(www.vknews.com) : ಪ್ರತಿಯೊಬ್ಬರಿಗೂ ಬದುಕಲ್ಲಿ ಸಮಸ್ಯೆಗಳು ಬಂದಾಗ ಆತ್ಮಹತ್ಯೆಯೊಂದೇ ಪರಿಹಾರ ಎಂದು ತಿಳಿದು ಸಾಯುವ ನಿರ್ಧಾರ ಮಾಡಿಬಿಡುತ್ತಾರೆ ಆದರೆ ಅದೊಂದೇ ಪರಿಹಾರವಲ್ಲ ಎಂದು ತಿಳಿಸು ಸಾಮಾಜಿಕ ಕಳಕಳಿ ಹೊಂದಿರುವ ಕಿರುಚಿತ್ರ “ಮನಸಾಕ್ಷಿ” ನೇಸರ ಪ್ರೋಡಕ್ಷನ್ ಮೂಲಕ ನಿರ್ಮಾಣಗೊಂಡು ಪ್ರಣವ ಭಟ್ ಪುತ್ತೂರು ಇವರ ಕಥೆ ಹಾಗೂ ನಿರ್ದೇಶನದಲ್ಲಿ ನೇಸರ ಪ್ರೋಡಕ್ಷನ್ ಯೂಟ್ಯೂಬ್ ಚೆನೆಲ್ ಮೂಲಕ ಬಿಡುಗಡೆಯಾಗಿ ಜನರಿಗೆ ಒಂದು ಸುಂದರ ನೀತಿಯ ಮೂಲಕ ತನ್ನ ಕಥೆಯನ್ನು ಹೇಳುತ್ತಾ ಹೋಗುತ್ತದೆ.
ನಿರ್ದೇಶಕ – ಪ್ರಣವ ಭಟ್
ಒಬ್ಬ ಮನುಷ್ಯ ತಾನು ಅಪ್ಪ ಅಮ್ಮ ವಯಸ್ಸದರೆಂದು ವೃದ್ಧಾಶ್ರಮಕ್ಕೆ ಕಳುಹಿಸಿ ಹೆಂಡತಿಯೊಂದಿಗೆ ಸಣ್ಣ ಕಾರಣಕ್ಕೆ ಜಗಳವಾಡಿ ಡೈವೋರ್ಸ್ ನೀಡಿ ಕೊನೆಗೆ ಒಂಟಿಯಾಗಿ ಬದುಕು ನಡೆಸಲು ಆಗದೆ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡುತ್ತಾನೆ ಇದು ನಮಗೆ ಮನುಷ್ಯ ತಾನೇ ಸಮಸ್ಯೆಗಳನ್ನು ಸೃಷ್ಟಿಸಿ ಅದರೊಂದಿಗೆ ಬದುಕು ನಡೆಸಲು ಆಗದೆ ಸಾಯುವ ನಿರ್ಧಾರ ಮಾಡುತ್ತಾನೆ ಆದರೆ ಮುಂದೆ ಈ ಕಥೆ ತಿರುವು ಪಡೆದುಕೊಳ್ಳುತ್ತದೆ ಯಾರೋ ಒಬ್ಬ ಸಾಯುವ ಮನುಷ್ಯನನ್ನು ತಡೆದು ಅವನಿಗೆ ಒಂದೊಂದೇ ನೆನಪುಗಳನ್ನ ತಿಳಿಸುತ್ತಾ ಅಪ್ಪ ಅಮ್ಮನ ಪ್ರೀತಿ ಹೆಂಡತಿ ಸಣ್ಣ ಮಗಳ ಪ್ರೀತಿಯನ್ನು ನೆನಪಿಸುತ್ತಾ ಅವನಿಗೆ ತನ್ನ ತಪ್ಪಿನ ಅರಿವು ಮಾಡಿಸಿ ಮತ್ತೆ ಎಲ್ಲಾರನ್ನು ಒಂದಾಗುವ ಹಾಗೇ ಸಮಸ್ಯೆಗೆ ಪರಿಹಾರ ನೀಡುತ್ತೇನೆ ಆದರೆ ಕೊನೆಗೆ ತಿಳಿಯುತ್ತದೆ ಸಾಯುವ ನಿರ್ಧಾರ ತಪ್ಪಿಸುವಂತೆ ಮಾಡಿದ್ದು ಅವನ ಒಳ ಮನಸ್ಸು ಮನುಷ್ಯನ ರೂಪದಲ್ಲಿ ಬಂದು ತಿಳಿಸಿತು ಈ ರೀತಿ ಕಥೆಯ ಹಂದರ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ ತಿರುವುಗಳ ಮೂಲಕ ನಮ್ಮಲ್ಲಿ ಕುತುಹಲ ಮೂಡಿಸುತ್ತದೆ.
ಈ ಕಿರುಚಿತ್ರ ಕಥೆ-ನಿರ್ದೇಶನ ಪ್ರಣವ ಭಟ್ ಮಾಡಿದ್ದು ಇವರು ಅನೇಕ ಸಾಮಾಜಿಕ ಕಳಕಳಿ ಹೊಂದಿರುವ ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ನಟನೆ ಕೂಡ ಮಾಡಿದ್ದಾರೆ ಮತ್ತು ಶ್ರೀರಾಮ್ ಅವರು ಮತ್ತೋಂದು ಮುಖ್ಯವಾದ ಪಾತ್ರವಹಿಸಿದ್ದು ಆದಿತ್ಯ ಹಾಗೂ ವಿನೀತ್ ಕ್ಯಾಮೆರಾ ಕೆಲಸ ನಿರ್ವಹಣೆ ಮಾಡಿದ್ದು ಶೈಲೇಶ್ ಎಂಬವರು ಎಡಿಟಿಂಗ್ ಮಾಡಿರುತ್ತಾರೆ.ನೀವು ಈ ಕಿರುಚಿತ್ರವನ್ನು ನೇಸರ ಪ್ರೋಡಕ್ಷನ್ ಯೂಟ್ಯೂಬ್ ಚೆನಲ್ ಮೂಲಕ ನೋಡಬಹುದು ಹಾಗೂ ಈ ವರೆಗೆ ಮಾಡಿದ ಇನ್ನೂ ಅನೇಕ ಸಾಮಾಜಿಕ ಕಳಕಳಿ ಹೊಂದಿರುವ ಜನರ ಮೆಚ್ಚುಗೆ ಗಳಿಸಿದ ಕಿರುಚಿತ್ರಗಳನ್ನು ನೀವು ನೋಡಿ ಯುವ ತಂಡವನ್ನು ಪ್ರೋತ್ಸಾಹಿಸಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.