ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಪುತ್ತೂರು ಸಮೀಪದ ಸಂಪ್ಯ ಜುಮಾ ಮಸೀದಿಯಲ್ಲಿ ಕೋವಿಡ್ ಎಂಬ ಮಹಾಮಾರಿಯ ನಡುವೆ ಎಲ್ಲಾ ನಿಯಮಗಳನ್ನು ಪಾಲಿಸಿ 74ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು.
ಸಂಪ್ಯ ಜುಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಹಾಜಿ ಅಬ್ದುಲ್ ಜಲೀಲ್ ಹಾಜಿ ಧ್ವಜಾರೋಹಣ ನಡೆಸಿದರು ತದ ನಂತರ ತೌಸೀಫ್ ಕೆನರಾ ಹಾಗೂ ದಾರೂಲ್ ಉಲೂಂ ಹಳೆವಿಧ್ಯಾರ್ಥಿ ಅಫ್ನಾನ್ ಸಂಪ್ಯ ರಾಷ್ಟ್ರಗೀತೆಯ ಮೂಲಕ ಚಾಲನೆ ನೀಡಿದರು ಬಳಿಕ ಸಭಾ ಕಾರ್ಯಕ್ರಮ ನಡೆಯಿತು ಸಂಪ್ಯ ಮದರಸ ಸದರ್ ಉಸ್ತಾದರಾದ ಹನೀಫ್ ಮುಸ್ಲಿಯರ್ ಸ್ವಾಗತಿಸಿದರು ಉಧ್ಘಾಟನಾ ಬಾಷಣ ಮಾಡಿದ ನಮ್ಮ ಮಸೀದಿಯ ಖತೀಬರಾದ ಬಹು| ಅಲ್-ಹಾಜಿ ಅಬ್ದುಲ್ ಹಮೀದ್ ದಾರಿಮಿ ಅಲ್ಲಿ ನೆರೆವೇರಿದ ಅವರಿಗೆ ಸ್ವಾತಂತ್ರ್ಯದ ಬಗ್ಗೆ ಸವಿಸ್ತಾರವಾಗಿ ವಿವರಿಸಿ ದುಆಃ ನಡೆಸಿದರು.
ಪ್ರತಿಜ್ಞಾ ಭಾಷಣವನ್ನು ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷರಾದ ಹಬೀಬ್ ಕೆಂಪಿ ಅವರು ನೆರೆವೇರಿಸಿದರು ಕೊನೆಯಲ್ಲಿ ನ್ಯಾಯ ದೊರಕುವವರೆಗೂ ಹೋರಾಟ ನಡೆಯಲಿದೆ ಎಂದು ಸಿಎಂ ಉಸ್ತಾದರ ಕೊಲೆಗಾರರ ವಿರುದ್ದ ಪ್ರತಿಭಟನೆಯು ನಡೆಯಿತು ಇ ಕಾರ್ಯಕ್ರಮದಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿಗಳಾದ ಇಸ್ಮಾಯಿಲ್ ಬೈಲಾಡಿ ಸದಸ್ಯರಾದ ಅಬ್ದುಲ್ ಅಝೀಝ್ ಮತ್ತು ನಿಸಾರ್ ಎಸ್.ಕೆ.ಎಸ್.ಎಸ್.ಎಪ್ ಸಂಪ್ಯ ಕ್ಲಸ್ಟರ್ ಅಧ್ಯಕ್ಷರಾದ ಕರೀಂ ಫೈಝಿ ಉಸ್ತಾದರು ಸಂಪ್ಯ ಮಸೀದಿಯ ಮುಅಝಿನ್ ಉಸ್ತಾದರೂ ನೂರೂಲ್ ಹುದಾ ಕಾರ್ಯದರ್ಶಿ ಮುಸ್ತಾ ನೆಕ್ಕರೆ ಸಂಪ್ಯ ಮಸೀದಿಯ ಅದೀನದಲ್ಲಿರುವ ಎಲ್ಲಾ ಕಮೀಟಿಯ ಸದಸ್ಯರೂ ಹಾಯ್ ಫ್ರೆಂಡ್ಸ್ ಸದಸ್ಯರೂ ಸಂಪ್ಯ ಮದರಸ ವಿಧ್ಯಾರ್ಥಿಗಳು ಮುಅಲ್ಲಾ ನಿವಾಸಿಗಳು ವಿವಿದ ಸಂಘಸಂಸ್ಥೆಗಳ ಸದಸ್ಯರುಗಳೂ ಪಾಲ್ಗೊಂಡರು ಕೊನೆಯಲ್ಲಿ ಸಿಹಿ ತಿಂಡಿ ವಿತರಣೆಯ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.