ಸಿಇಟಿ 2020 – ಪರೀಕ್ಷಾ ಹಾಜರಾತಿ
ಮಂಗಳೂರು (www.vknews.com) : ದ.ಕ. ಜಿಲ್ಲೆಯಲ್ಲಿಜುಲೈ 31ರಂದು ಬೆಳಿಗ್ಗೆ ನಡೆದ ಸಿಇಟಿ-2020 ಭೌತಶಾಸ್ತ್ರಪರೀಕ್ಷೆಗೆ6,683 ವಿದ್ಯಾರ್ಥಿಗಳು ಹಾಜರಾಗಿದ್ದು, 951 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಮಧ್ಯಾಹ್ನ ನಡೆದರಸಾಯನಶಾಸ್ತ್ರ ಪರೀಕ್ಷೆಗೆ 6,676 ವಿದ್ಯಾರ್ಥಿಗಳು ಹಾಜರಾಗಿದ್ದು, 958 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆಎಂದುದ.ಕ.ಜಿಲ್ಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಆಗಸ್ಟ್ 13 ರಂದುತಾಲೂಕು ಪಂಚಾಯತ್ ಸಾಮಾನ್ಯ ಸಭೆ
ಮಂಗಳೂರು ತಾಲೂಕು ಪಂಚಾಯತ್ನ 21 ನೇ ಸಾಮಾನ್ಯ ಸಭೆಆಗಸ್ಟ್ 13 ರಂದು ಬೆಳಿಗ್ಗೆ 10.30 ಗಂಟೆಗೆತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಮಂಗಳೂರು ವಿ.ವಿ ಶೈಕ್ಷಣಿಕ ಮಂಡಳಿ ಸಭೆ
ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ 2020-21 ನೇ ಸಾಲಿನ ಪ್ರಥಮ ವಿಶೇಷ ಸಭೆಆಗಸ್ಟ್ 4 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿಯ ಆಡಳಿತ ಸೌಧದರಾಣಿಅಬ್ಬಕ್ಕ (ಹೊಸ ಸೆನೆಟ್) ಸಭಾಂಗಣದಲ್ಲಿ ನಡೆಯಲಿದೆ.
ಕಂಟೈನ್ಮೆಂಟ್ ವಲಯಗಳಿಗೆ ಜಿಲ್ಲಾಧಿಕಾರಿ ಭೇಟಿ
ನೂತನಜಿಲ್ಲಾಧಿಕಾರಿಡಾ.ಕೆ.ವಿರಾಜೇಂದ್ರಅವರುಶುಕ್ರವಾರ ಮಹಾನಗರಪಾಲಿಕೆ ವ್ಯಾಪ್ತಿಯಕಂಟೈನ್ಮೆಂಟ್ ವಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳಾದೇವಿ ಪರಿಸರದಕಂಟೈನ್ಮೆಂಟ್ ವಲಯಕ್ಕೆ ಭೇಟಿ ನೀಡಿದಅವರುಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಸೂಚನೆಗಳನ್ನು ನೀಡಿದರು. ಸ್ಥಳೀಯ ಮಟ್ಟದ ಅಧಿಕಾರಿಗಳು ಕಂಟೈನ್ಮೆಂಟ್ ವಲಯದಲ್ಲಿ ನಿಗಾ ಇಡುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಪ್ರಭಾರಆಯುಕ್ತ ದಿನೇಶ್ಕುಮಾರ್, ಉಪವಿಭಾಗಾಧಿಕಾರಿ ಮದನ್ ಮೋಹನ್, ತಹಶೀಲ್ದಾರ್ ಗುರುಪ್ರಸಾದ್ ಮತ್ತಿತರರು ಇದ್ದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ – ಅರ್ಜಿ ಆಹ್ವಾನ
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ 2020-21 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರಿಂದ ಪ್ರಸ್ತಾವನೆಗಳನ್ನು ಸಲ್ಲಿಸಲು ಆನ್ಲೈನ್ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತಾವನೆಗಳನ್ನು ಸಲ್ಲಿಸಲು ಜುಲೈ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್: http://www.schooleducation.kar.nic.in ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಬೆಳ್ತಂಗಡಿ- ಕೈಗಾರಿಕಾ ಘಟಕಗಳಿಗೆ- ಮಳಿಗೆ ಅರ್ಜಿ ಆಹ್ವಾನ
ಮಂಗಳೂರು ಜುಲೈ 30 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ವಿವಿಧ ವಿಭಾಗ, ಶಾಖಾ ಕಚೇರಿಗಳ ವ್ಯಾಪ್ತಿಯಲ್ಲಿ ಖಾಲಿ ಇವರು ವಿಶ್ವ ಮಳಿಗೆಗಳನ್ನು ಹಂಚಿಕೆಗಾಗಿ ಆಸಕ್ತ ಉದ್ದಿಮೆದಾರರುಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 14 ಕೊನೆಯ ದಿನ. ವಿಶ್ವ ಕಾರ್ಯಾಗಾರವನ್ನು ವಿಶ್ವ ಯೋಜನೆಯಡಿ ನಿರ್ಮಿಸಲಾಗಿದ್ದು, ಮಳಿಗೆಯನ್ನು ಎಲ್ಲಿ ಹೇಗಿದೆಯೋ ಹಾಗೆ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ನಿವೇಶನದ ಜಾಗವು ನಿಗಮಕ್ಕೆ, ಗ್ರಾಮ ಪಂಚಾಯಿತಿ, ಸರ್ಕಾರಿ ಇಲಾಖೆ, ಖಾಸಗೀಯವರಿಗೆ ಸೇರಿದ್ದಾಗಿದ್ದು ಅದರಂತೆ ನಿವೇಶನದ ಮೌಲ್ಯವನ್ನು ನಿಗಧಿಪಡಿಸಲಾಗುವುದು, ಅಂತಯೇ ನಿಗಧಿಪಡಿಸುವ ನಿವೇಶನದ ಮೌಲ್ಯವನ್ನು ಪ್ರತ್ಯೇಕವಾಗಿ ನಿಗಮಕ್ಕೆ ಭರಿಸಬೇಕಾಗುತ್ತದೆ.
ಖಾಲಿ ಇರುವ ಮಳಿಗೆ ವಿವರ ಇಂತಿವೆ: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಾವುರು ಎಂಬಲ್ಲಿ 1500 ಚದರ ಅಡಿಗಳಲ್ಲಿ ರೂ. 2,22,500 ಮಳಿಗೆ ಮೌಲ್ಯ/ ನಿವೇಶನದ ಮೌಲ್ಯ ಹೊರತುಪಡಿಸಿ ಸಾಮಾನ್ಯ ವರ್ಗದವರಿಗೆ ಭದ್ರತಾ ಠೇವಣಿ ರೂ.22,500 ಹಾಗೂ ಪ.ಜಾತಿ/ಪ. ಪಂಗಡ ವರ್ಗದವರಿಗೆ ರೂ. 11,250 ನಿಗಪಡಿಸಲಾಗಿದೆ.
ಹೆಚ್ಚನ ಮಾಹಿತಿಗಾಗಿಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂಗಳೂರು-560010ನ್ನು ಸಂಪರ್ಕಿಸುವಂತೆ ವ್ಯವಸ್ಥಾಪಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಸುಳ್ಯ-ಭೂ ಒಡೆತನ ಯೋಜನೆ – ಆಕ್ಷೇಪಣೆ ಆಹ್ವಾನ
ಡಾ:ಬಿ.ಆರ್.ಅಂಬೇಡ್ಕರ್ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ ಭೂಒಡೆತನಯೋಜನೆಯಡಿಅಬ್ದುಲ್ ಲತೀಫ್ ಬಿ.ಹೆಚ್ ಬಿನ್ ಬಿ.ಹೆಚ್ಅಬ್ದುಲ್ರಹಿಮಾನ್, ಜೇಡಿಗುಂಡಿ ಮನೆ, ಅಜ್ಜಾವರಗ್ರಾಮ ಮತ್ತು ಅಂಚೆ, ಸುಳ್ಯ ತಾಲೂಕುರವರ ಸರ್ವೆ ನಂ:68/1 ರಲ್ಲಿ 4.64 ಎಕರೆಜಮೀನನ್ನು ನಿಗಮದ ಭೂಒಡೆತನಯೋಜನೆಯಡಿ ಮಾರಾಟ ಮಾಡಲು ಸಿದ್ಧರಿರುತ್ತಾರೆ. ಆದುದರಿಂದ ಈ ಜಮೀನಿನಲ್ಲಿಯಾವುದಾದರು ಆಕ್ಷೇಪಣೆಗಳಿದ್ದರೆ 15 ದಿನಗಳೊಳಗೆ ನಿಗಮದಜಿಲ್ಲಾಕಚೇರಿಗೆಡಾ:ಬಿ.ಆರ್.ಅಂಬೇಡ್ಕರ್ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ,ಜಿ.ಹೆಚ್.ಎಸ್ರಸ್ತೆ, ಜನತಾ ಬಜಾರ್ಕಟ್ಟಡ, 2ನೇ ಮಹಡಿ, ಮಂಗಳೂರು ದೂರವಾಣಿ ಸಂಖ್ಯೆ:0824-2420114 ಲಿಖಿತರೂಪದಲ್ಲಿದೂರು ಸಲ್ಲಿಸಲುದ.ಕಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.
ನಿರುಪಯುಕ್ತ ವಸ್ತುಗಳ ಬಹಿರಂಗ ಹರಾಜು
ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಇರುವ ಕೆಎ 19 ಜಿ 8040 ಆ್ಯಂಬುಲೆನ್ಸ್ ವಾಹನ ಹಾಗೂ ಇತರ ನಿರುಪಯುಕ್ತ ಟಯರ್, ಬಿಡಿಭಾಗಗಳನ್ನು ಎಲ್ಲಿ ಹೇಗಿದೆಯೋ ಅದೇ ಸ್ಥಿತಿಯಲ್ಲಿ ಆಗಸ್ಟ್ 14 ರಂದು ಬೆಳಿಗ್ಗೆ 11 ಗಂಟೆಗೆ ಸರಕಾರಿ ಲೇಡಿಗೋಶನ್ ಆಸ್ಪತ್ರೆ ಆವರಣದಲ್ಲಿ ಟೆಂಡರ್ ಕಂ ಬಹಿರಂಗ ಹರಾಜು ನಡೆಸಲಾಗುತ್ತದೆ. ಟೆಂಡರ್ ಫಾರಂಗಳನ್ನು ಸ್ವೀಕರಿಸುವ ಕೊನೆಯ ದಿನ ಆಗಸ್ಟ್ 13 ರಂದು ಸಂಜೆ 4 ಗಂಟೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-2445611 ಸಂಪರ್ಕಿಸುವಂತೆ ಮಂಗಳೂರು ಸರಕಾರಿ ಲೇಡಿಗೋಶನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರ ಎಂದು ಪ್ರಕಟಣೆ ತಿಳಿಸಿದೆ.
ಪ.ಜಾತಿ ಪ.ಪಂಗಡ ಕ್ರೀಡಾಪಟುಗಳಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
2020-21ನೇ ಸಾಲಿನ ವಿಶೇಷ ಘಟಕಉಪಯೋಜನೆ ಮತ್ತುಗಿರಿಜನಉಪಯೋಜನೆಯಅಡಿಯಲ್ಲಿ 2019ನೇ ಕ್ಯಾಲೆಂಡರ್ ವರ್ಷದಲ್ಲಿರಾಜ್ಯ ಮಟ್ಟ, ರಾಷ್ಟ್ರ ಮಟ್ಟ ಮತ್ತುಅಂತರಾಷ್ಟ್ರೀಯ ಮಟ್ಟದಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡುವಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಆನ್ ಲೈನ್ನಲ್ಲಿ ಸಲ್ಲಿಸಲುಕೊನೆಯ ದಿನ ಆಗಸ್ಟ್ 30.ಅರ್ಜಿ ಸಲ್ಲಿಸುವ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ದ.ಕ.ಜಿಲ್ಲೆ, ಮಂಗಳೂರು ಈ ಕಚೇರಿಯಿಂದಅರ್ಜಿ ನಮೂನೆಗಳನ್ನು ಪಡೆದುಜಾತಿ ಪ್ರಮಾಣ ಪತ್ರವನ್ನು ದಾಖಲಿಸಿ ತುಂಬಿದಅರ್ಜಿ ನಮೂನೆಗೆ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ದ.ಕ.ಜಿಲ್ಲೆ, ಮಂಗಳೂರು ಇವರ ಸಹಿ ಪಡೆದು ಅರ್ಜಿಗಳನ್ನು http:// Karunadu.Karnataka.gov.in/dyes ವೆಬ್ ಸೈಟ್ ಮೂಲಕ ಅಪ್ ಲೋಡ್ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿಉಪನಿರ್ದೇಶಕರು.ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ದ.ಕ.ಜಿಲ್ಲೆ, ಮಂಗಳೂರು (ದೂ.0824-2451264) ಇವರನ್ನು ಸಂಪರ್ಕಿಸಬಹುದಾಗಿದೆ.
ಪ್ರಧಾನಮಂತ್ರಿ ಪ್ರಶಸ್ತಿಗೆ-ಅರ್ಜಿ ಆಹ್ವಾನ
ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಅತ್ಯತ್ತಮ ಸಾಧನೆ ಮಾಡಿದ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಮತ್ತು ನಾಗರೀಕ ಸೇವೆಯನ್ನು ಜಾರಿಗೊಳಿಸುವಲ್ಲಿ ಸುಧಾರಣೆ ಮಾಡಿರುವ ಅಧಿಕಾರಿ/ಸಂಸ್ಥೆಗೆ ಪ್ರಧಾನಮಂತ್ರಿ ಪ್ರಶಸ್ತಿಯನ್ನು ಅಕ್ಟೋಬರ್ 31 ರ ರಾಷ್ಟ್ರೀಯ ಏಕತಾ ದಿವಸದಂದು ಸ್ಟಾಚ್ಯೂ ಆಫ್ ಯುನಿಟಿ, ಕೆವಾಡಿಯಾ, ಗುಜರಾತ್ನಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಪ್ರಧಾನ ಮಾಡುವರು.
2018 ಏಪ್ರಿಲ್ 1 ರಿಂದ 2020 ಮಾರ್ಚ್ 31 ರವರೆಗಿನ ಅವಧಿಯಲ್ಲಿ ಸಾಧಿಸಿರುವ ಪ್ರಗತಿಯನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಒಟ್ಟು 15 ಪ್ರಶಸ್ತಿಗಳಿದ್ದು, ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸಿ ನಾಗರೀಕ ಸೇವೆಯನ್ನು ನೀಡುವಲ್ಲಿ ಸುಧಾರಣೆ ಮಾಡಿರುವ ವಿಭಾಗಕ್ಕೆ 6 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜಿಲ್ಲಾ ಇಲಾಖೆ/ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೊಸದಾಗಿ ಆವಿಷ್ಕರಿಸಿದ ಯೋಜನೆಗಳಿಗೆ ಜಿಲ್ಲಾ ರಾಜ್ಯ ಮತ್ತು ಕೇಂದ್ರ ಮಟ್ಟದ ತಲಾ 2 ಪ್ರಶಸ್ತಿಗಳಂತೆ ಒಟ್ಟು 6 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜಿಲ್ಲೆಗಳ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳನ್ನು ಯಶಸ್ವಿಯಗಿ ಜಾರಿಗೊಳಿಸಿದವರಿಗೆ 2 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ನಮಾಮಿ ಗಂಗೆ ಕಾರ್ಯಕ್ರಮಕ್ಕೆ 1 ಪ್ರಶಸ್ತಿಯನ್ನು ನೀಡಲಾಗುತ್ತದೆ.
ಜಿಲ್ಲೆ/ಅನುಷ್ಠಾನಗೊಳಿಸುವ ಘಟಕ/ಸಂಸ್ಥೆಗಳು ತಾವು ಸಾಧನೆ ಗೈದಿರುವ ಕಾರ್ಯಕ್ರಮಯೋಜನೆಯ ಕುರಿತು ಸಂಕ್ಷಿಪ್ತ ಮಾಹಿತಿ ಹಾಗೂ ಪೂರಕ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಈ ಪ್ರಶಸ್ತಿಗಳಿಗೆ ಆನ್ಲೈನ್ ನೋಂದಣಿ ಮಾಡಿಕೊಂಡು ಆಗಸ್ಟ್ 15 ರ ಒಳಗೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಶಸ್ತಿ ಪೋರ್ಟಲ್ ಲಾಗಿನ್ ಆಗುವ ವಿವರ ಇಂತಿವೆ: URL: http://pmawards.gov.in, Username: STATE, Password: darpgPMa@2020.
ಹೆಚ್ಚಿನ ಮಾಹಿತಿಗೆ ಜಾಲತಾಣ ವಿಳಾಸ http://www.pmawards.gov.in ದೂರವಾಣಿ ಸಂಖ್ಯೆ 080 22032659 ನ್ನು ಸಂಪರ್ಕಿಸಬಹುದು ಎಂದು ಆಡಳಿತ ಸುಧಾರಣೆ, ಸರ್ಕಾರದ ಉಪ ಕಾರ್ಯದರ್ಶಿ ಸ್ವರ್ಣಲತಾ ಎಂ ಭಂಡಾರೆ ಇವರ ಪ್ರಕಟಣೆ ತಿಳಿಸಿದೆ.
ನಿರುಪಯುಕ್ತ ವಾಹನ ಬಹಿರಂಗ ಹರಾಜು ಪ್ರಕ್ರಿಯೆ – ರದ್ದು
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಘಟಕದ ಬಹಿರಂಗ ಹರಾಜು ಪ್ರಕಟಣಾ ಪ್ರಸ್ತವನಾ ಸಂಖ್ಯೆ ಎಸ್.ಸಿ.ಟಿ.-3/11/ಮಂ.ನ/2020 ಜುಲೈ 1 ರಂದು ರೀತ್ಯಾ ಪೊಲೀಸ್ ಕಮಿಷನರೇಟ್ ಘಟಕದ 23 ನಿರುಪಯುಕ್ತ ವಾಹನಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಆಗಸ್ಟ್ 8 ರಂದು ಬಹಿರಂಗ ಕಂ ಟೆಂಡರ್ ದಿನಾಂಕವನ್ನು ನಿಗಧಿಪಡಿಸಲಾಗಿತ್ತು. ಪ್ರಸ್ತುತ ಕೋವಿಡ್-19 ಪ್ರಯುಕ್ತ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇ-ಹರಾಜು ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.
ಚುಟುಕು ಸಂಕಲನ-2020 ಪುಸ್ತಕ ಬಿಡುಗಡೆ
ಮಂಗಳೂರು ತಾಲೂಕುಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದಚುಟುಕು ಸಂಕಲನ-2020 ಬಿಡುಗಡೆಕಾರ್ಯಕ್ರಮ ವಾರ್ತಾ ಇಲಾಖೆ ಸಭಾಂಗಣದಲ್ಲಿ ನಡೆಯಿತು.
ಚುಟುಕಿನ 55 ಕವಿಗಳು ಪುಸ್ತಕ ಬಿಡುಗಡೆಗೊಳಿಸಿದ ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್, ಕನ್ನಡ ಸಾಹಿತ್ಯ ಲೋಕದಲ್ಲಿಚುಟುಕು ಸಾಹಿತ್ಯದಕೊಡುಗೆಅಪಾರ.
ಬಿಡುಗಡೆಗೊಂಡಚುಟುಕು ಸಂಕಲನವು ಚುಟುಕಿನಜೊತೆಗೆ ಕವಿಗಳನ್ನು ಪರಿಚಯಿಸುತ್ತಿರುವುದು ವಿಶೇಷ.ಈ ಮೂಲಕ ಚುಟುಕು ಹಾಗೂ ಕವಿಗಳ ದಾಖಲೀಕರಣವಾಗುತ್ತದೆ.ಇದುಇತಿಹಾಸದ ಭಾಗವಾಗಿ ಭವಿಷ್ಯದಲ್ಲಿಅಧ್ಯಯನಕ್ಕೆ ಪೂರಕವಾಗುತ್ತದೆಎಂದರು.
ಮಂಗಳೂರು ತಾಲೂಕುಚುಟುಕು ಸಾಹಿತ್ಯ ಪರಿಷತ್ತಿನಗೌರವಾಧ್ಯಕ್ಷಇರಾ ನೇಮು ಪೂಜಾರಿ ಮಾತನಾಡಿ, ಮಹಾಭಾರತದಲ್ಲಿಕರ್ಣ, ರಾಷ್ಟ್ರಕವಿ ಕುವೆಂಪು, ಸೇರಿದಂತೆಯಕ್ಷಗಾನದಲ್ಲಿಯೂಕೂಡಚುಟುಕು ಸಾಹಿತ್ಯವನ್ನು ಅರಿತುಕೊಳ್ಳಬಹುದು. ಚುಟುಕುರಚನೆಗೆ ಭಾμÁಪ್ರಭುತ್ವತೆ, ಚಾತುರ್ಯ, ಜೊತೆಗೆ ನೋವು ನಲಿವು ಬೆಸೆಯುವ ಅಂಶ ಒಳಗೊಂಡಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕುಚುಟುಕು ಸಾಹಿತ್ಯ ಪರಿಷತ್ತಿನಅಧ್ಯಕ್ಷರೇಮಂಡ್ಡಿಕುನಾ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಮಂಗಳೂರು ತಾಲೂಕುಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ವಿಜಯಲಕ್ಷ್ಮಿ, ಮಂಗಳೂರು ತಾಲೂಕುಚುಟುಕು ಸಾಹಿತ್ಯ ಪರಿಷತ್ತಿನ ನಿಕಟಪೂರ್ವಅಧ್ಯಕ್ಷಡಾ. ಸುರೇಶ್ ನೆಗಳಗುಳಿ ಮತ್ತಿತರರು ಉಪಸ್ಥಿತರಿದ್ದರು.
ಯೋಗತರಬೇತುದಾರರ ಹುದ್ದೆ–ಅರ್ಜಿಆಹ್ವಾನ
ದಕ್ಷಿಣಕನ್ನಡ ಜಿಲ್ಲಾ ಆಯುμï ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಆಯುμï ವೆಲ್ನೆಸ್ ಸೆಂಟರುಗಳಾದ ಸರ್ಕಾರಿಆಯುರ್ವೇದಚಿಕಿತ್ಸಾಲಯ, ಬಳ್ಕುಂಜೆ, ಸರ್ಕಾರಿಆಯುರ್ವೇದಚಿಕಿತ್ಸಾಲಯ, ಸಜಿಪಮೂಡ, ಸರ್ಕಾರಿಆಯುರ್ವೇದಚಿಕಿತ್ಸಾಲಯ,
ಕಣಿಯೂರಿಗೆಗುತ್ತಿಗೆಆಧಾರದಲ್ಲಿತಾತ್ಕಾಲಿಕವಾಗಿಯೋಗತರಬೇತುದಾರರು (ಪಾರ್ಟ್ಟೈಂ) ಹುದ್ದೆಗೆ ನೇಮಕ ಮಾಡಲುಅರ್ಜಿಯನ್ನುಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಕನಿಷ್ಟ 10+2 ಉತ್ತೀರ್ಣರಾಗಿರಬೇಕು ಮತ್ತುಯೋಗ ವೆಲ್ನೆಸ್ಇನ್ಸ್ಟ್ರಕ್ಟರ್ಕೋರ್ಸ್ ಪ್ರಮಾಣ ಪತ್ರವನ್ನುಯೋಗ ಸರ್ಟಿಫಿಕೇಷನ್ ಬೋರ್ಡ್ನಿಂದ ಪಡೆದಿರಬೇಕುಅಥವಾಕನಿಷ್ಟ 10+2 ಉತ್ತೀರ್ಣರಾಗಿರಬೇಕು ಮತ್ತು ಪ್ರತಿಷ್ಟಿತ ಸಂಸ್ಥೆಯಲ್ಲಿಯೋಗತರಬೇತುದಾರರಾಗಿಕರ್ತವ್ಯ ನಿರ್ವಹಿಸಿದ ಅನುಭವವನ್ನು ಹೊಂದಿರಬೇಕು. ವಯೋಮಿತಿ 60 ವರ್ಷ ಮೀರಬಾರದು, ಸ್ಥಳೀಯರಿಗೆ ಪ್ರಾಶಸ್ತ್ಯವನ್ನು ನೀಡಲಾಗುವುದು.ಅರ್ಜಿ ಸಲ್ಲಿಸಲುಆಗಸ್ಟ್ 5 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿಜಿಲ್ಲಾಆಯುμïಕಚೇರಿದೂರವಾಣಿ ಸಂಖ್ಯೆ:0824-2453063 ಸಂಪರ್ಕಿಸವಂತೆದ.ಕಆಯುμï ಇಲಾಖಾ ಪ್ರಕಟಣೆ ತಿಳಿಸಿದೆ.
ಮೀನು ಕೃಷಿಕರಿಗೆ ವೈಜ್ಞಾನಿಕ ಮಾಹಿತಿಯ ಕಿರುಹೊತ್ತಿಗೆ ಬಿಡುಗಡೆ
ಶಿಕ್ಷಣದ ಜೊತೆ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಮುಂಚೂಣಿ ಹೊಂದಿರುವ ಮಂಗಳೂರಿನ ಮೀನುಗಾರಿಕಾಕಾಲೇಜುರೈತರಿಗೆ ತಂತ್ರಜ್ಞಾನಗಳ ವರ್ಗಾವಣೆ ಮಾಡುವಲ್ಲಿ ಸಹಾಯವಾಣಿಯಾಗಿಕಾರ್ಯ ನಿರ್ವಹಿಸುತ್ತಿದೆ. ಕಾಲೇಜುಇಲ್ಲಿಯವರೆಗೆ ಸುಮಾರು 150 ರಾಷ್ಟ್ರೀಯ ಮತ್ತುಅಂತರಾಷ್ಟ್ರೀಯ ಸಂಸ್ಥೆಗಳು ಪ್ರಾಯೋಜಿಸಿದ ಸಂಶೋಧನಾ ಯೋಜನೆಗಳನ್ನು ನಡೆಸಿರುತ್ತದೆ.ವಿಸ್ತರಣೆಯಲ್ಲೂ ಸಹ ಅತ್ಯುನ್ನತ ಸಾಧನೆ ಮಾಡಿರುವಕಾಲೇಜು ಈಗ 50 ವರ್ಷಗಳನ್ನು ಪೂರೈಸಿದೆ.
ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಮುಗಿಸಿರುವ ವಿದ್ಯಾರ್ಥಿಗಳನ್ನು ಸಾಮಾನ್ಯ ಪ್ರವೇಶದ ಮೂಲಕ ಆಯ್ಕೆ ಮಾಡಿ 4 ವರ್ಷಗಳ ಸ್ನಾತಕ, 2 ವರ್ಷದ ಸ್ನಾತಕೋತ್ತರ ಮತ್ತು 3 ಸಾಲಿನ ಡಾಕ್ಟರೇಟ್ ಪದವಿಗಳನ್ನು ಕಾಲೇಜು ನೀಡುತ್ತಾ ಬಂದಿದೆ. ಮೀನುಗಾರಿಕಾ ಪದವಿಧರರುರಾಷ್ಟ್ರೀಯ ಹಾಗೂಅಂತರಾಷ್ಟ್ರೀಯ ಮಟ್ಟದ ಸರ್ಕಾರಿ ಹಾಗೂ ಖಾಸಗಿ ರಂಗದಲ್ಲಿಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ.
ಮೀನುಗಾರಿಕಾಕಾಲೇಜಿನ ಪ್ರಧಾನಕಚೇರಿಯಾದ ಬೀದರ್ನಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಡಾ| ಹೆಚ್.ಡಿ. ನಾರಾಯಣ ಸ್ವಾಮಿ ಮಹಾವಿದ್ಯಾಲಯದ ಪ್ರೊಫೆಸರ್ಡಾ| ಎ.ಟಿ. ರಾಮಚಂದ್ರ ನಾಯ್ಕ ತಯಾರಿಸಿದ ವೈಜ್ಞಾನಿಕ ಮಾಹಿತಿಗಳನ್ನೊಳಗೊಂಡ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿಅವರು ಮಾತನಾಡಿ, ರೈತರಿಗೆಅತೀ ಸರಳವಾಗಿ ಅರ್ಥವಾಗುವಕನ್ನಡ ಭಾμÉಯಲ್ಲಿ ಮುದ್ರಿತವಾಗಿರುವ ಈ ಕಿರುಹೊತ್ತಿಗೆಗಳು ವೈಜ್ಞಾನಿಕ ವಿಧಾನದಲ್ಲಿ ಕೃಷಿಮಾಡಲು ಸಹಕಾರಿಯಾಗಲಿವೆ ಎಂದು ಹೇಳಿದರು.ಮಾತಿನಲ್ಲಿ ಮಾಹಿತಿ ತಿಳಿಸುವುದು ಸುಲಭಆದರೆ ಆ ಮಾಹಿತಿಗಳು ಲಿಖಿತರೂಪದಲ್ಲಿರೈತ ಭಾಂದವರಿಗೆ ರವಾನಿಸಿದರೆ ಕೃಷಿಯನ್ನುಉತ್ತಮಪಡಿಸಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್.ಸಿ.ಎಸ್.ಪಿ./ ಟಿ.ಎಸ್.ಪಿ.ಯೋಜನೆಯಧನ ಸಹಾಯದಿಂದ ತಯಾರಿಸಿ ಮುದ್ರಿಸಿದ ವೈಜ್ಞಾನಿಕ ಮಾಹಿತಿಗಳನ್ನೊಳಗೊಂಡ ಈ ಕಿರುಹೊತ್ತಿಗೆಗಳನ್ನು ಕಾಲೇಜಿನ ಜಲ ಪರಿಸರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಪ್ರೊಫೆಸರ್ಡಾ| ಎ.ಟಿ. ರಾಮಚಂದ್ರ ನಾಯ್ಕ ಪ್ರಕಟಿಸಿರುತ್ತಾರೆ.ಇವರು ಈ ಹಿಂದೆ ನಗರದ ಕೃಷಿ ವಿಜ್ಞಾನಕೇಂದ್ರದ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥರಾಗಿಕಾರ್ಯನಿರ್ವಹಿಸಿದ್ದರು.
ಬಿಡುಗಡೆಯ ಸಂದರ್ಭದಲ್ಲಿ, ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿಡಾ| ಸಿ.ವಿ.ರಾಜು, ಕಾಲೇಜಿನ ಎಸ್.ಸಿ.ಎಸ್.ಪಿ./ ಟಿ.ಎಸ್.ಪಿ. ಯೋಜನೆಯ ಸಂಯೋಜಕ ಶಶಿಧರ್ ಎಸ್. ಬಾದಾಮಿ ಮತ್ತುಕಾಲೇಜಿನ ವಿವಿಧ ವಿಭಾಗಗಳ ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನಡೀನ್ಡಾ|ಎ. ಸೆಂಥಿಲ್ ವೆಲ್ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಲಭವಾಗಿ ಅರ್ಥೈಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಬರೆದಿರುವ ಈ ಕಿರುಹೊತ್ತಿಗೆಗಳು ಎಲ್ಲಾ ವರ್ಗದ ಸಾರ್ವಜನಿಕ ಮತ್ತುರೈತ ಭಾಂದವರಿಗೆಉಪಯೋಗವಾಗಲಿದೆಎಂದು ಹೇಳಿದರು.
ಡಾ| ಎ. ಟಿ. ರಾಮಚಂದ್ರ ನಾಯ್ಕ ಬರೆದು ಪ್ರಕಟಿಸಿರುವ ಕಿರುಹೊತ್ತಿಗೆಗಳು ಇಂತಿವೆ: ವೈಜ್ಞಾನಿಕ ಮೀನು ಮರಿಉತ್ಪಾದನಾ ವಿಧಾನಗಳು, ಒಳನಾಡಿನಲ್ಲಿ ಮೀನು ಕೃಷಿ ಕೈಗೊಳ್ಳುವ ಸರಳೋಪಾಯ, ಮನೆಯಲ್ಲಿಅಲಂಕಾರಿಕ ಮೀನುಗಳ ಪಾಲನೆ ಮತ್ತು ನಿರ್ವಹಣೆ, ಹುಲ್ಲುಗೆಂಡೆ ಮತ್ತು ಸಾಮಾನ್ಯ ಗೆಂಡೆಗಳ ಸಮ್ಮಿಶ್ರ ಮೀನು ಬೇಸಾಯ, ‘ಮೀನು ಜತೆ ಕೃಷಿ’ ಮಾಡುವ ಸಮಗ್ರ ಬೇಸಾಯ ಪದ್ದತಿಗಳು, ಸುರಗಿ (ಪಂಗೇಶಿಯಸ್) ಮೀನು ಸಾಕಣೆ ವಿಧಾನಗಳು, ತಿಲಾಪಿಯ/ ಜುಲೇಬಿ ಮೀನು (ಸರ್ಕಾರಿ ಮೀನು) ಸಾಕಣೆ ಮತ್ತು ಜಲಪ್ರದೇಶದಲ್ಲಿ ಪ್ಲಾಸ್ಟಿಕ್ ನಿರ್ವಹಣೆ.
ರೈತರು ಮೀನು ಕೃಷಿಯಲ್ಲಿತೊಡಗಿರುವವರು, ನೂತನವಾಗಿಜಲಕೃಷಿ ಮಾಡುವವರು, ಲಾಭದಾಯಕ ವೈಜ್ಞಾನಿಕರೀತಿಯಲ್ಲಿ ಕೃಷಿ ಕೈಗೊಳ್ಳಲು ಇಚ್ಛಿಸುವರು, ಸುಸ್ಥಿರ ಮೀನುಗಾರಿಕಾ ಪದ್ಧತಿಗಳನ್ನು ಅಳವಡಿಸಿ ಅಧಿಕ ಲಾಭಗಳಿಸುವ ವೈಜ್ಞಾನಿಕ ವಿಧಾನಗಳು, ಜಲ ಪರಿಸರ ನಿರ್ವಹಣೆ, ಮೀನಿನಖಾದ್ಯ ಪದಾರ್ಥಗಳ ತಯಾರಿಕೆ, ಮೀನು ಸಂಸ್ಕರಣಾ ವಿಧಾನಗಳು, ಮೀನಿನ ರೋಗಲಕ್ಷಣ ಮತ್ತು ನಿರ್ವಹಣೆ, ಮಣ್ಣು/ ನೀರಿನಗುಣಮಟ್ಟ ಪರಿಕ್ಷೆ, ಮತ್ಸ್ಯ ಸಂಪನ್ಮೂಲಗಳ ನಿರ್ವಹಣೆ, ಮೀನುಗಾರಿಕಾ ತಂತ್ರಜ್ಞಾನಗಳ ವಿಸ್ತರಣೆ, ವೈಜ್ಞಾನಿಕ ಮೀನು ಹಿಡುವಳಿಯ ವಿಧಾನ, ಜಲ ಮಾಲಿನ್ಯ ನಿರ್ವಹಣೆ, ಇತ್ಯಾದಿಗಳ ಬಗ್ಗೆ ಕಾಲೇಜಿನ ಪ್ರೊಫೆಸರ್ಗಳಿಂದ ಸಂಪೂರ್ಣ ಮಾಹಿತಿ ಪಡೆಯಲುದೂರವಾಣಿ ಸಂಖ್ಯೆ 0824-2249256 ಸಂಪರ್ಕಿಸಬಹುದುಎಂದುಡಾ| ಎ.ಟಿ. ರಾಮಚಂದ್ರ ನಾಯ್ಕಅವರ ಪ್ರಕಟಣೆ ತಿಳಿಸಿದೆ.
ವಿ.ವಿ ಸಂಧ್ಯಾ ಕಾಲೇಜು – ಪ್ರಥಮ ವರ್ಷದ ಬಿ.ಎ., ಬಿ.ಕಾಂ., ಬಿ.ಸಿ.ಎ. ಪ್ರವೇಶಾತಿಗೆ ಅರ್ಜಿ ಆಹ್ವಾನ
ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಹಂಪನಕಟ್ಟೆ ಮಂಗಳೂರು (ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು) ಇಲ್ಲಿನ ಪ್ರಥಮ ವರ್ಷದ ಬಿ.ಎ., ಬಿ.ಕಾಂ., ಬಿ.ಸಿ.ಎ. ತರಗತಿಯ ಪ್ರವೇಶಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹಗಲು ಹೊತ್ತಿನಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಕೋರ್ಸುಗಳನ್ನು ವ್ಯಾಸಂಗ ಮಾಡುತ್ತಿರುವ, ಆರ್ಥಿಕವಾಗಿ ಹಿಂದುಳಿದ, ಹಗಲು ಹೊತ್ತಿನಲ್ಲಿ ಕೆಲಸ ನಿರ್ವಹಿಸಿ ಪದವಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಪದವಿ ವ್ಯಾಸಂಗವನ್ನು ಮಾಡಬಹುದಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯವು ನಿಗದಿ ಪಡಿಸಿದ ಕನಿಷ್ಟ ಶುಲ್ಕ ಹಾಗೂ ಇತರ ಸೌಕರ್ಯಗಳಾದ ಸುಸಜ್ಜಿತ ಗ್ರಂಥಾಲಯ, ಅನುಭವಿ ಶಿಕ್ಷಕರು, ಕಂಪ್ಯೂಟರ್ ಲ್ಯಾಬ್ ಹಾಗೂ ಸೈಬರ್ ಲ್ಯಾಬ್ಗಳಿದ್ದು ಶೈಕ್ಷಣಿಕ ವರ್ಷದಲ್ಲಿ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡಾ ಹಾಗೂ ಸಾಂಸ್ಕøತಿಕ ಚಟುವಟಿಕೆಗಳು, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕಾಲೇಜಿನಲ್ಲಿ ನೀಡಲಾಗುವ ಈ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಪದವಿ ವ್ಯಾಸಂಗ ಪೂರ್ಣಗೊಳಿಸಬಹುದಾಗಿದೆ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸರಕಾರದ ವಿವಿಧ ಇಲಾಖೆಗಳಿಂದ ನೀಡಲಾಗುವ ವಿದ್ಯಾರ್ಥಿ ವೇತನ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಚೇರಿ ಅಥವಾ ದೂರವಾಣಿ ಸಂಖ್ಯೆ 0824-2424608 ಯನ್ನು ಸಂಪರ್ಕಿಸಲು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಹಂಪನಕಟ್ಟೆ ಇವರ ಪ್ರಕಟಣೆ ತಿಳಿಸಿದೆ.
ಮಂಗಳೂರು ವಿ.ವಿ. ಘಟಕದ ವಿವಿಧ ಕಾಲೇಜುಗಳಿಂದ ಪ್ರವೇಶಾತಿ ಆರಂಭ
ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಾದ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು, ಮಂಗಳಗಂಗೋತ್ರಿ, ವಿಶ್ವವಿದ್ಯಾನಿಲಯ ಕಾಲೇಜು, ನೆಲ್ಯಾಡಿ ಹಾಗೂ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು ಇಲ್ಲಿಗೆ ಹಿಂದಿನ ಸಾಲಿನಂತೆ 2020-21 ನೇ ಸಾಲಿನಲ್ಲಿಯೂ ಪದವಿ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಮಾಡಲಾಗುವುದು, ಆಸಕ್ತ ವಿದ್ಯಾರ್ಥಿಳು ಸಂಬಂಧಪಟ್ಟ ಕಾಲೇಜು ಪ್ರಾಶುಪಾಲರು/ಕಚೇರಿಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರ ಪ್ರಕಟಣೆ ತಿಳಿಸಿದೆ.
ಅಧಿಕಾರ ಸ್ವೀಕಾರ
ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾಗಿ ಸೋಮಶೇಖರ್ ಬ್ಯೂರಪ್ಪ ಕಮರೂರಮನೆ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಇಲಾಖೆಯ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9480201994 ಅಥವಾ ಕಚೇರಿ ದೂರವಾಣಿ ಸಂಖ್ಯೆ 0824-2453926 ಸಂಪರ್ಕಿಸಬಹುದು.
ಕೌಶಲಾಭಿವೃದ್ದಿ ಮತ್ತು ಸುರಕ್ಷ ತರಬೇತಿ ಕೇಂದ್ರಕ್ಕೆ ಎಂ.ಒ.ಯು : ರಾಜ್ಯದ ಏಕೈಕ ಮೀನುಗಾರಿಕಾ ಕಾಲೇಜಿನಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಸ್ಥಾಪನೆ
ಆಗ್ನೇಯ ಏಷ್ಯಾದಲ್ಲೆ ಎರಡನೇ ಹಾಗೂ ಭಾರತ ಮೊಟ್ಟಮೊದಲ ಮೀನುಗಾರಿಕಾ ಕಾಲೇಜು ಮಂಗಳೂರಿನ ಎಕ್ಕೂರು ಸಮೀಪವಿರುವ ಮತ್ಸ್ಯನಗರದಲ್ಲಿ ಪ್ರಾರಂಭವಾಗಿ 50 ವರ್ಷಗಳನ್ನು ಪೂರೈಸಿದೆ. ಕಾಲೇಜು 1969 ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಅಸ್ತಿತ್ವಕ್ಕೆ ಬಂದು 35 ವರ್ಷ ಪೂರೈಸಿ 2005 ರಿಂದ ಬೀದರನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಕಾಲೇಜು 4 ವರ್ಷಗಳ ಸ್ನಾತಕ ಪದವಿ (ಬಿ.ಎಫ್.ಎಸ್ಸಿ.), 2 ವರ್ಷದ ಸ್ನಾಕೋತ್ತರ ಪದವಿ (ಎಂ.ಎಫ್.ಎಸ್ಸಿ.) ಮತ್ತು 3 ಸಾಲಿನ ಡಾಕ್ಟರೇಟ್ (ಪಿಹೆಚ್.ಡಿ.) ಪದವಿಗಳನ್ನು ನೀಡುತ್ತಾ ಬಂದಿದೆ. ಇದುವರೆಗೂ 47 ಪದವಿ ಬ್ಯಾಚ್ ಗಳು ಹೊರಬಂದಿದ್ದು, ಇಲ್ಲಿಯ ಪದವಿಧರರು ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಿ ಹಾಗೂ ಖಾಸಗಿ ರಂಗದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸ್ಲಾಗನೀಯ.
ವಿದ್ಯಾಭ್ಯಾಸದ ಜೊತೆಗೆ, ಮೀನುಗಾರಿಕೆಯಲ್ಲಿ ಸಂಶೋಧನೆ ಮತ್ತು ವಿಸ್ಥರಣೆಯಲ್ಲಿ ಮುಂಚುಣಿ ಹೊಂದಿರುವು ಮೀನುಗಾರಿಕಾ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಕೊಟ್ಟಿದೆ. ಕಾಲೇಜು ಇಲ್ಲಿಯವರೆಗೆ ಸುಮಾರು 150 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಪ್ರಾಯೋಜಿಸಿದ ಸಂಶೋಧನಾ ಯೋಜನೆಗಳನ್ನು ನಡೆಸಿರುತ್ತದೆ.
ಮುಂದುವರೆದು, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂ.ಎಸ್.ಸಿ.ಎಲ್.) ನ ಅಡಿಯಲ್ಲಿ ಮಂಗಳೂರು ನಗರವನ್ನು ಸೌಂದರ್ಯಗೊಳಿಸುವ ನಿಟ್ಟಿನಲ್ಲಿ ನಾನಾ ಯೋಜನೆಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಮೀನುಗಾರಿಕೆಯಲ್ಲಿ ಕೌಶಲಾಭಿವೃದ್ದಿ ತರಬೇತಿಯನ್ನು ನಡೆಸುವ ಉದ್ದೇಶದಿಂದ ಕಾಲೇಜಿನ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಮತ್ತು ಸಹಾಯಕ ಪ್ರಾಧ್ಯಾಪಕ ಡಾ| ಕುಮಾರನಾಯ್ಕ ಎ.ಎಸ್. ರವರು ಸಲ್ಲಿಸಿದ ಯೋಜನಾ ವರದಿಯನ್ನು ಪರಿಗಣಿಸಿ ಎಂ.ಎಸ್.ಸಿ.ಎಲ್. ಸಂಸ್ಥೆಯು 4.75 ಕೋಟಿಗಳ ಧನಸಹಾಯ ಮಂಜೂರು ಮಾಡಿದೆ.
ಇದರ ಪೈಕಿ ಈ ಯೋಜನೆಯಡಿ ಕೌಶಲಾಭಿವೃದ್ದಿ ತರಬೇತಿ ಕೇಂದ್ರದ ನಿರ್ಮಾಣಕ್ಕೆ 2.4 ಕೋಟಿಗಳಷ್ಟು ಅನುಷ್ಟಾನ ಮಾಡಲಾಗಿರುತ್ತದೆ. ಕೇಂದ್ರವನ್ನು ನಿರ್ಮಿಸಲು ಮಂಗಳೂರಿನ ಹೊಯ್ಗೆ ಬಝಾರ್ ನಲ್ಲಿರುವ ಮೀನುಗಾರಿಕಾ ಕಾಲೇಜಿನ ಅಂಗ ಸಂಸ್ಥೆಯಾದ ತಾಂತ್ರಿಕ ವಿಭಾಗವನ್ನು ಆಯ್ಕೆ ಮಾಡಲಾಗಿದೆ. ಕೌಶಲ್ಯಾಭಿವೃದ್ದಿ ತರಬೇತಿಗಾಗಿ 2.35 ಕೋಟಿ ರೂಗಳಷ್ಟು ಮೀಸಲಿಡಲಾಗಿದೆ.
ಕರ್ನಾಟಕ ರಾಜ್ಯದ ಒಟ್ಟು 7 ಸ್ಮಾರ್ಟ್ ಸಿಟಿಗಳಾದ ಬೆಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬೆಳಗಾವಿ ಮತ್ತು ಮಂಗಳೂರು ಗಳಲ್ಲಿ ನಗರಗಳ ಸೌಂದರ್ಯ ವೃದ್ದಿತಾ ಕಾರ್ಯಗಳ ವಿವಿಧ ಯೋಜನೆಗಳು ಕಾಮಗಾರಿಯಲ್ಲಿವೆ. ಆದರೆ, ಭಾರತ ದೇಶದ ಮೀನುಗಾರಿಕಾ ಕ್ಷೇತ್ರದಲ್ಲಿ ಅದರಲ್ಲೂ ಸ್ಮಾರ್ಟ್ ಸಿಟಿ ಅಡಿಯಲ್ಲಿ ಕೌಶಾಲಾಭಿವೃದ್ದಿ ಮತ್ತು ಸುರಕ್ಷ ಕೇಂದ್ರ ಮಂಗಳೂರಿನಲ್ಲಿ ಅಸ್ಥಿತಕ್ಕೆ ಬರುತ್ತಿರುವುದು ಇದೇ ಮೊದಲನೆಯದು ಎಂದು ನೋಡಲ್ ಅಧಿಕಾರಿ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು ಅಭಿಪ್ರಾಯ ವ್ಯಕ್ತವಡಿಸಿದ್ದಾರೆ.
ಎರಡು ಮಹಡಿಗಳ ತರಬೇತಿ ಕೇಂದ್ರ ನಿರ್ಮಿಸಲು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಸಲುವಾಗಿ ಮೇ 13 ರಂದು ವಿಶ್ವವಿದ್ಯಾಲಯದ ಪರವಾಗಿ ಮೀನುಗಾರಿಕಾ ಕಾಲೇಜು ಮತ್ತು ಎಂ.ಎಸ್.ಸಿ.ಎಲ್. ಗಳ ನಡುವೆ ಒಪ್ಪಂದದ ಸಹಿ (ಎಂ.ಒ.ಯು.) ಮಾಡಲಾಯಿತು.
ಈ ಒಪ್ಪಂದದ ಸಭೆಗೆ ಕಾಲೇಜಿನವತಿಯಿಂದ ಕೇಂದ್ರದ ನಿರ್ದೇಶಕರಾಗಿ ಡೀನ್ ಡಾ| ಎ. ಸೆಂಥಿಲ್ ವೆಲ್, ಕೇಂದ್ರದ ನೋಡಲ್ ಅಧಿಕಾರಿ ಹಾಗೂ ಸಂಯೋಜಕರಾಗಿ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಮತ್ತು ಎಂ.ಎಸ್.ಸಿ.ಎಲ್.ನ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್, ಕಾರ್ಯನಿರ್ವಾಹಕ ಇಂಜೀನಿಯರ್ ಚಂದ್ರಕಾಂತ್ ಬಾಣ್ಣೋಥ್ ರವರು ಒಪ್ಪಂದಕ್ಕೆ (ಒಡಂಬಡಿಕೆ) ಸಹಿಮಾಡಿದರು.
ಒಡಂಬಡಿಕೆಯ ಸಭೆಯಲ್ಲಿ ಕಾಲೇಜಿನ ಜಾಗರೂಕತಾಧಿಕಾರಿ ಡಾ| ಕೆ.ಎಸ್. ರಮೇಶ್, ಆಸ್ತಿ ಶಾಖೆಯ ಮುಖ್ಯಸ್ಥ ಡಾ| ಹೆಚ್.ಎನ್. ಅಂಜನೇಯಪ್ಪ, ಸಹ ವಿಸ್ಥರಣಾ ನಿರ್ದೇಶಕ ಡಾ| ಶಿವಕುಮಾರ ಎಂ., ಸಹಾಯಕ ಹಣಕಾಸು ನಿಯಂತ್ರಣಾಧಿಕಾರಿ ಡಾ| ಎಸ್.ಆರ್. ಸೋಮಶೇಖರ, ಸಹಾಯಕ ಆಡಳಿತಾಧಿಕಾರಿ ಡಾ| ಎಸ್. ಸಿದ್ದಪ್ಪಾಜಿ ಮತ್ತು ತಾಂತ್ರಿಕ ವಿಭಾಗದ ಪ್ರಭಾರಿ ಡಾ| ಎಸ್. ವರದರಾಜು ಉಪಸ್ಥಿತರಿದ್ದರು. ಎಂ.ಎಸ್.ಸಿ.ಎಲ್.ನ ಸಹಾಯಕ ಇಂಜೀನಿಯರ್ ಅನಂತ್ ಎಸ್. ಶಂಕರ್ ಹಾಜರಿದ್ದರು.
ಎಂ.ಎಸ್.ಸಿ.ಎಲ್. ನ ಮಾಜಿ ಸಹಾಯಕ ಆಯುಕ್ತ ಡಾ| ನಾಗರಾಜ್; ವಿಶ್ವವಿದ್ಯಾಲಯದ ಕುಲಪತಿ ಡಾ| ಹೆಚ್.ಡಿ. ನಾರಾಯಣಸ್ವಾಮಿ, ಕುಲಸಚಿವ ಡಾ| ಕೆ.ಸಿ. ವೀರಣ್ಣ ಮತ್ತು ವ್ಯವಸ್ತಾಪಕ ಮಂಡಳಿ ಸದಸ್ಯರುಗಳ ಸಹಕಾರ ಈ ವಿಶೇಷ ಯೋಜನೆಯನ್ನು ಮೀನುಗಾರಿಕಾ ಕಾಲೇಜಿನಲ್ಲಿ ಅನುಷ್ಟಾನ ಮಾಡಲು ಸಹಕರಿಸಿದ್ದಾರೆಂದು ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಈ ಸಂದರ್ಭದಲ್ಲಿ ಹೇಳಿದರು.
ಕೌಶಲಾಭಿವೃದ್ಧಿ ಕೇಂದ್ರ ನಿರ್ಮಿಸಲು 9 ತಿಂಗಳ ಸಮಯ ಬೇಕಿದೆ ಹಾಗೂ ಈಗಾಗಲೇ ಕಟ್ಟಡದ ನಿರ್ಮಾಣ ಪ್ರಗತಿಯಲ್ಲಿದೆ. ಕೇಂದ್ರ ಸ್ಥಾಪನೆಯಾದ ನಂತರ ಎರಡು ವರ್ಷಗಳವರೆಗೆ ಒಟ್ಟು 360 ಶಿಭಿರಾರ್ಥಿಗಳಿಗೆ ತರಬೇತಿ ನೀಡುವ ಕರ್ತವ್ಯ ಮೀನುಗಾರಿಕಾ ಕಾಲೇಜಿನದಾಗಿರುತ್ತದೆ. ಕೌಶಲಾಭಿವೃದ್ದಿ ಕೇಂದ್ರದ ಮತ್ತು ತರಬೇತಿಯ ಸಂಯೋಜಕರುಗಳಾಗಿ ಮೀನುಗಾರಿಕಾ ಕಾಲೇಜಿನವತಿಯಿಂದ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಮತ್ತು ಸಹಾಯಕ ಪ್ರೊಫೆಸರ್ ಡಾ| ಕುಮಾರನಾಯ್ಕ ಎ.ಎಸ್. ರವರಾದರೆ, ನಿರ್ದೇಶಕರಾಗಿ ಕಾಲೇಜಿನ ಡೀನ್ ಡಾ| ಎ. ಸೆಂಥಿಲ್ ವೆಲ್ ಆಗಿರುತ್ತಾರೆ.
ಪ್ರತೀ ತರಬೇತಿ ಶಿಭಿರಕ್ಕೆ ತಲಾ 30 ಅಭ್ಯರ್ಥಿಗಳಂತೆ ಆಯ್ಕೆ ಮಾಡಿ 30 ದಿನಗಳವರೆಗೆ ವರ್ಷಕ್ಕೆ 180 ನಿರುದ್ಯೋಗಿ ಯುವಕ-ಯುವತಿ, ಗೃಹಿಣಿ ಹಾಗೂ ಪದವಿ ಮತ್ತು ಶಾಲಾ ಶಿಕ್ಷಣವನ್ನು ಅರ್ಧದಲ್ಲಿ ಬಿಟ್ಟವರಿಗೆ ತರಬೇತಿಯನ್ನು ನೀಡುವ ಗುರಿ ಇದೆ. ಕೌಶಲ್ಯಾಭಿವೃದ್ದಿ ತರಬೇತಿಯನ್ನು ಒಟ್ಟು ಎರಡು ವರ್ಷಗಳವರೆಗೆ ನಡೆಸಲಾಗುವುದು.
ತರಬೇತಿಯನ್ನು ಕೇಂದ್ರದ ಲೋಕಾರ್ಪಣೆಯಾದ ನಂತರ 8 ವಿವಿಧ ವಿಷಯಗಳಲ್ಲಿ ನೀಡಲಾಗುವುದೆಂದು ಕೌಶಲಾಭಿವೃದ್ದಿ ಕೇಂದ್ರ ಹಾಗೂ ತರಬೇತಿಯ ಕೋರಾರ್ಡಿನೇಟರ್ ಆದ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ತಿಳಿಸಿದರು. ಆ 8 ತರಬೇತಿ ವಿಷಯಗಳು ಇಂತಿವೆ:
ಎಂ.ಎಸ್.ಸಿ.ಎಲ್. ಸಂಸ್ಥೆಯು ತರಬೇತಿಯ ಸಂಪೂರ್ಣ ಖರ್ಚು-ವೆಚ್ಚವನ್ನು ಭರಿಸುತ್ತದೆಂದು ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್ ಹೇಳಿದರು. ಆಯ್ಕೆ ಮಾಡಲ್ಪಟ್ಟ 8 ವಿವಿಧ ವಿಷಯಗಳ ಜೊತೆಗೆ ಪ್ರಸ್ತುತ ಸಮಯಕ್ಕೆ ಅವಶ್ಯವಿರುವ ಇತರೆ ಮೀನುಗಾರಿಕಾ ತಾಂತ್ರಿಕತೆಗಳನ್ನೂ ಸಹಾ ಬೇಡಿಕೆಯ ಮೇರೆಗೆ ಪರಿಗಣಿಸಿ ಕೌಶಲ್ಯ-ಕಸುತಿ ತರಬೇತಿ ಕೊಡಲಾಗುವುದೆಂದು ಕೂಡ ಈ ಸಂದರ್ಭದಲ್ಲಿ ಅವರು ಪ್ರಸ್ಥಾಪಿಸಿದರು.
ಆಯ್ಕೆಯಾದ ಶಿಭಿರಾರ್ಥಿಗಳಿಗೆ ತರಬೇತಿಯನ್ನು ಅನುಷ್ಟಾನಗೊಳಿಸುವ ಮುನ್ನ ಸಂಪನ್ಮೂಲ ವ್ಯಕ್ತಿಗಳನ್ನು ಟ್ರೈನಿಂಗ್ ಆಫ್ ಟ್ರೈನರ್ ಕಾರ್ಯಾಗಾರದ ಮುಖೇನ ಆರಿಸಲಾಗುವುದು. ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗಳ ಸಹಯೋಗದಿಂದ ಈ ಕಾರ್ಯಗಾರವನ್ನು ನಡೆಸಲಾಗುವುದು. ನುರಿತ ವಿಷಯ ತಜ್ಞರುಗಳನ್ನು ಮೀನುಗಾರಿಕಾ ಕಾಲೇಜು, ಪರಿಣಿತ ಸಂಸ್ಥೆಗಳ ತರಬೇತುದಾರರು ಹಾಗೂ ಆಹ್ವಾನಿತ ನುರಿತ ಅತಿಥಿ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಪ್ರಾತ್ಯಕ್ಷೀಯವಾಗಿ ತರಬೇತಿ ನೀಡಲಾಗುವುದೆಂದು ಕೇಂದ್ರದ ನೋಡಲ್ ಆಫಿಸರ್ ಹಾಗೂ ತರಬೇತಿಯ ಸಂಯೋಜಕ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.