(www.vknews.com) : ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ SKSSF ಕಕ್ಕಿಂಜೆ ಶಾಖೆ ವತಿಯಿಂದ ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಿರಲಿ ಎಂಬ ಘೋಷಣೆಯೊಂದಿಗೆ ಫ್ರೀಡಂ ಸ್ಕ್ವಾರ್ ಹಾಗೂ C.M.ಉಸ್ತಾದ್ ಹತ್ಯೆಯ ನ್ಯಾಯಕಾಗಿ ಪ್ರತಿಭಟನೆ ಶಾಖಾ ಉಪಾಧ್ಯಕ್ಷರಾದ ಝುಬೈರ್ ಬಂಡಸಾಲೆ ಇವರ ಅಧ್ಯಕ್ಷತೆಯಲ್ಲಿ ಕಕ್ಕಿಂಜೆ ಮಸೀದಿ ಅಂಗಣದಲ್ಲಿ ನಡೆಯಿತು.ಕಕ್ಕಿಂಜೆ ಜುಮಾ ಮಸೀದಿ ಖತೀಬರಾದ ಸಂಶುಧ್ಧೀನ್ ಅಶ್ರಫಿ ಉಧ್ಘಾಟನೆ ನಿರ್ವಹಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸಿದರು.ಸಮಸ್ತ ವಿಧ್ಯಾಭ್ಯಾಸ ಬೋರ್ಡ್ ಮುಫತ್ತಿಷ್ ಹಮೀದ್ ದಾರಿಮಿ ಕಕ್ಕಿಂಜೆ ದುವಾ ನಡೆಸಿದರು.
ಕಕ್ಕಿಂಜೆ ಜಮಾಅತ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಇವರು ಧ್ವಜಾರೋಹಣಗೈದರು.ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಸಿರಾಜ್ ಅರೆಕ್ಕಲ್ ಪ್ರತಿಜ್ಞೆ ಬೋಧಿಸಿದರು.SKSSF ಬೆಳ್ತಂಗಡಿ ವಲಯ ಅಧ್ಯಕ್ಷರಾದ ನಝೀರ್ ಅಝ್ಹರಿ ಸಂದೇಶ ಭಾಷಣ ಮಾಡುತ್ತಾ ಆಧುನಿಕ ಭಾರತದ ಸ್ಥಿತಿಗತಿಗಳ ಬಗ್ಗೆ ಪ್ರಸ್ಥಾಪಿಸಿದರು.ಭಾರತದಲ್ಲಿ ಎಲ್ಲಾ ಧರ್ಮ ಜಾತಿಯವರಿಗೂ ಅವರವರ ವಿಶ್ವಾಸದಂತೆ ಬದುಕುವ ಧಾರ್ಮಿಕ ಸ್ವಾತಂತ್ರ್ಯವಿದೆ ಅದನ್ನು ಕಸಿದುಕೊಳ್ಳುವ ಯಾವುದೆ ಪ್ರಯತ್ನ ಸಪಲವಾಗದು ಎಂದರು.ಕೋಮುವಾದ ಮತ್ತು ತೀರ್ವ ಚಿಂತನೆಗಳಿಂದ ಸಮಾಜಕ್ಕೆ ನಷ್ಟವಲ್ಲದೆ ಯಾವುದೇ ಲಾಭ ಉಂಟಾಗದು.ಯಾರ ಪ್ರಚೋದನೆಗೂ ಒಳಗಾಗದೇ ಶಾಂತಿಯಿಂದ ಕಾನೂನಾತ್ಮಕವಾಗಿ ಸಮಾಜಕ್ಕೆ ಬರುವ ಸವಾಲುಗಳನ್ನು ಸಹನೆಯೊಂದಿಗೆ ಎದುರಿಸಬೇಕೆ ಹೊರತು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಾದ ಕ್ರಮವಲ್ಲ ಸಹನೆಯಿರುವರೊಂದಿಗೆ ಅಲ್ಲಾಹನ ಸಹಾಯವಿದೆ ಎಂಬ ಕುರಾನಿನ ಸೂಕ್ತವನ್ನು ಉಲ್ಲೇಖಿಸುತ್ತಾ ನುಡಿದರು.
ಕೆಲವು ಅವಿವೇಕಿಗಳು ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ತರುವ ರೂಪದಲ್ಲಿ ಸಂದೇಶಗಳನ್ನು ರವಾನಿಸುವ ಮತ್ತು ಕೆಲವು ಟಿವಿ ಮಾಧ್ಯಮಗಳು ಸಮಾಜದ ಮಧ್ಯೆ ವಿಷ ಬೀಜ ಬಿತ್ತುವ ರೂಪದಲ್ಲಿ ವಾರ್ತೆಗಳನ್ನು ಪ್ರಸಾರ ಮಾಡುವುದರ ಬಗ್ಗೆ ಸರಕಾರ ಗಮನಹರಿಸಬೇಕೆಂದು ಆಗ್ರಹಿಸಿದರು.ಸಮಾಜದ ಯುವಕರು ಉನ್ನತ ವಿಧ್ಯಾಭ್ಯಾಸದ ಮೂಲಕ ಸರಕಾರದIPS IAS ನಂತಹ ಉನ್ನತ ಹುದ್ದೆಗಳಿಗೆ ಸೇರುವ ನಿಟ್ಟಿನಲ್ಲಿ ಪ್ರತಿ ಮೊಹಲ್ಲಗಳು ಪ್ರಯತ್ನಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.ಬಡತನ,ನಿರುಧ್ಯೋಗ ಸಮಸ್ಯೆಗಳು ಅಧಿಕವಾದ ಕಾರಣದಿಂದ ಅಪರಾದ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಕೊರೋಣ ಸಂಕಷ್ಟ ಕಾಲದಲ್ಲಿ ಸೇವೆಯಲ್ಲಿ ನಿರತರಾದ ಆಶಾ ಕಾರ್ಯಕರ್ತೆಯರು,ವೈದ್ಯರು,ಪೋಲಿಸರು,ಆಂಬುಲೆನ್ಸ್ ಚಾಲಕರು ಮತ್ತು ಮಾದರಿ ಅಂತ್ಯ ಸಂಸ್ಕಾರ ನಡೆಸಲು ಸಹಕರಿಸಿದ ವಿಖಾಯ ತಂಡ ಮತ್ತು ಇತರ ಸಮಾಜ ಸೇವಕರನ್ನು ಅಭಿನಂದಿಸಿದರು.ವಿವಿದತೆಯಲ್ಲಿ ಏಕತೆಯನ್ನು ಸಾರುವ ಭಾರತದ ಜಾತ್ಯಾತೀತ ಪರಂಪರೆಯನ್ನು ಉಳಿಸಿಕೊಳ್ಳಲು ಎಲ್ಲಾ ಧರ್ಮಿಯರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕೆಂದು ಆಹ್ವಾನ ನೀಡಿದರು.
ಕ್ಯಾಂಪಸ್ ವಿಂಗ್ ಮತ್ತು ತ್ವಲಬಾ ವಿಧ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.ನಂತರ ಖಾಝಿ ಸಿ ಎಂ ಉಸ್ತಾದರ ಕೊಲೆಯ ಬಗ್ಗೆ ನ್ಯಾಯಕ್ಕಾಗಿ ಪ್ಲೇಕಾರ್ಡ್ ಪ್ರದರ್ಶನ ನಡೆಸಲಾಯಿತು. ಜಮಾಅತ್ ಮಾಜಿ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ,ಮಾಜಿ ಕಾರ್ಯದರ್ಶಿ ದಾವುದು ಚಿಬಿದ್ರೆ,ಜಿಲ್ಲಾ ಕೌನ್ಸಿಲರ್ ಯಾಸಿರ್ ,ವಲಯ ಸಹಚಾರಿ ಸಂಚಾಲಕ ಇಂರಾನ್,ಎಸ್ ವೈ ಎಸ್ ಕಕ್ಕಿಂಜೆ ಶಾಖೆ ಅಧ್ಯಕ್ಷರಾದ ಇಲ್ಯಾಸ್,ಗಾಂದಿನಗರ ಮದರಸ ಅಧ್ಯಕ್ಷರಾದ ಅಝೀಝ್ ಎರ್ನಾಕುಲ, ಎಸ್ ಕೆ ಎಸ್ ಎಸ್ ಎಫ್ ಮಾಜಿ ಅಧ್ಯಕ್ಷರುಗಳಾದ ರಶೀದ್ ಜಝ್ವೀರ್,ಶರೀಫ್ ಎಚ್ ಎ,ಹಮೀದ್ ಕಟ್ಟೆ,ಹಾಗೂ ಇತರ ಜಮಿಅತ್ ಸದಸ್ಯರು,ಉಲಮಾ ಉಮರಾ ನೇತಾರರು,ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.ಎಸ್ ವೈ ಎಸ್ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್ ಸ್ವಾಗತಿಸಿದರು.ಝುಬೈರ್ ಕಕ್ಖಿಂಜೆ ವಂದಿಸಿ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.
#skssf-official-kakkinje unit
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.