(www.vknews.com) : ಕೊರೋನ ಎಂಬ ಮಹಾ ಕಾಯಿಲೆಗೆ ಜಗತ್ತು ನಿಬ್ಬೆರಗಾಗಿ ನಿಂತಿದ್ದಂತೂ ಸತ್ಯ.ಈ ಮಹಾಮಾರಿಯಿಂದ ಮಾನವ ಜನಾಂಗ ಇನ್ನಿಲ್ಲದ ಸಂಕಟ ಎದುರಿಸುವುದರ ಜೊತೆಗೆ ಅನೇಕ ಪಾಠಗಳನ್ನು ಕೂಡಾ ಕಲಿತುಕೊಂಡಿದೆ.ಆಡಂಬರವಿಲ್ಲದೇ ಬದುಕಬಹುದೆಂದು ತಿಳಿಯುವುದರ ಜೊತೆಗೆ ಕೊಂಡುಕೊಳ್ಳುವ ಮತ್ತು ಕೊಡುವ ಗುಣ ಕೂಡ ವಾಡಿಕೆಯಾಗಿದೆ.ಅದರ ಜೊತೆಗೆ ನೂರಾರು ಕಾಯಿಲೆಗಳಿಗೆ ನೂರಾರು ವೈದ್ಯರನ್ನು ಮುಂಗಡ ಬುಕ್ಕಿಂಗ್ ಗಾಗಿ ಪರದಾಡುತ್ತಿದ್ದ ಮತ್ತು ಖಾಸಗಿ ಆಸ್ಪತ್ರೆ ಯಲ್ಲಿ ಮಲಗಿ ಬರುವ ಅಭ್ಯಾಸ ಇಟ್ಟುಕೊಂಡಿದ್ದ ಯಾರ ಸುಳಿವು ಕೂಡಾ ಈಗ ಕಾಣಿಸುತ್ತಿಲ್ಲ.ಇದೆಲ್ಲದರ ಜೊತೆಗೆ ನಮ್ಮ ಜಿಲ್ಲೆಯ ಸರಕಾರಿ ಕೇಂದ್ರ ಆಸ್ಪತ್ರೆ ಯು ಮಾಡಿದ ಸಾಧನೆ ಎಲ್ಲರನ್ನೂ ನಿಬ್ಬೆರಗು ಮಾಡುವಂತೆ ಮಾಡಿದೆ.
ಸರಕಾರಿ ಆಸ್ಪತ್ರೆ ಅಂದರೆ ಅದು ಜನಸಾಮಾನ್ಯರ ಆಸ್ಪತ್ರೆ. ಚಿಕಿತ್ಸೆ ಯೂ ಅಷ್ಟು ಸಮರ್ಪಕವಾಗಿ ಇರೋದಿಲ್ಲ ಎಂಬ ಮಾತನ್ನು ಇದೀಗ ಜಿಲ್ಲಾ ಕೇಂದ್ರ ಆಸ್ಪತ್ರೆ ಯಾದ ವೆನ್ಲಾಕ್ ಆಸ್ಪತ್ರೆ ಸುಳ್ಳಾಗಿಸಿದೆ.
ನನ್ನ ಸೇವಾ ಕೇಂದ್ರ ವಾಗಿರುವ ಚೊಕ್ಕಬೆಟ್ಟು ಊರಿನ ನನ್ನ ಸ್ನೇಹಿತರಾದ ಕಬೀರ್ ಎಂಬವರ ಮಗು ನ್ಯುಮೋನಿಯಾ ಜ್ವರ ದಿಂದ ಬಳಲುತ್ತಿತ್ತು.ಜೊತೆಗೆ ಡೌನ್ ಸಿಂಡ್ರೋಮ್ ಕೂಡಾ ಇತ್ತು.ಕೊರೋನ ಸೋಂಕು ಮಗುವನ್ನು ಇನ್ನಷ್ಟು ದುರ್ಬಲ ಗೊಳಿಸಿತ್ತು.ಲಂಗ್ಸ್ ದುರ್ಬಲ ಆಗಿರುವುದರಿಂದ ಆಕ್ಸಿಜನ್ ಅಳವಡಿಕೆ ಅಸಾಧ್ಯವಾಗಿತ್ತು.ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆ ತನ್ನಿಂದ ಏನನ್ನೂ ಮಾಡಲಾಗದೇ ಕೈ ಚೆಲ್ಲಿದಾಗ ನೆರವಿಗೆ ಬಂದ ಆಸ್ಪತ್ರೆ ವೆನ್ಲಾಕ್ ಆಗಿತ್ತು.ವೆಂಟಿಲೇಟರ್ ಗೆ ಬದಲಾಗಿ ಹೈ ಪ್ಲೋ ಎಂಬ ಯಂತ್ರವನ್ನು ಬಳಸಿ ಸೂಕ್ತ ಚಿಕಿತ್ಸೆ ನೀಡಲಾಯಿತು.
ಆಸ್ಪತ್ರೆಯ ಡಿಎಂಒ ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಿದರು.ಮುಖ್ಯ ವೈದ್ಯರಾದ ಡಾ;ಅಬ್ದುಲ್ ಬಾಸಿತ್, ಡಾ,ಪ್ರಸನ್ನ,ಡಾ,ಪಾಯಲ್ ಡಾ,ಅನುರಾಗ್ ಮತ್ತು ಸಿಬ್ಬಂದಿ ವರ್ಗ ಸತತವಾಗಿ ಹದಿನೈದು ದಿನಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಶುಶ್ರೂಷೆ ಮಾಡಿದ ಕಾರಣ ಮಗು ಈಗ ಮನೆಯಲ್ಲಿ ಆರೋಗ್ಯದಲ್ಲಿದೆ.ಪ್ರತಿಯೊಂದು ಕಾಯಿಲೆಗೂ ಖಾಸಗಿಯನ್ನು ಆಶ್ರಯಿಸುವ ಜನ ಇನ್ನಾದರೂ ಸರಕಾರಿ ಆಸ್ಪತ್ರೆಯ ಸಾಧನೆ ಮತ್ತು ಅಲ್ಲಿಯ ವೈದ್ಯರ ಕಾರ್ಯಕ್ಷಮತೆ ಯನ್ನು ಅರಿತು ಸದುಪಯೋಗ ಪಡಿಸಿಕೊಂಡು ನಮ್ಮದೇ ಸರಕಾರಿ ವ್ಯವಸ್ಥೆಯ ನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಮುಂದಾಗುವ ಜೊತೆಗೆ ವೆನ್ಲಾಕ್ ಆಸ್ಪತ್ರೆ ಯ ಎಲ್ಲಾ ವೈದ್ಯರಿಗೆ ಮತ್ತು ನಿರ್ವಾಹಕರು ಹಾಗೂ ಸಿಬ್ಬಂದಿ ಗಳಿಗೆ ಬಿಗ್ ಸಲ್ಯೂಟನ್ನು ಸಲ್ಲಿಸೋಣ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.