ಕುಂದಾಪುರ(ವಿಶ್ವಕನ್ನಡಿಗ ನ್ಯೂಸ್): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕುಂದಾಪುರ ತಾಲೂಕು ಯೋಜನಾ ಕಚೇರಿಯಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಪರಿಸರ ಉಳಿಸಿ- ಬೆಳೆಸಿರಿ ಎಂಬ ಶಿರ್ಷಿಕೆಯಡಿಯಲ್ಲಿ ಎಲ್ಲಾ ಸಿಬ್ಬಂದಿಯವರಿಗೆ ಗಿಡ ವಿತರಣೆಯನ್ನು ಉಡುಪಿ ಜಿಲ್ಲಾ ನಿರ್ದೇಶಕರಾದ ಗಣೇಶ್.ಬಿ ಯವರು ನೆರವೇರಿಸಿದರು.
ಈ ಸಂದರ್ಭ ಏಕನಾಥೇಶ್ವರ ಭಜನಾ ಮಂಡಳಿ ಮದ್ದುಗುಡ್ಡೆ ಇಲ್ಲಿನ ಸದಸ್ಯರು ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿಗಳಾದ ಮುರಳೀಧರ ಕೆ ಶೆಟ್ಟಿ, ಕಚೇರಿ ಪ್ರಬಂಧಕರಾದ ಗಂಗಾಧರ ಕಾರ್ವಿ, ಸಹಾಯಕ ಪ್ರಬಂಧಕರಾದ ಶ್ರೀಮತಿ ರೇವತಿ , ಕೃಷಿಅಧಿಕಾರಿ,ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಆಂತರಿಕ ಲೆಕ್ಕಪರಿಶೋಧಕರು, ಮೇಲ್ವಿಚಾರಕರು, ನಗದು ಸಂಗ್ರಾಹಕರು, ಕಚೇರಿ ಸಹಾಯಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.