂಡು ಅವರಲ್ಲಿ ವಿಷಯ ತಿಳಿಸಿದೆ. ಕೂಡಲೇ ರಾಶ್ ಬ್ಯಾರಿಯವರು ಇಂಷಾ ಅಲ್ಲಾಹ್… ನಮ್ಮ ಟೀಂನಲ್ಲಿ ಮಾತನಾಡುತ್ತೇನೆ. ಯಾರಾದರೂ ಸಹಾಯ ಮಾಡಬಹುದು ಎಂದು ಭರವಸೆ ನೀಡಿದರು. ಅಲ್ಲಾಹನಿಗೆ ಶುಕ್ರ್ ಹೇಳಿ ಕೆಲವೇ ನಿಮಿಷಗಳಲ್ಲಿ ರಾಶ್ ಬ್ಯಾರಿಯವರ ಮೆಸೇಜ್ ಬಂತು. ಆ ಮಹಿಳೆಯ ಮಾಹಿತಿ ಕೊಡಿ ಎಂದು ಕೇಳಿದರು. ಹೋಟೆಲ್ ಹೆಸರು ರೂಂ ನಂಬರ್ ಮತ್ತು ಅವರ ಪತಿಯ ನಂಬರ್ ಕೊಟ್ಟುಬಿಟ್ಟೆ. ರಾಶ್ ಬ್ಯಾರಿಯವರ ತಂಡದ ಸದಸ್ಯ ರಾಝಿಕ್ ಎಂಬವರು ಕ್ವಾರೈಂಟಿನ್ ಸಂಪೂರ್ಣ ವೆಚ್ಛವನ್ನು ಭರಿಸುವುದಾಗಿ ಒಪ್ಪಿಕೊಂಡಿದ್ದನ್ನು ತಿಳಿಸಿದರು.
ಮತ್ತೆರಡು ದಿನಗಳಲ್ಲಿ ಆ ಗರ್ಭಿಣಿ ಮಹಿಳೆಯು ಕ್ವಾರಿಂಟಿನ್ ಮುಗಿದು ಹೋಗುವಾಗ ರಾಝಿಕ್ ರವರು ಹೋಟೆಲ್ ಬಿಲ್ ಪಾವತಿಸಿ ಕಳುಹಿಸಿಕೊಟ್ಟರು. ಅಸಾಹಾಯಕರಾಗಿ ಕುಳಿತಿದ್ದ ಆ ಕುಟುಂಬಕ್ಕೆ ರಾಶ್ ಬ್ಯಾರಿಯವರ ಮುಖಾಂತರ ಸ್ನೇಹಿತ ರಾಝಿಕ್ ಮಾಡಿದ ಈ ಸಹಾಯಕ್ಕೆ ಅವರು ತಂಬು ಹೃದಯದಿಂದ ಕೃತಜ್ಞತೆ ಸಲ್ಲಿಸಿದರು. ನಿಜಕ್ಕೂ ಈ ಸೇವೆಯ ಬಗ್ಗೆ ಬರೆಯಬೇಕು. ಯುವಕಾರ್ಯಕರ್ತರನ್ನು ಸಮಾಜಿಕ ಸೇವೆಗೆ ಹುರಿದುಂಬಿಸಬೇಕು ಎಂದು ಅಂದುಕೊಂಡಿದ್ದರೂ ಸಮಯದ ಅಭಾವದಿಂದ ಬರೆಯಲು ಸಾಧ್ಯವಾಗಿರಲಿಲ್ಲ. ಆ ಗೆಳೆಯನ ಸಹಾಯ ಅಲ್ಲಾಹು ಸ್ವೀಕರಿಸಲಿ. ಕಷ್ಟಕ್ಕೆ ಮರುಗಿ ಸಹಾಯ ಮಾಡುವ ಇನ್ನಷ್ಟು ಯುವಕರು ಬೆಳೆದು ಬರಲಿ. ರಾಶ್ ಬ್ಯಾರಿರವರ ಬ್ಯಾರಿ ನಿಕಾಹ್ ಹೆಲ್ಪ್ ಲೈನ್ ಉತ್ತಮ ಸೇವೆಗಳ ಗುರಿಯೊಂದಿಗೆ ಮುನ್ನುಗ್ಗಿ ಸಾಗಲಿ ಎಂದು ಹಾರೈಸುತ್ತಿದ್ದೇನೆ. ನಿಮ್ಮೆಲ್ಲರ ದುಆದಲ್ಲಿ ರಾಝಿಕ್ ರವರನ್ನು ಮತ್ತು ತಂಡವನ್ನು ಸೇರಿಸಲು ಕೇಳಿಕೊಳ್ಳುತ್ತಿದ್ದೇನೆ.
✍🏻 Nizzu4ever ಉರುವಾಲು ಪದವು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.