ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಸೆಪ್ಟೆಂಬರ್ 1ರಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಿದ್ದು, ಆದರೆ ವಿದ್ಯಾರ್ಥಿಗಳಿಗೆ ಹಿಂದಿನ ಬಸ್ ಪಾಸನ್ನು ತೋರಿಸಿ ಪ್ರಯಾಣಿಸಲು ಸರಕಾರಿ ಬಸ್ ನಿರ್ವಾಹಕರು ಅಡಚನೆಯುಂಟು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪಾಸು ಇದ್ದರೂ ಪ್ರತೀ ದಿನ ಹಣ ವ್ಯಯಿಸುವುದು ಕಷ್ಟಕರವಾಗಿದೆ.
ಈ ಸಮಸ್ಯೆಯನ್ನು ಬಗೆಹರಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ನಿಯೋಗವು ಬಸ್ ಪಾಸಿನ ಅವಧಿಯನ್ನು ಮುಂದುವರಿಸಲು ಒತ್ತಾಯಿಸಿ ಸಹಾಯಕ ಕಮೀಷನರ್ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ರಿಯಾಜ್ ಅಂಕತಡ್ಕ, ಕಾರ್ಯದರ್ಶಿಯಾದ ಅನ್ಸಾರ್ ಬೆಳ್ಳಾರೆ,ಉಪಾಧ್ಯಕ್ಷರಾದ ಆಫ್ರೀದ್ ಕೂರ್ನಡ್ಕ, ಸುಳ್ಯ ವಲಯ ಅಧ್ಯಕ್ಷರಾದ ಅರ್ಫಿದ್ ಅಡ್ಕಾರ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.