ಕುಪ್ಪೆಪದವು(www.vknews.in): ಅಖಿಲ ಭೂಮಂಡಲಗಳನ್ನು ಸೃಷ್ಟಿಸಿ ಪೋಷಿಸುತ್ತಿರುವ ಅಲ್ಲಾಹನ ಔದಾರ್ಯತೆ ಅಪಾರವಾಗಿದ್ದು ಅದರಲ್ಲಿ ತೃಪ್ತಿಪಡುವ ಮೂಲಕ ಜೀವನ ಸಾರ್ಥಕವಾಗಬೇಕೆಂದು ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಖತೀಬರಾದ ಅಬೂಝೈದ್ ಶಾಫಿ ಮದನಿ ಕರಾಯರವರು ಜುಮಾ ನಂತರದ ಸಂದೇಶದಲ್ಲಿ ತಿಳಿಸಿದರು.
ಪ್ರಚಲಿತ ಸನ್ನಿವೇಶದಲ್ಲಿ ಕಣ್ಣ ಮುಂದೆ ಕಾಣುತ್ತಿರುವ ಪ್ರತಿಯೊಂದು ದುರಂತಗಳು ಅಲ್ಲಾಹನ ಪರೀಕ್ಷೆಯಾಗಿದ್ದು ಅಲ್ಲಾಹನ ಕಾರುಣ್ಯದ ನೋಟದಲ್ಲಿ ಆಗ್ರಹಗಳನ್ನು ಮುರಿಯ ಕೂಡದು ಎಂದು ತಿಳಿಸುತ್ತ ಐದು ವಕ್ತ್ ನಮಾಝ್, ಕುಟುಂಬ ಸಂಬಂಧ ,ಮರಣದ ಚಿಂತನೆ, ದಾನ ಧರ್ಮ, ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಬಾಳಿ ಬದುಕಬೇಕೆಂದು ತಿಳಿಸಿದರು. ಇಸ್ಲಾಮಿಕ್ ಹಿಜರೀ ತಿಂಗಳ ಕೊನೆಯ ಶುಕ್ರವಾರವಾಗಿದ್ದು ಗತ ಕಾಲದ ಪಾಪ ವಿಮೋಚನೆಗಾಗಿ ಪಶ್ಚಾತ್ತಾಪ ಪಡುವುದರೊಂದಿಗೆ ಹೊಸ ವರ್ಷವು ಮಾದರಿ ಜೀವನ ಹಾಗೂ ಬದಲಾವಣೆಗೆ ನಾಂದಿಯಾಗಬೇಕೆಂದು ತಿಳಿಸಿದರು.
ವರದಿ: ಕರ್ಬಲಾ ಮೀಡಿಯ ಕೈಕಂಬ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.