ಕೊಲ್ಪೆ(ವಿಶ್ವಕನ್ನಡಿಗ ನ್ಯೂಸ್): ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಶಿಯೇಶನ್ ಕೋಲ್ಪೆ- ಇಡ್ಕಿದು ಇದರ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೊಂದಣಿ ಅಭಿಯಾನ ಕಾರ್ಯಕ್ರಮವು ಆ.30ರಂದು ಬದ್ರಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಸ್ಥಳೀಯ ಜಮಾತ್ ಖತೀಬರಾದ ಬಹು| ನಿಸಾರ್ ಸಖಾಫಿ- ಅಲ್ ಅಝ್ಹರಿ ದು:ಅ ಕಾರ್ಯಕ್ರಮ ದೊಂದಿಗೆ ಉದ್ಘಾಟಿಸಿದರು. ಬದ್ರಿಯಾ ಜುಮಾ ಮಸೀದಿ ಇದರ ಅಧ್ಯಕ್ಷರಾದ ಶೇಖಬ್ಬ ಕೋಲ್ಪೆ ಆಯುಷ್ಮಾನ್ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಿದರು.
ಜಮಾಅತ್ ಉಪಾಧ್ಯಕ್ಷರು ಸುಲೈಮಾನ್ ಕೋಲ್ಪೆ . ಪ್ರಧಾನ ಕಾರ್ಯದರ್ಶಿ ಲತೀಫ್ ದಲ್ಕಾಜೆ, ಕೋಶಾಧಿಕಾರಿ ಹಕೀಂ ಕೋಲ್ಪೆ , ಹಿರಿಯರಾದ ಅಬ್ಬಾಸ್ ಕೋಲ್ಪೆ. ಸದರ್ ಉಸ್ತಾದ್ ಉಮರ್ ಮುಸ್ಲಿಯಾರ್ ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಶಿಯೇಶನ್ ಇದರ ಅಧ್ಯಕ್ಷರಾದ ಅಜಿನಾಸ್ ಕೋಲ್ಪೆ, ಕಾರ್ಯದರ್ಶಿ ಆಸೀಫ್ ಕೋಲ್ಪೆ. ಸಹ ಕಾರ್ಯದರ್ಶಿ ಬಶೀರ್ ಸುಲೈಮಾನ್ ಸದಸ್ಯರಾದ ಬಶೀರ್ ಸಹದಿ . ನಿಸಾರ್, ಶರೀಫ್ ಕೋಲ್ಪೆ, ಪರಾಝ್,ಶರೀಫ್ ಬೆಂಗಳೂರು,ಹಾಗೂ ನೂರಕ್ಕಿಂತಲೂ ಅಧಿಕ ಫಲಾನುಭವಿಗಳು ಭಾಗವಹಿಸಿದರು. ನೌಶಾದ್ ಕೋಲ್ಪೆ ಕಾರ್ಯಕ್ರಮವನ್ನು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.