ಸಂಟ್ಯಾರ್(ವಿಶ್ವಕನ್ನಡಿಗ ನ್ಯೂಸ್): ಬದ್ರಿಯಾ ಜಮಾಅತ್ ಕಮಿಟಿ ಸಂಟ್ಯಾರ್ , ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಟ್ಯಾರ್ ಘಟಕ ಹಾಗೂ ಅನ್ಸಾರಿಯಾ ಯಂಗ್ಮೆನ್ಸ್ ಸಂಟ್ಯಾರ್ ಇದರ ಸಹಭಾಗಿತ್ವದಲ್ಲಿ ವೆಲ್ನೆಸ್ಸ್ ಹೆಲ್ಪ್ಲೈನ್ ಮಂಗಳೂರು ಇದರ ವತಿಯಿಂದ ಸಂಟ್ಯಾರ್ ಮದ್ರಸಾ ಹಾಲ್ನಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನ ದಿನಾಂಕ 12-09-2020ರಂದು ಶನಿವಾರ ನಡೆಯಿತು.
ಅಭಿಯಾನದ ಉದ್ಘಾಟನೆಯನ್ನು ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಇದರ ಖತೀಬರಾದ ಬಹು|ಅಶ್ರಫ್ ದಾರಿಮಿ ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಜಮಾಅತ್ ಕಮಿಟಿ ಅಧ್ಯಕ್ಷರಾದ ಜ|ರಝಾಕ್ ಸಂಟ್ಯಾರ್ ವಹಿಸಿದರು.
ಮುಖ್ಯ ಅತಿಥಿಗಳಾಗಿ ಬದ್ರಿಯಾ ಜಮಾಅತ್ ಕಮಿಟಿ ಗೌರವಾಧ್ಯಕ್ಷರಾದ ಹಮೀದಾಲಿಶ್ ಸಂಟ್ಯಾರ್ , ಕಾರ್ಯದರ್ಶಿ ಅಬೂಬಕ್ಕರ್ ಕಲ್ಲರ್ಪೆ , ಖಜಾಂಜಿ ಹಮೀದ್ ಕಲ್ಲರ್ಪೆ , ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಟ್ಯಾರ್ ಘಟಕದ ಅಧ್ಯಕ್ಷರಾದ ಝಕರಿಯಾ ಸಂಟ್ಯಾರ್ ಹಾಗೂ ವೆಲ್ನೆಸ್ಸ್ ಹೆಲ್ಪ್ಲೈನ್ ಇದರ ಉಸ್ತುವಾರಿಗಳಾದ ಇಮ್ತಿಯಾಝ್ ಪಾರ್ಲೆ , ಅನ್ಸಾರ್ ಪರ್ಲಡ್ಕ ಮತ್ತು ಆಸಿಫ್ ಪರ್ಲಡ್ಕ ಉಪಸ್ಥಿತರಿದ್ದರು.
ವೆಲ್ನೆಸ್ಸ್ ಹೆಲ್ಪ್ ಲೈನ್ ಉಸ್ತುವಾರಿಗಳಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ಅನ್ಸಾರಿಯಾ ಯಂಗ್ಮೆನ್ಸ್ ಅಸೋಸಿಯೇಶನ್ ಸಂಟ್ಯಾರ್ ಇದರ ಅಧ್ಯಕ್ಷರಾದ ಶಾಫಿ ಸಂಟ್ಯಾರ್ ಸ್ವಾಗತಿಸಿದರು.ಕಾರ್ಯಕ್ರಮವನ್ನು ರಿಯಾಝ್ ಬಳಕ್ಕ ನಿರೂಪಿಸಿ ವಂದಿಸಿದರು.ಸಂಟ್ಯಾರ್ ಜಮಾಅತಿನ ಎಲ್ಲಾ ನಾಗರಿಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.