ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಕರ್ನಾಟಕ ಸರಕಾರದ ಅನಿವಾಸಿ ಫಾರಂ ನ ಮಾಜಿ ಉಪಾಧ್ಯಕ್ಷರೂ,ವಿದೇಶಾಂಗ ಕಚೇರಿಗಳಲ್ಲೂ ಸೇವೆ ಸಲ್ಲಿಸಿದ್ದ ಡಾ.ಆರತಿ ಕೃಷ್ಣರವರು ಭಾರತದಲ್ಲಿರುವ ಸೌದಿ ಅರೇಬಿಯಾ ರಾಯಭಾರಿ ಡಾ.ಸೌದ್ ಮಹಮ್ಮದ್ ಅಲ್ ಸಾತಿಯವರೊಂದಿಗೆ ದೆಹಲಿಯಲ್ಲಿ ಮಾತುಕತೆ ನಡೆಸಿದರು.ಪ್ರಸ್ತುತ ಕೋವಿಡ್ ಹಾಗು ಸಂಬಂಧಿತ ವಿದ್ಯಮಾನಗಳ ಬಗ್ಗೆ ಚರ್ಚಿಸಿದಾಗ ಸೌದಿ ಅರೇಬಿಯಾ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.ಕಳೆದ ವಾರದಿಂದೀಚೆಗೆ ನೂತನ ಪ್ರಕರಣಗಳ ಸಂಖ್ಯೆ ಮೂರಂಕೆಗೆ ಇಳಿದಿರುವುದರಿಂದ ಆಶಾಭಾವ ವ್ಯಕ್ತಪಡಿಸಿದರು.ಡಾ.ಆರತಿ ಕೃಷ್ಣರವರು ಸೌದಿ ಅರೇಬಿಯಾ ತೆಗೆದುಕೊಂಡಿರುವ ನಿಯಂತ್ರಣ ಕ್ರಮಗಳಿಗೆ ತಮ್ಮ ವೈಯಕ್ತಿಕ ಅಭಿನಂದನೆಗಳನ್ನು ಸಲ್ಲಿಸಿದರು.
ಸೌದಿ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಉಭಯ ದೇಶಗಳ ನಡುವೆ ವಾಣಿಜ್ಯ ವಿಮಾನಯಾನ ಕನಿಷ್ಠ ನವೆಂಬರ್ ವರೆಗೆ ವಿಳಂಬವಾಗಬಹುದೆಂದು ರಾಯಭಾರಿಗಳು ಅಂದಾಜಿಸಿದರು. ಆದಾಗ್ಯೂ ಪ್ರಸ್ತುತ ಇರುವಂತೆ ತುರ್ತು ವಿಭಾಗಗಳಾದ ವೈದ್ಯಕೀಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು-ನರ್ಸ್ ಮೊದಲಾದವರಿಗೆ ಪ್ರಯಾಣ ಮಾಡಲು ಸಾಧ್ಯವಾಗಲಿದೆ,ಆದರೆ ಅತೀ ಕಂಪೆನಿ ವಿಸಾದಲ್ಲಿ ಕೆಲಸದಲ್ಲಿರುವವರು-ಪ್ರವಾಸಕ್ಕೆ ತೆರಳುವವರು-ಉಮ್ರಾ ನಿರ್ವಹಿಸುವವರು ಮೊದಲಾದ ವಿಸಾಗಳಿಗೆ ಪ್ರಯಾಣ ಅವಧಿ ಇನ್ನೂ ನಿಶ್ಚಯಿಸಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.ಆದರೆ ಕಂಪೆನಿಗಳಿಗೆ ಅತೀ ಅಗತ್ಯ ಉದ್ಯೋಗಿಗಳನ್ನು ಕರೆಸಬೇಕಿದ್ದಲ್ಲಿ ಅಂತಹವರು ಸೌದಿ ಸರಕಾರದ ಮೊಫಾ(ಮಿನಿಸ್ಟ್ರೀ ಆಫ್ ಫಾರಿನ್ ಅಫಯರ್ಸ್-ವಿದೇಶಾಂಗ ವ್ಯವಹಾರಗಳ ಸಚಿವಾಲಯ)ವನ್ನು ಸಂಪರ್ಕಿಸಿ ಆ ಮೂಲಕ ಸೌದಿ ರಾಯಭಾರಿ ಕಚೇರಿ ಮುಖಾಂತರ ಭಾರತ ಸರಕಾರದ ವಿದೇಶಾಂಗ ಸಚಿವಾಲಯದ ಅನುಮತಿಯೊಂದಿಗೆ ವಿಶೇಷ ವಿಮಾನದಲ್ಲಿ ಸಂಚರಿಸುವ ಅವಕಾಶ ಇದೆ ಎಂದು ಅವರು ತಿಳಿಸಿದರು
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.