ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಭಾರತ ಸರಕಾರದ ವಿದೇಶಾಂಗ ಸಚಿವಾಲಯದ ಅನಿವಾಸಿ ವಿಭಾಗದ ಕಾರ್ಯದರ್ಶಿ ಶ್ರೀ ಸಂಜಯ್ ಭಟ್ಟಾಚಾರ್ಯರನ್ನು ಕರ್ನಾಟಕ ಸರಕಾರದ ಅನಿವಾಸಿ ಫಾರಂ ನ ಮಾಜಿ ಉಪಾಧ್ಯಕ್ಷರೂ,ವಿದೇಶಾಂಗ ಕಚೇರಿಗಳಲ್ಲೂ ಸೇವೆ ಸಲ್ಲಿಸಿದ್ದ ಡಾ.ಆರತಿ ಕೃಷ್ಣರವರು ಭೇಟಿ ಮಾಡಿ ಮಾತುಕತೆ ನಡೆಸಿದರು.ಅನಿವಾಸಿಗಳ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.ಅದರಲ್ಲೂ ಕೋವಿಡ್ ಬಳಿಕ ತವರಿಗೆ ಮರಳಿ ಹಿಂತಿರುಗಲಾರದೆ ವಿಸಾ ಅವಧಿ ಮುಗಿದವರು,ಕೆಲಸ ಕಳೆದು ಊರಿಗೆ ಮರಳಿದವರು ಹೀಗೆ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿ ಮಾರ್ಪಟ್ಟಿರುವ ಬಿಕ್ಕಟ್ಟಿನ ಬಗ್ಗೆಯೂ ಚರ್ಚಿಸಿದರು.ಪ್ರಸ್ತುತ ಅನಿವಾಸಿಗಳ ಯಾವುದೇ ದಾಖಲೆಗಳು ಕೇಂದ್ರ ಸರಕಾರದ ಬಳಿ ಇಲ್ಲ ಎನ್ನುವ ಮಾಹಿತಿಯ ಬಗ್ಗೆಯೂ ಡಾ.ಆರತಿ ಬೆಳಕು ಚೆಲ್ಲಿದರು.ಅಂತೆಯೇ ವಲಸೆ ನೀತಿ ರೂಪಿಸುವ ಅಗತ್ಯತೆ ಕುರಿತು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕತಾರ್ ನಲ್ಲಿ ಫಿಫಾ ಫುಟ್ಬಾಲ್ ವಿಶ್ವಕಪ್ ಆಯೋಜನೆ ಸಂಬಂಧ ವಿವಿಧ ಯೋಜನೆಗಳು ಕಾಮಗಾರಿಯಲ್ಲಿದ್ದು ಹಲವು ಶ್ರೇಣಿಗಳ ಉದ್ಯೋಗಿಗಳು ಅವಶ್ಯವಿರುವುದರಿಂದ ಇದರ ಸದುಪಯೋಗವನ್ನು ವಿಶ್ವಸನೀಯ ಮೂಲಗಳ ಮೂಲಕ ಪಡೆದುಕೊಳ್ಳಬೇಕೆಂದು ಶ್ರೀ ಸಂಜಯ್ ಭಟ್ಟಾಚಾರ್ಯರು ಸೂಚಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.