ಉಪ್ಪಿನಂಗಡಿ(www.vknews.in):ಯುನೈಟೆಡ್ ಎಫ್ಸಿ ಕೆಮ್ಮಾರ ಆಯೋಜಿಸಿದ್ದ ಇದ್ ಎನಿಕುಲ್ಲದಾ ಟ್ರೋಫಿ-2020 ಪಂದ್ಯಾಕೂಟವು ಕೆಮ್ಮಾರ ಸರಕಾರಿ ಶಾಲಾ ಮೈದಾನದಲ್ಲಿ ಜರುಗಿತ್ತು. ಕೆಮ್ಮಾರ ಶಾಲಾ ಪರಿಸರ ಸ್ವಚ್ಛಗೊಳಿಸುವ ಮೂಲಕ ಉದ್ಘಾಟನೆಗೊಂಡ ಪಂದ್ಯಾಕೂಟವು ಲೀಗ್ ಮಾದರಿಯಲ್ಲಿ ಆರು ತಂಡಗಳನ್ನು ಒಳಗೊಂಡ ಪಂದ್ಯಾಕೂಟವು ನಡೆಯಿತು. ಫೈನಲ್ ಪಂದ್ಯಾಟದಲ್ಲಿ ಅನ್ಸಾರ್ ಕೆಮ್ಮಾರ ಮಾಲಕತ್ವದ ಯುನೈಟೆಡ್ ಎಫ್ಸಿ ಕೆಮ್ಮಾರ ಮತ್ತು ಉಪ್ಪಿನಂಗಡಿ ಕಡವಿನ ಬಾಗಿಲು ತಂಡದ ಮಧ್ಯೆ ತೀವ್ರ ಹಣಾಹಣಿ ನಡೆದು ಪಂದ್ಯಾಟ 0-0 ಯಲ್ಲಿ ಡ್ರಾ ಗೊಂಡಾಗ ಸಂಘಟಕರ ತೀರ್ಮಾನದಂತೆ ಪೆನಾಲ್ಟಿ ಶೂಟೌಟ್ ನಡೆಸಲಾಯಿತು, ಅಲ್ಲೂ ಕೂಡಾ 3-3 ಪೆನಾಲ್ಟಿ ಶೂಟೌಟ್ ಮೂಲಕ ಪಂದ್ಯ ಮತ್ತೆ ಸಮಬಲಗೊಂಡಾಗ ನಾಣ್ಯ ಚಿಮ್ಮುವಿಕೆಯಲ್ಲಿ ಯುನೈಟೆಡ್ ಎಫ್ಸಿ ಕೆಮ್ಮಾರ ಅದೃಷ್ಟದ ಗೆಲುವು ಮತ್ತು ಇದ್ ಎನಿಕುಲ್ಲದಾ ಟ್ರೋಫಿ-2020 ಹಾಗೂ ₹5000 ನಗದನ್ನು ತನ್ನದಾಗಿಸಿಕೊಂಡಿತು. ಪಂದ್ಯಾಕೂಟದುದ್ದಕ್ಕೂ ತೀವ್ರ ಪೈಪೋಟಿ ನೀಡಿ ಉತ್ತಮವಾಗಿ ಆಟವಾಡಿದ ಕಡವಿನಬಾಗಿಲು ತಂಡವು ಅದೃಷ್ಟದಾಟದಲ್ಲಿ ಸೋತು ದ್ವಿತೀಯ ಸ್ಥಾನ ಪಡೆಯಿತು. ಬೆಸ್ಟ್ ಪಾರ್ವರ್ಡ್ರಾಗಿ ಸುಹೈಲ್ ಮಠ, ಬೆಸ್ಟ್ ಡಿಫೆಂಡರ್ ಆಗಿ ಬಾಶೀತ್ ಅಲಿ ಕೆಮ್ಮಾರ, ಬೆಸ್ಟ್ ಮಿಡ್ಫೀಲ್ಡ್ ಆಗಿ ಬಾತಿಶ್ ಆಕಿರೆ ಕೆಮ್ಮಾರ, ಬೆಸ್ಟ್ ಗೋಲ್ ಕೀಪರಾಗಿ ಫರಾಝ್ ಕಡವಿನಬಾಗಿಲು ಆಯ್ಕೆಯಾದರು. ಪಂದ್ಯಾಕೂಟದುದ್ದಕ್ಕೂ ಮಾರ್ಗದರ್ಶಕರಾಗಿ ಸಂಘಟಕರಾಗಿ ಜಮಾಲ್ ಎಸ್ಪಿ ಕಾರ್ಯ ನಿರ್ವಹಿಸಿದರು. ಕೊನೆಗೆ ಸಮಾರೋಪ ಸಮಾರಂಭದಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಟ್ರೋಫಿಯನ್ನು ವಿವರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.