ಶಿಕ್ಷಣಕ್ಕೆ ಉಲಮಾಗಳಿಂದ ಉತ್ತೇಜನ ಶ್ಲಾಘನೀಯ
ಬೆಳ್ತಂಗಡಿ (www.vknews.com) ; ತಾಲೂಕಿನ ನಡ ಗ್ರಾಮದ ಸರಕಾರಿ ಪ್ರೌಢ ಶಾಲೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಲು ಕಾರಣರಾದ ಹಳ್ಳಿಯ ಮೇಷ್ಟ್ರು ಶ್ರೀಯುತ ಯಾಕೂಬ್ ಮಾಸ್ಟರ್ ಕೊಯ್ಯೂರು ಇವರನ್ನು ಅವರದೇ ಗಣಿತ ಪ್ರಯೋಗಾಲಯಲ್ಲಿ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಇದರ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಅದ್ಭುತ ವಾದ ರೀತಿಯಲ್ಲಿ ಸಿದ್ದಪಡಿಸಿದ ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆಯ ಮೂಲಕ ಖಾಸಗಿ ಶಾಲಾ ಕಾಲೇಜುಗಳು ಸರಕಾರಿ ಶಿಕ್ಷಣ ಕೇಂದ್ರ ಗಳನ್ನು ಮಂಕಾಗಿಸುತ್ತಿರುವ ಈ ಸಂದರ್ಭದಲ್ಲಿ ಸರಕಾರಿ ಶಾಲೆಗೆ ಅತ್ಯಾಧುನಿಕತೆಯ ಸ್ಪರ್ಶ ವನ್ನು ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಶ್ರೀಯುತ ಯಾಕೂಬ್ ರವರಿಗೆ ಸಲ್ಲುತ್ತದೆ.
ಕಾರ್ಯಕ್ರಮ ದಲ್ಲಿ ಮಾತಾಡಿದ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅದ್ಯಕ್ಷ ರಾದ ಎಸ್ ಬಿ ಮುಹಮ್ಮದ್ ದಾರಿಮಿ ಯವರು ಮಾತಾಡಿ ಇದೊಂದು ಅದ್ಭುತ ವಾದ ಸಾಹಸ. ಮನಸ್ಸು ಮಾಡಿದರೆ ಎಂತಹಾ ಸಾಧನೆಯನ್ನು ಮಾಡಬಹುದೆಂದು ಯಾಕೂಬ್ ರವರು ನಿರೂಪಿಸಿದ್ದಾರೆ.ಇದು ನಮ್ಮ ರಾಜ್ಯ ಕ್ಕೆ ಹೆಮ್ಮೆ ಪಡುವ ವಿಚಾರ ಎಂದು ಬಣ್ಣಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯಾಕೂಬ್ ಮಾಸ್ಟರ್ ರವರು ನಿಮ್ಮ ಸನ್ಮಾನ ವು ನನಗೆ ಆಶಿರ್ವಾದ ಎಂದು ಭಾವಿಸುತ್ತೇನೆ. ಹಾಗೇ ಇನ್ನಷ್ಟು ಸಾಧನೆಗಳನ್ನು ಮಾಡುವ ಉದ್ದೇಶ ವಿದೆ.
ಅದಕ್ಕೆಲ್ಲಾ ಪ್ರೇರಣೆ ಗುರು ಹಿರಿಯರ ಆಶಿರ್ವಾದ ಎಂದು ವಿವರಿಸಿದರು. ಉತ್ತಮ ಸಮಾಜವನ್ನು ಸಿದ್ಧಪಡಿಸಲು ಶಿಕ್ಷಕ ವೃತ್ತಿಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ. ನಾನು ನನ್ನ ವೃತ್ತಿಯನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತೇನೆ.ಆದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಇದಕ್ಕೆ ಅನೇಕ ಮಂದಿಯ ಸಹಕಾರ ಮರೆಯಲಾಗದು. ಸಮಾಜದ ಉಲಮಾಗಳು ಶಿಕ್ಷಣಕ್ಕೆ ಹೆಚ್ವು ಪ್ರೋತ್ಸಾಹ ನೀಡುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮ ದಲ್ಲಿ ಒಕ್ಕೂಟದ ಪ್ರ, ಕಾರ್ಯದರ್ಶಿ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು ,ತಬೂಕು ದಾರಿಮಿ ಉಸ್ತಾದ್, ಕೆ ಎಲ್ ಉಮರ್ ದಾರಿಮಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.