(www.vknews.in)ಖಾಸಗಿ ಶಾಲೆಗಳು ನಮ್ಮ ಊರುಗಳಲ್ಲಿ ನೆಲೆಯೂರಿ ಸುಮಾರು20 ರಿಂದ 25 ವರ್ಷಗಳು ಆಗುತ್ತಾ, ಹಳದಿ ಬಸ್ಸುಗಳು ಎಲ್ಲಾ ಗ್ರಾಮ ಗ್ರಾಮಗಳಿಗೆ ಬರುವುದರೊಂದಿಗೆ, ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬರಲು ಶುರು ಮಾಡಿ ಕೂಡ ಸುಮಾರು 20 ರಿಂದ 25 ವರ್ಷ ಆಗುತ್ತಾ ಬಂದಿದೆ.
ಈ ಶೈಕ್ಷಣಿಕ ವರ್ಷ ಕೋವಿದ್ 19 ಕಾರಣ ಶೈಕ್ಷಣಿಕ ಚಟುವಟಿಕೆಗಳು ಇಲ್ಲದೆ ಮಕ್ಕಳು ಮನೆಯಲ್ಲೇ ಇರುವ ಪರಿಸ್ಥಿತಿ ಬಂದು ತಲುಪಿ,ಕೆಲವು ಮಕ್ಕಳು ಕೆಲಸಕ್ಕೆ ಹೋಗುವಂತಹ ಅನಿವಾರ್ಯತೆಗೆ ಒಳಪಟ್ಟಿರುವ ವಿಷಯ ಹೆಚ್ಚಿನ ಸ್ಥಳಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೆಲ್ಲಾ ಮನಗಂಡು ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿಯು ಆನ್ಲೈನ್ ಶಿಕ್ಷಣದ ಬಗ್ಗೆ ಮತ್ತು ಅದಕ್ಕೆ ಪೂರಕವಾಗಿ ಇಂಟರ್ನೆಟ್, ಮೊಬೈಲ್ , ದೂರದರ್ಶನ ರೇಡಿಯೋ ಮೊದಲಾದ ವ್ಯವಸ್ಥೆಗಳು ಮಾಡಲು ಆಗದ ಮಕ್ಕಳಿಗೆ ಹೇಗೆ ಶಿಕ್ಷಣವನ್ನು ಕೊಡಬಹುದು ಎಂಬುದರ ಬಗ್ಗೆ ಚರ್ಚಿಸಿ ಅವರ ಸಲಹೆಯಿಂದ ರೂಪಿತವಾದ ವಠಾರ ಶಿಕ್ಷಣ ಎನ್ನುವ ಪರಿಕಲ್ಪನೆಯನ್ನು ಇಲಾಖೆಗೆ ಸೂಚಿಸಿದಾಗ ,ಇಲಾಖೆಯು ವಿದ್ಯಾಗಮ ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಸರಕಾರಿ ಶಾಲೆಗಳ ಮಕ್ಕಳಿಗಾಗಿ ಶಿಕ್ಷಣ ಕೊಡುವ ಉದ್ದೇಶದಿಂದ ಅದರ ಬಗ್ಗೆ ವಿಸ್ತೃತವಾದ ಆದೇಶವನ್ನು ಹೊರಡಿಸಲಾಗಿತ್ತುಜಿ
ಈ ಆದೇಶವು ನಮ್ಮ ರಾಜ್ಯದಲ್ಲಿ ಸರಕಾರಿ ಶಾಲೆಗಳಲ್ಲಿ ಸಂಚಲನವನ್ನು ಉಂಟು ಮಾಡಿತು. ಹಳ್ಳಿ ಹಳ್ಳಿಯ ಮಕ್ಕಳಿಗೆ ಉಚಿತ ಶಿಕ್ಷಣವು ಮನೆ ಬಾಗಿಲಿಗೆ ತಲುಪುವ ಪರಿಸ್ಥಿತಿ ಬಂದದ್ದು ಪೋಷಕರ ಹಾಗೂ ಶಾಲಾಭಿವೃದ್ಧಿ ಸಮಿತಿಯವರಿಗೆ , ಇಲ್ಲಗಳೇ ಹೇಳುತ್ತಿದ್ದ ಸರಕಾರಿಶಾಲೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಲು ಅವಕಾಶ ಉಂಟಾಗಿದೆ.
ಖಾಸಗಿ ಶಾಲೆಗೆ ಶುಲ್ಕವನ್ನು ಬರಿಸಿ ಕೂಡಾ ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುವುದಿಲ್ಲ ಎಂದು ಅರಿತಾಗ ಪೋಷಕರು ತಾವಾಗಿಯೇ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಉತ್ಸುಕರಾಗಿ ಬರುತ್ತಿರುವುದು ಸಂತೋಷದ ವಿಷಯ.
ಇದನ್ನರಿತ ಖಾಸಗಿ ಶಾಲೆಯವರ ಸಂಘವು ಈ ವಿದ್ಯಾಗಮದ ಬಗ್ಗೆ ಹಾಗೂ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಶಿಕ್ಷಕರ ಬಗ್ಗೆ ಆಪಾದನೆಗಳನ್ನು ಹಾಕುತ್ತಿರುವುದು ನೋಡಿದರೆ ಕೋವಿದ್ 19 ಸರಕಾರಿ ಶಾಲೆಗಳಿಗೆ ವರದಾನ ಆಗಿರುವುದು ಗೋಚರಿಸುತ್ತಿದೆ.
ಆದೇಶದಲ್ಲಿ ಸರಕಾರಿ ಶಾಲೆಗಳ ಕೋಣೆಯ ಒಳಗೆ ಪಾಠ ಮಾಡುವಂತಿಲ್ಲ, ಎನ್ನುವ ವಿಷಯದಲ್ಲಿ ನಮಗೆ ವಿರೋಧ ವಿದ್ದರೂ ಕೂಡ ಸರಕಾರದ ಈ ಆದೇಶವನ್ನು ನಾವು ಸ್ವಾಗತಿಸುತ್ತೇವೆ . ಈ ವಿಧ್ಯಾಗಮ ಪರಿಕಲ್ಪನೆಗೆ ಪೂರಕವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕು ಗಳು ಹೆಚ್ಚಿನ ಬದ್ಧತೆಯಿಂದ ಕೆಲಸ ಮಾಡುತ್ತಿರುವುದು ನಮ್ಮ ಶೃದ್ದೆಯಲ್ಲಿ ಬಂದಿದೆ
ಅದರಲ್ಲೂ ಬೆಳ್ತಂಗಡಿ ತಾಲೂಕಿನ ಹಲವು ಕ್ಲಸ್ಟರ್ ಗಳು ಅಭೂತಪೂರ್ವ ಯಶಸ್ಸನ್ನು ಕಂಡಿದ್ದು ಅದಕ್ಕೆ ಪೂರಕವಾಗಿ ಈಗಾಗಲೇ 150 ಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆಗಳ ಶುಲ್ಕವನ್ನು ಭರಿಸಲಾಗದೆ,ಹಾಗೂ ಗುಣಮಟ್ಟದ ಶಿಕ್ಷಣ ಮನೆ ಬಾಗಿಲಿಗೆ ಉಚಿತವಾಗಿ ತಲುಪುತ್ತಿರುವುದರಿಂದ ಸರಕಾರಿ ಶಾಲೆಗೆ ಸೇರ್ಪಡೆ ಆಗಿರುವುದು ಸರಕಾರಿ ಶಾಲೆಗಳು ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಗಳಾಗಲಿ ಎಂಬ ದ್ಯೆಯ ವಾಕ್ಯದಿಂದ ಶಾಲೆಗಳನ್ನು ಉಳಿಸಲು ಶ್ರಮಿಸುತ್ತಿರುವ ನಮಗೆಲ್ಲರಿಗೂ ಸಂತೋಷದ ವಿಷಯ.
ಅಲ್ಲಿಯ ತಾಲೂಕು ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಶ್ವರಿ,ಸಮನ್ವಯಾಧಿಕಾರಿ ಶ್ರಿ ಶಂಭು ಶಂಕರ್, ಬಿ ಅರ್ ಪಿ ಗಳು , ಸಿ ಅರ್ ಪಿ ಗಳು ತೆಗೆದು ಕೊಳ್ಳುವ ಮುತುವರ್ಜಿಯು ಎಲ್ಲಾ ಸರಕಾರಿ ಶಾಲೆಗಳಿಗೆ ಮಾದರಿ ಆಗಬೇಕಿದೆ.
ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ, ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣವನ್ನು ತಲುಪಿಸುವ ಕಾರ್ಯದಲ್ಲಿ ಎಲ್ಲಾ ಪೋಷಕರು ಮತ್ತು ಎಸ್ಡಿಎಂಸಿ ಸಮನ್ವಯ ವೇದಿಕೆ ಪದಾಧಿಕಾರಿಗಳು ಕೈ ಜೋಡಿಸುವ ಮೂಲಕ ಶಿಕ್ಷಕರಿಗೆ ಪ್ರೋತ್ಸಾಹ ಕೊಡುವಂತಾಗಬೇಕು. ತಮ್ಮ ತಮ್ಮ ಜನವಸತಿ ಪ್ರದೇಶಕ್ಕೆ ಶಿಕ್ಷಕರು ಬರುವಾಗ ಅವರಿಗೆ ಹಾಗೂ ಮಕ್ಕಳಿಗೆ ಬೇಕಾದ ಸಹಾಯವನ್ನು ಪೋಷಕರಾದ ನಾವು ಮಾಡಿ ಕೊಡಬೇಕಿದೆ.
ಈ ಕೋವಿದ್ ಕಾಲದಲ್ಲಿ ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಿಕ್ಷಕರಿಗೆ ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು
ಮೊಯ್ದಿನ್ ಕುಟ್ಟಿ ರಾಜ್ಯಾಧ್ಯಕ್ಷರು ಎಸ್ ಡಿ ಎಂ ಸಿ ಸಮನ್ವಯ ವೇದಿಕೆ
9743734020
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.