(www.vknews.com) : ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಡಗನ್ನೂರು ಸಮಿತಿಯ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆಯು ಹೊಸನಗರದಲ್ಲಿ ನಡೆಯಿತು. ಮಹಮ್ಮದ್ ಸಖಾಫಿ ಅವರು ಧ್ವಜಾರೋಹಣ ನಡೆಸಿ ಶುಭಹಾರೈಸಿದರು.
ಎಸ್.ಡಿ.ಪಿ.ಐ ಬಡಗನ್ನೂರು ಸಮಿತಿ ಸದಸ್ಯ ಶರಫುದ್ದೀನ್ ಮೈಂದನಡ್ಕ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ತ್ಯಾಗ ಬಲಿದಾನವನ್ನು ಸ್ಮರಿಸುತ್ತಾ, ಭಾರತದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸುವ ಮೂಲಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ಬಡಗನ್ನೂರು ಸಮಿತಿ ಅಧ್ಯಕ್ಷ ಜಾಬಿರ್ ಕೊಯಿಲ ಉಪಸ್ಥಿತರಿದ್ದರು. ಸಂಶುದ್ದೀನ್ ಪೆರಿಗೇರಿ ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.