ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಿನಾಂಕ: 28-07-2020ನೇ ಮಂಗಳವಾರದಂದು ಜಿಲ್ಲಾಡಳಿತದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಚೇರಿಗೆ 2 ಗಾಳಿತುಂಬಬಹುದಾದ ಹಾಗೂ ಸುಲಭವಾಗಿ ಸಾಗಿಸಬಹುದಾದ ಬೋಟುಗಳನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರುರವರು ಪ್ರವಾಹ ರಕ್ಷಣಾ ಸಂದರ್ಭದಲ್ಲಿ ಈ ಬೋಟುಗಳು ಸಹಾಯವಾಗಿರುತ್ತದೆ ಎಂದು ತಿಳಿಸಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇದರ ವಿಜಯವಾಡ ಘಟಕದ ಮುಖ್ಯ ಸಮಾದೇಷ್ಟರಾದ ಶ್ರೀ ಗೋಪಾಲ್ಲಾಲ್ ವಿೂನಾ ಇವರು ಮಳೆಗಾಲದ ಸಂದರ್ಭದಲ್ಲಿ ನೆರೆ ಬಂದಾಗ ಜನರನ್ನು ಸ್ಥಳಾಂತರಿಸಲು ಈ ಬೋಟುಗಳು ಉಪಯೋಗವಾಗುತ್ತದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ವಿಜಯ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಉಪ ಸಮಾದೇಷ್ಟರಾದ ರಮೇಶ್, ಕಚೇರಿಯ ಅಧೀಕ್ಷಕರಾದ ರತ್ನಾಕರ್ ಹಾಗೂ ಎನ್ಡಿಆರ್ಎಫ್ನ ಸಿಬ್ಬಂದಿಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.