(ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕಿದ ಸಮಯವನ್ನು ಪೋಲು ಮಾಡದೇ, ಪ್ರೊ. ಎಂ. ಅಬೂಬಕರ್ ತುಂಬೆ ಅವರು ಹಲವಾರು ಪ್ರಮುಖ ಹದೀಸ್ ಗಳನ್ನು ಕನ್ನಡಕ್ಕೆ ಅನುವಾದ ಮಾಡಿರುತ್ತಾರೆ.
ಹದೀಸ್ ಗಳ ಕನ್ನಡ ಅನುವಾದಗಳನ್ನು ವಿಶ್ವ ಕನ್ನಡಿಗ ನ್ಯೂಸ್ ತಮ್ಮ ಓದುಗರಿಗಾಗಿ “ಹದೀಸ್ ದರ್ಶನ” ಎಂಬ ತಲೆಬರಹದಲ್ಲಿ “ಪ್ರತಿ ಬುಧವಾರ” ಪ್ರಕಟಿಸುತ್ತಿದೆ… ತಪ್ಪದೆ ಓದಿ…
حَدَّثَنَاأَبُوبَكْرِبْنُ أَبِيشَيْبَةَ،حَدَّثَنَاأَبُوالأَحْوَصِ،عَنْأَبِيإِسْحَاقَ،عَنِ الْبَرَاءِبْنِعَازِبٍ،قَالَصَلَّيْتُمَعَالنَّبِيِّصلىاللهعليه وسلمإِلَىبَيْتِالْمَقْدِسِسِتَّةَعَشَرَشَهْرًاحَتَّىنَزَلَتِ الآيَةُالَّتِيفِيالْبَقَرَةِ{وَحَيْثُمَاكُنْتُمْفَوَلُّواوُجُوهَكُمْشَطْرَهُ} فَنَزَلَتْبَعْدَمَاصَلَّىالنَّبِيُّصلىاللهعليهوسلمفَانْطَلَقَ رَجُلٌمِنَالْقَوْمِفَمَرَّبِنَاسٍمِنَالأَنْصَارِوَهُمْيُصَلُّونَ فَحَدَّثَهُمْفَوَلَّوْاوُجُوهَهُمْقِبَلَالْبَيْتِ.
13.ಅಲ್-ಬರಾ ‘ಬಿನ್. ‘ಆಜಿಬ್ (ರ) ವರದಿ: ಸೂರಾ ಅಲ್ ಬಕ್ವರ: ೧೪೪ ನೆ ಆಯತಿನಲ್ಲಿ ತಿಳಿಸಿದಂತೆ “ಆದ್ದರಿಂದ ನೀವು ಇಷ್ಟಪಡುವ ಖಿಬ್ಲಾದತ್ತ ನಿಮ್ಮನ್ನು ತಿರುಗಿಸುತ್ತಿದ್ದ್ದೇವೆ” ಎಂಬ ವಚನವು ಬಹಿರಂಗಗೊಳ್ಳುವವರೆಗೂ ಹದಿನಾರು ತಿಂಗಳುಗಳ ಕಾಲ ಧರ್ಮಪ್ರಚಾರಕರಾದ ಅಲ್ಲಾಹುವಿನ ಪ್ರವಾದಿ (ﷺ) ಅವರೊಂದಿಗೆ ಬೈತುಲ್ ಮುಖದ್ದಿಸ್ನ ಕಡೆಗೆ ತಿರುಗಿ ನಮಾಜನ್ನು ನಿರ್ವಹಿಸಿದೆ. ತನ್ನ ಜನರಲ್ಲಿ ಒಬ್ಬ ವ್ಯಕ್ತಿಯು ಪ್ರಾರ್ಥನೆಯಲ್ಲಿ ನಿರತರಾಗಿದ್ದ ಅನ್ಸಾರ್ ಜನರ ಮಧ್ಯೆ ಹಾದುಹೋದರು. ಆಗ ಅವರು ಅವರಿಗೆ (ಅಲ್ಲಾಹನ ಈ ಆಜ್ಞೆಯನ್ನು) ವಿವರಿಸಿದರು ಮತ್ತು ಅವರು ತಮ್ಮ ಮುಖಗಳನ್ನು ಪವಿತ್ರ ಕಹಬಾದ ಕಡೆಗೆ ತಿರುಗಿಸಿದರು.
وَحَدَّثَنِي زُهَيْرُبْنُحَرْبٍ،حَدَّثَنَايَحْيَىبْنُسَعِيدٍ،حَدَّثَنَا هِشَامٌ،أَخْبَرَنِيأَبِي،عَنْعَائِشَةَ،أَنَّأُمَّحَبِيبَةَ، وَأُمَّسَلَمَةَذَكَرَتَاكَنِيسَةًرَأَيْنَهَابِالْحَبَشَةِ – فِيهَا تَصَاوِيرُ – لِرَسُولِاللَّهِصلىاللهعليهوسلمفَقَالَرَسُولُ اللَّهِصلىاللهعليهوسلم”إِنَّأُولَئِكِإِذَاكَانَ فِيهِمُالرَّجُلُالصَّالِحُفَمَاتَبَنَوْاعَلَىقَبْرِهِمَسْجِدًا وَصَوَّرُوافِيهِتِلْكَالصُّوَرَأُولَئِكِشِرَارُالْخَلْقِعِنْدَ اللَّهِيَوْمَالْقِيَامَةِ”
14.’ಹಜ್ರತ್ ಆಯಿಷಾ (ರ) ವರದಿ: ಉಮ್ಮು ಹಬೀಬಾ ಮತ್ತು ಉಮ್ಮು ಸಲಾಮಾ ಅವರು ಅಬಿಸ್ಸಿನಿಯಾದಲ್ಲಿ ನೋಡಿದ ಮತ್ತು ಅದರಲ್ಲಿ ಚಿತ್ರಗಳನ್ನು ಹೊಂದಿರುವ ಚರ್ಚ್ನ ಬಗ್ಗೆ ಅಲ್ಲಾಹುವಿನ ಪ್ರವಾದಿ (ﷺ) ಅವರ ಮುಂದೆ ಪ್ರಸ್ತಾಪಿಸಿದರು. ಆಗ ಅಲ್ಲಾಹುವಿನ ಪ್ರವಾದಿ (ﷺ) ಹೇಳಿದರು: ಅವರಲ್ಲಿ ಒಬ್ಬ ಧಾರ್ಮಿಕ ವ್ಯಕ್ತಿಸತ್ತಾಗ ಅವರು ಅವನ ಸಮಾಧಿಯಲ್ಲಿ ಪ್ರಾರ್ಥನಾ ಸ್ಥಳವನ್ನಾಗಿ ನಿರ್ಮಿಸುತ್ತಾರೆ ಮತ್ತು ನಂತರ ಅದನ್ನು ಅಂತಹ ಚಿತ್ರಗಳಿಂದ ಅಲಂಕರಿಸುತ್ತಾರೆ. ಅವರು ತೀರ್ಪಿನ ದಿನದಂದು ಅಲ್ಲಾಹನ ದೃಷ್ಟಿಯಲ್ಲಿ ಜೀವಿಗಳಲ್ಲಿ ನಿಕೃಷ್ಟರಾಗಿರುತ್ತಾರೆ ಎಂದು ಹೇಳಿದರು.
ಕನ್ನಡಕ್ಕೆ ಅನುವಾದ : ಪ್ರೊ. ಎಂ. ಅಬೂಬಕರ್ ತುಂಬೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.