ಮಹಾರಾಷ್ಟ್ರ(ವಿಶ್ವ ಕನ್ನಡಿಗ ನ್ಯೂಸ್): ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ ಸರಕಾರ ಹಾಗು ನಟಿ ಕಂಗನಾ ರಾಣಾವತ್ ಸಂಘರ್ಷ ತಾರಕಕ್ಕೇರಿದೆ.ಕಂಗನಾ ಈಗ್ಗೆ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸಾಮಾಜಿಕ ತಾಣದಲ್ಲಿ ಆಕರ್ಷಣೆಯನ್ನು ಪಡೆದಿದ್ದರು.ಸುರಕ್ಷತೆಯ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರದ ವಿರುದ್ದ ಹೇಳಿಕೆ ನೀಡಿದ್ದ ಕಂಗನಾ ಪ್ರಸ್ತುತ ಶಿವ ಸೇನೆ ಹಾಗು ಮೈತ್ರಿ ಪಕ್ಷ ಆಳುತ್ತಿರುವ ಮುಂಬೈ ಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು.ಶಿವಸೇನೆಯ ಸಂಜಯ್ ರಾವತ್ ಯಾರಿಗೆ ಮುಂಬೈ ಸುರಕ್ಷಿತವಲ್ಲವೆಂದು ತೋರುವುದಿಲ್ಲವೇ ಅವರುಗೆ ತೆರಳಬಹುದೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸಂಘರ್ಷ ಮುಂದುವರಿದು ಕೇಂದ್ರ ಸರಕಾರದಿಂದ ವೈ ಪ್ಲಸ್ ಭದ್ರತೆಯನ್ನೂ ಪಡೆದುಕೊಂಡಿದ್ದ ಕಂಗನಾರ ಹಿಂದೆ ಬಿದ್ದ ಮಹಾ ಸರಕಾರ ಅವರ ಕಚೇರಿಯ ಸರ್ವೇ ಮಾಡಿಸಿ ಅಕ್ರಮ ಎಂದು ನೆಲಸಮ ಮಾಡಲು ತೊಡಗಿದೆ.ತಡವಾಗಿ ಹೈ ಕೋರ್ಟ್ ಮೆಟ್ಟಿಲೇರಿದ ಕಂಗನಾ ಪರ ವಕೀಲ ಗುರುವಾರ ಮೂರು ಘಂಟೆಯವರೆಗೆ ತಡೆಯಾಜ್ಞೆಯನ್ನು ತಂದುಕೊಡಲು ಸಫಲರಾಗಿದ್ದಾರೆ.ತಮ್ಮ ವಿರುದ್ದ ನಡೆಸುತ್ತಿರುವ ಕಾರ್ಯಾಚರಣೆಗೆ ತಾವು ಹೆದರಿಕೊಳ್ಳಲ್ಲ ಎಂದು ಕಂಗನಾ ಮತ್ತಷ್ಟು ಪ್ರಚೋದನೆಗೆ ತೊಡಗಿದ್ದಾರೆ.ಇಷ್ಟಕ್ಕೇ ನಿಲ್ಲದ ಕಂಗನಾ ಇದೀಗ ಕರಣ್ ಜೋಹರ್ ಮತ್ತು ಅವರ ಸ್ನೇಹಿತ ವಲಯವನ್ನು ಕರನ್ ಜೋಹರ್ ಗ್ಯಾಂಗ್ ಎಂದು ಕುಹಕವಾಡಿದ್ದಾರೆ.ತಮ್ಮ ಕಟ್ಟಡ ನೆಲಸಮ ಮಾಡಿರುವುದಕ್ಕೆ ಇದು ಪಾಕಿಸ್ತಾನ,ಬಾಬರ್ ಆರ್ಮಿ ಎಂಬ ಸರಣಿ ವಿವಾದಿತ ಟ್ವೀಟ್ ಗಳನ್ನು ಮಾಡಿದ್ದಾರೆ.ಕಂಗನಾರಂತಹ ನಟಿಗೆ ಸರಕಾರ ಮಹತ್ವ ಕೊಡದೆ ಕಡೆಗಣಿಸಬೇಕೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ,ಇನ್ನು ಕೆಲವರು ಸರಕಾರದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.