(www.vknews.com) : 74 ನೇ ಸ್ವಾತಂತ್ರೋತ್ಸವ ದ ಅಂಗವಾಗಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ವತಿಯಿಂದ “Prevention is better than cure” Campaign ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ನೂರುಲ್ ಇಸ್ಲಾಂ ಮದ್ರಸ ಹಾಗೂ ಅಂಗನವಾಡಿ ಕೇಂದ್ರ ಕುಂಜೂರಿನಲ್ಲಿ, ಬ್ಯಾರಿ ನಿಖಾಃ ಹೆಲ್ಪ್ ಲೈನ್ ಅಂತಾರಾಷ್ಟ್ರೀಯ ಸಮಿತಿ ಯ ಅಧ್ಯಕ್ಷರಾದ ಇಮ್ತಿಯಾಜ್ ಉಚ್ಚಿಲ ಇವರು ಸಾಂಕೇತಿಕ ಮುಖಕವಚ (ಫೇಸ್ ಮಾಸ್ಕ್) ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಕುಂಜೂರಿನ ನೂರುಲ್ ಇಸ್ಲಾಂ ಮದ್ರಸ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಆಡಳಿತ ಕಮಿಟಿಯ ಗಣ್ಯರಾದ A.K ಶಫೀ, ಮುಹಮ್ಮದ್ ಕುಚ್ಚಿಕಾಡ್, ರಹೀಂ ಕುಚ್ಚಿಕಾಡ್, ಮಾಜಿ ಪಂಚಾಯಿತಿ ಸದಸ್ಯರು ರಹೀಂ ಕುಂಜೂರು, ಕಮಿಟಿಯ ಇತರ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
ಹಾಗೂ ಕುಂಜೂರು ಸ್ಪೋರ್ಟ್ಸ್ ಕ್ಲಬ್ ಮತ್ತು ಅಂಗನವಾಡಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ರಾಘವೇಂದ್ರ ಆಚಾರ್ಯ, ಮಾಜಿ ಪಂಚಾಯಿತಿ ಅಧ್ಯಕ್ಷರು ಯಶವಂತ ಶೆಟ್ಟಿ, ಮಾಜಿ ಪಂಚಾಯಿತಿ ಸದಸ್ಯರು ರಹೀಂ ಕುಂಜೂರು, ವಕೀಲರಾದ ಸುನೀಲ್ ಶಿವ ಮೂಲ್ಯ, ಇಕ್ಬಾಲ್ ಕುಂಜೂರು, ರಾಕೇಶ್ ಕುಂಜೂರು, ಅಂಗನವಾಡಿ ಮುಖ್ಯಸ್ಥೆ ಜ್ಯೋತಿ, ಆಶಾ ಕಾರ್ಯಕರ್ತೆ ಶ್ರೀಮತಿ, ಸ್ಪೋರ್ಟ್ಸ್ ಕ್ಲಬ್ ಸದಸ್ಯರು, ಪುಟಾಣಿಗಳು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
ಕೋವಿಡ್ 19 ಸರಪಳಿ ತಡೆಗಟ್ಟಲು ಮುಖಕವಚ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ ಎಂಬ ಆಶಯದೊಂದಿಗೆ,
ಬ್ಯಾರಿ ನಿಖಾಃ ಹೆಲ್ಪ್ ಆಡಳಿತ ಕಮಿಟಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.