ಕಣ್ಣೂರು(ವಿಶ್ವ ಕನ್ನಡಿಗ ನ್ಯೂಸ್): ರಾಜಕೀಯ ಕೊಲೆಗಳಿಗೆ ಕುಖ್ಯಾತಿ ಪಡೆದಿರುವ ಕೇರಳದ ಕಣ್ಣೂರಿನಲ್ಲಿ ಸೆಪ್ಟೆಂಬರ್ 8 ರಂದು ಮತ್ತೆ ಬರ್ಬರ ಕೊಲೆ ನಡೆದಿದ್ದು ಈ ಬಾರಿ ಸೋಷಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತ ಸೈಯ್ಯದ್ ಸಲಾಹುದ್ದೀನ್ ಬಲಿಯಾಗಿದ್ದಾರೆ.ಈ ಸಂಬಂಧ ವಿಚಾರಣೆಗಾಗಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದ್ದಾರೆ.ಎಸ್.ಡಿ.ಪಿ.ಐ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು ಈ ಕೃತ್ಯದ ಹಿಂದೆ ಬಿಜೆಪಿ ಶಾಮೀಲಾಗಿರುವುದಾಗಿ ಆರೋಪಿಸಿದೆ.
ಸಲಾಹುದ್ದೀನ್ ತಮ್ಮ ಸಹೋದರಿಯರೊಂದಿಗೆ ಕೂತುಪರಂಬದಿಂದ ತಮ್ಮ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅವರ ಕಾರಿಗೆ ಹಿಂದಿನಿಂದ ಬಂದ ದ್ವಿಚಕ್ರ ವಾಹನ ತಾಗಿ ಅದರಲ್ಲಿದ್ದ ಸವಾರರು ಕೆಳಗೆ ಬಿದ್ದರು.ಘಟನೆಗೆ ಸ್ಪಂದಿಸಲು ಕಾರಿನಿಂದಿಳಿದ ಸಲಾಹುದ್ದೀನ್ ರ ಮೇಲೆ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.ಕಾರಿನೊಳಗೆ ಓಡಿ ಬಂದ ಅವರನ್ನು ಆಕ್ರಮಿಸಿ ಎಳೆದುಕೊಂಡು ಹೋಗಿ ವಿರುದ್ದ ರಸ್ತೆಯಲ್ಲಿ ಎಸೆದು ಹೋಗಿದ್ದಾರೆ.ಈ ದಾರುಣ ಘಟನೆಗೆ ಅವರ ಸಹೋದರಿಯರು ಸಾಕ್ಷಿಯಾಗಿದ್ದಾರೆ.
ಈ ಕುಕೃತ್ಯದ ಹಿಂದೆ ಬಿಜೆಪಿ-ಆರೆಸ್ಸೆಸ್ ಕೈವಾಡವಿದೆ.ಪೋಲೀಸ್ ಇಲಾಖೆಯಲ್ಲೂ ಆರೆಸ್ಸಸ್ಸನ್ನು ಪೋಷಿಸುವ ಕೆಲವರಿದ್ದಾರೆೀ ದುರ್ಘಟನೆಯ ಹಿಂದಿರುವ ಆರೆಸ್ಸೆಸ್ ಕೈವಾಡವನ್ನು ಪೋಲೀಸರು ತನಿಖೆಯ ಮೂಲಕ ಬಯಲಿಗೆಳೆಯಬೇಕಿದೆ. ರಾಜ್ಯ ಎಸ್.ಡಿ.ಪಿ.ಐ ಅಧ್ಯಕ್ಷ ಅಬ್ದುಲ್ ಮಜೀದ್ ಫೈಝಿ
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.