ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಬೆಳ್ಳಾರೆ ಶಾಖೆಯ ವತಿಯಿಂದ ದೇಶದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ದಾರುಲ್ ಹಿಕ್ಮ ವಠಾರದಲ್ಲಿ ಆಚರಿಸಲಾಯಿತು. ದಾರುಲ್ ಹಿಕ್ಮ ಅಧ್ಯಕ್ಷರಾದ ಹಸನ್ ಸಖಾಫಿ ಬೆಳ್ಳಾರೆ ಧ್ವಜಾರೋಹಣಗೈದು ದುಆ ನೆರೆವೇರಿಸಿದರು.
ಮುಹಮ್ಮದ್ ಶಮೀರ್ ನಈಮಿ ಪೆರುವಾಜೆ ಈ ಮಣ್ಣು ನಮ್ಮದು ಪ್ರಮೇಯ ಭಾಷಣಗೈದರು. ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ ಆಶಂಸಗೈದರು, ಇರ್ಷಾದ್ ಮುಸ್ಲಿಯಾರ್ ಬೆಳ್ಳಾರೆ ರಾಷ್ಟ್ರ ಗೀತೆ ಹಾಡಿದರು.
ಎಸ್.ವೈ.ಎಸ್ ಈಸ್ಟ್ ಝೋನ್ ಸದಸ್ಯ ಶಂಸುದ್ದೀನ್ ಝಂಝಂ, ಕರಾವಳಿ ಮುಹಮ್ಮದ್, ಎಸ್ಸೆಸ್ಸೆಫ್ ಬೆಳ್ಳಾರೆ ಶಾಖೆ ಅಧ್ಯಕ್ಷ ರಾಶಿದ್ ಅಹ್ಸನಿ, ಕಾರ್ಯದರ್ಶಿ ಸಾಬಿತ್, ಕೋಶಾಧಿಕಾರಿ ಝಾಯಿದ್ ಬೆಳ್ಳಾರೆ, ಮುಹಮ್ಮದ್ ಹಾಜಿ ಬಿಸ್ಮಿಲ್ಲಾ, ಹನೀಫ್ ಸಖಾಫಿ, ಹಮೀದ್ ಸಖಾಫಿ, ಶಂಸುದ್ದೀನ್ ಸಹದಿ,ಹಸನ್ ಮಾಸ್ತಿಕಟ್ಟೆ ಹಾಗೂ ಎಸ್ಸೆಸ್ಸೆಫ್,ಎಸ್.ವೈ.ಎಸ್ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಕಲಾಂ ಝುಹ್ರಿ ಬೆಳ್ಳಾರೆ ಸ್ವಾಗತಿಸಿ ಶಮ್ಮಾಸ್ ಮುಸ್ಲಿಯಾರ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.