ಉಪ್ಪಿನಂಗಡಿ(www.vknews.in): ನಾಗರಿಕ ಹಿತರಕ್ಷಣಾ ವೇದಿಕೆ ಕೆಮ್ಮಾರ ಇದರ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್ ಕಾರ್ಡ್ ಅಭಿಯಾನವು ಕ್ಯೊಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಂಡಿಬಾಗಿಲು ಎಸ್ಕೆಎಸ್ಎಸ್ಎಫ್ ಇದರ ಮಾಜಿ ಅಧ್ಯಕ್ಷಾರದ ಉದ್ಯಮಿ ಕಲಂದರ್ ಎಸ್ಪಿ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ಸಾಮಾಜಿಕ ಕಾರ್ಯವನ್ನು ಕೊಂಡಾಡಿದರು. ಸಂದರ್ಭೋಚಿತವಾಗಿ ಮಾತನಾಡಿದ ಅಡ್ವಕೇಟ್ ಕಬೀರ್ ಕೆಮ್ಮಾರ ಕಳೆದ ಮೂರು ವರ್ಷಗಳಿಂದ ಕೆಮ್ಮಾರದ ಯುವ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ನಾಗರಿಕ ಹಿತರಕ್ಷಣಾ ವೇದಿಕೆಯು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗುತ್ತಿದೆ. ಇವರ ಮೆಚ್ಚುಗೆಯ ಕಾರ್ಯ ಮತ್ತಷ್ಟು ಸದೃಢಗೊಳ್ಳಲು ಎಲ್ಲರೂ ಸಹಕರಿಸಿಕೊಂಡು ಮುನ್ನಡೆಯಬೇಕು, ಹಾಗಿದ್ದಲ್ಲಿ ಮಾತ್ರ ಸುಂದರ ಸಮಾಜ ನಿರ್ಮಿಸಲು ಸಾಧ್ಯವೆಂದರು.
ಅಧ್ಯಕ್ಷೀಯ ಭಾಷಣಗೈದ ನಾಗರಿಕ ಹಿತರಕ್ಷಣಾ ವೇದಿಕೆ ಕೆಮ್ಮಾರ ಮತ್ತು ಎಐಎಂಡಿಎಫ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಅಝೀಝ್ ಬಿ.ಕೆ ಆಯುಷ್ಮಾನ್ ಭಾರತ್ ಕಾರ್ಡ್ ಇದರ ಉಪಯೋಗ ಮತ್ತು ಇನ್ನಿತರ ಸರಕಾರಿ ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಸರಿಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಆಯುಷ್ಮಾನ್ ಕಾರ್ಡ್ ಜೊತೆ ಕಾರ್ಮಿಕ ಕಾರ್ಡ್, ಪಡಿತರ ತಿದ್ದುಪಡಿ,ಪಾನ್ ಕಾರ್ಡ್, ಕಿಸಾನ್ ಕಾರ್ಡ್ ಹೀಗೆ ಹಲವಾರು ಸವಲತ್ತುಗಳ ಸದುಪಯೋಗ ಪಡೆದುಕೊಂಡರು. ವೇದಿಕೆಯಲ್ಲಿ ಕವಿ ಸಾಮಾಜಿಕ ಹಿತಚಿಂತಕ ಅಬ್ದುಲ್ ಗಫ್ಪಾರ್ ಕೆಮ್ಮಾರ, ಲತೀಫ್ ಗಂಡಿಬಾಗಿಲು, ನಿಸಾರ್ ಗಂಡಿಬಾಗಿಲು ಮತ್ತು SYS ಕೆಮ್ಮಾರ ಶಾಖೆಯ ಕೋಶಾಧಿಕಾರಿ ಅಶ್ರಫ್ ಆಕಿರೆ ಮುಂತಾದವರು ಉಪಸ್ಥಿತರಿದ್ದರು.ಜಮಾಲ್ ಎಸ್ಪಿ, ಆಸಿಫ್ ಗಂಡಿಬಾಗಿಲು,ಜಲೀಲ್ ಎನ್ಎ,ನೌಫಲ್ ಕೆಮ್ಮಾರ, ಹೀಗೆ ಹಲವರು ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಉತ್ತೇಜನ ನೀಡಿದರು. ರವೂಫ್ ಬಡಿಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಹಕೀಮ್ ಆಕಿರೆ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.