ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಉಳ್ಳಾಲದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಾ ಬದುಕುತ್ತಿದ್ದ ಅಲ್ತಾಫ್ ಎಂಬವರ ಒಂದುವರೆ ವರ್ಷದ ಪುಟಾಣಿ ಮಗಳು ಆಯಿಷಾ ಅನ್ನತ್ ರ ಹೃದಯ ಶಸ್ತ್ರ ಚಿಕಿತ್ಸೆ ಅಲ್ಲಾಹನ ಅನುಗ್ರಹದಿಂದ ಯಶಸ್ವಿಯಾಗಿ ನಡೆದಿದೆ.
ಮಗುವಿನ ಶ್ವಾಸಕೋಶದ ರಕ್ತನಾಳದಲ್ಲಿ ಇದ್ದ ಸಮಸ್ಯೆಯನ್ನು ನಿವಾರಿಸಲು ಇಂಡಿಯಾನ ಆಸ್ಪಿಟಲ್ ನ ವೈಧ್ಯರು ನಡೆಸಿದ ಆಪರೇಶನ್ ನಂತರ ಗುಣಮುಖವಾದ ಮಗುವು ನಿನ್ನೆ ಡಿಸ್ಚಾರ್ ಆಗಿ ಮನೆ ಸೇರಿದೆ.
ಆ ಮಗುವಿನ ಆರೋಗ್ಯದ ಜೊತೆ, ನಗುವು ನಲಿವಿಗೂ ಹಲವರು ಸಹಕರಿಸಿದ್ದೀರಿ. ಆ ಮಗುವಿನ ಕುಟುಂಬದ ಪ್ರಾರ್ಥನೆಯಲ್ಲಿ ನಿಮಗೂ ಪುಣ್ಯದ ಪಾಲು ಇದೆ. ಕೇವಲ, ದೇವನ ಸಂಪ್ರೀತಿ ಗಳಿಸಲು ತಾವೆಲ್ಲರೂ ನೆರವಾಗಿದ್ದೀರಿ. ಆಯಿಷಾ ಅನ್ನತ್ ಎಂಬ ಪುಟಾಣಿ ಕಂದಮ್ಮಳಿಗೆ ಹೊಸ ಬಾಳು ನೀಡಲು ದೇವನ ಕೃಪೆಯಿಂದ ದಾನ ನೀಡಿದ ಎಲ್ಲರಿಗೂ ಅದರ ಪ್ರತಿಫಲ ಸಿಗಲಿದೆ.
ಬಹಳ ತ್ರಾಸದ ಸಮಯ, ಸಂಕಟ ಮತ್ತು ಅಸಾಹಯಕವಾಗಿದ್ದ ಸಂದರ್ಭದಲ್ಲಿ ನೆರವು ತಲುಪಿಸಿ ಆ ಮಗುವಿನ ಸಂಸಾರಕ್ಕೆ ನೆರವಾದ ಎಲ್ಲರ ಸಂಸಾರದಲ್ಲೂ ಸುಖ – ಸಂತೃಪ್ತಿ- ನೆಮ್ಮದಿ ಇರಲಿ, ನಿಮಗೆ ಇನ್ನಷ್ಟೂ ದಾನ ನೀಡಲು ಅಲ್ಲಾಹನು ಅನುಗ್ರಹ ಕೊಡಲಿ. ನೋಡಿ, ನಾವು ಒಂದು ಸಣ್ಣ ನೆರವನ್ನು ತಲುಪಿಸಿದೆವು. ಅದರ ಪ್ರತಿಫಲ ಎಷ್ಟು ಮಧುರವಾಯಿತು. ಇದೇ ಅಲ್ಲವೇ ಜೀವನ. ಪರಸ್ಪರ ಮಾನವೀಯ ಸಂಬಂಧವನ್ನು ಜೀವಂತ ಇರಿಸುವುದೇ ಟೀಂ ಬಿ ಹ್ಯೂಮನ್ ತಂಡದ ಉದ್ದೇಶ.
ಈಗಾಗಲೇ ಆಸ್ಪೆತ್ರೆಯಲ್ಲಿ ಎಸ್ಟೀಮೇಟ್ ಬಿಲ್ 3.5 ಲಕ್ಷದ ಕುರಿತಂತೆ ನಮ್ಮ ತಂಡ ಮಾತನಾಡಿ ಅದನ್ನು 1.5 ಲಕ್ಷಕ್ಕೆ ನಿಲ್ಲಿಸಿತು. ನಾವು ಕಲೆಕ್ಷನ್ ಮಾಡಿರುವುದು ಒಟ್ಟು ಎರಡು ಲಕ್ಷ ಹನ್ನೆರಡು ಸಾವಿರದ ಐನೂರು, ಬಾಕಿ ಉಳಿದದ್ದು 62500. ನಮ್ಮ ತಂಡವು ಬೇರೆ ಬೇರೆ ಮೂಲಗಳ ಮೂಲಕ ನಡೆಸಿದ ಒತ್ತಾಯ, ವಿನಂತಿ ಮತ್ತು ಶಿಫಾರಸಿನ ಕಾರಣ ಬಿಲ್ಲ್ ಮೊತ್ತ ಅಷ್ಟು ಕಡಿಮೆ ಆಯಿತು. ಉಳಿದ ಹಣವು ನಮ್ಮ ಖಾತೆಯಲ್ಲಿ ಇರುತ್ತದೆ. ಇನ್ನು ಮುಂದೆ ಮಗುವಿನ ಚಿಕಿತ್ಸೆಗೆ ನಮ್ಮ ನೆರವು ಇದ್ದೇ ಇದೆ. ಹಾಗೇ, ಉಳಿದ ಮೊತ್ತ ಅಗತ್ಯ ಬಿದ್ದರೆ ಬೇರೊಂದು ರೋಗಿಯ ಚಿಕಿತ್ಸೆಗೆ ಕೊಡಲು ತಮ್ಮ ಅಪ್ಪಣೆಯೂ ಇದೆ ಎಂದು ಬಾವಿಸುತ್ತೇವೆ.
ಒಳಿತು ಮಾಡಲು ದಾರಿ ಯಾವುದಾದರೇನು ಪುಣ್ಯ ಅಲ್ಲಾಹನ ಬಳಿ ಇದೆಯಲ್ಲವೇ ? ದೇವನು ಅತ್ಯುತ್ತಮ ಲೆಕ್ಕಪರಿಶೋಧಕನು. ಅವನು ನಮ್ಮ ಉದ್ದೇಶವನ್ನು ನೋಡಿ ಪ್ರತಿಫಲ ಕೊಡುತ್ತಾನೆ. ನಿಮ್ಮ ಉದ್ದೇಶಕ್ಕೆ ಪ್ರತಿಫಲ ಸಿಕ್ಕಿದೆ. ಹಾಗೇ ನಮ್ಮ ಕಾರ್ಯಾಚರಣೆ ಹೀಗೇ ಜನರ ಪ್ರಾರ್ಥನೆಯನ್ನು ಪಡೆಯುವಲ್ಲಿ ಇರಲಿ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.