ಉಪ್ಪಿನಂಗಡಿ(www.vknews.in): ಫುಟ್ಬಾಲ್ ಸ್ಪೋರ್ಟ್ಸ್ ಕ್ಲಬ್ ಉಪ್ಪಿನಂಗಡಿ ಆಯೋಜಿಸಿದ್ದ ಯುಎಫ್ಸಿ ಟ್ರೋಫಿ 2020 ಪಂದ್ಯಾಕೂಟವು ಸರಕಾರಿ ಜೂನಿಯರ್ ಕಾಲೇಜ್ ಮೈದಾನ ಉಪ್ಪಿನಂಗಡಿಯಲ್ಲಿ ನಡೆಯಿತು. ಯುನೈಟೆಡ್ ಎಫ್ಸಿ ಕೆಮ್ಮಾರ ಮತ್ತು ಎಫ್ಸಿ ಮಠ ತಂಡಗಳ ಮಧ್ಯೆ ಫೈನಲ್ ಹಣಾಹಣಿ ನಡೆದು 3:0 ಗೋಲುಗಳ ಅಂತರದಲ್ಲಿ ಯುನೈಟೆಡ್ ಎಫ್ಸಿ ಕೆಮ್ಮಾರ ತಂಡವು ಗೆಲುವಿನ ನಗೆ ಬೀರಿತು. ಜಮಾಲ್ ಎಸ್ಪಿ ಕೆಮ್ಮಾರ ಮಾಲೀಕತ್ವದ ಯುನೈಟೆಡ್ ಎಫ್ಸಿ ತಂಡವು ಉಪ್ಪಿನಂಗಡಿಯ ಮಣ್ಣಿನಲ್ಲಿ ಸತತ ಮೂರು ವರ್ಷಗಳಿಂದ ಟ್ರೋಫಿ ಗೆಲ್ಲುವ ಮೂಲಕ ಅತ್ಯುತ್ತಮ ಸಂಘಟಿತ ತಂಡವಾಗಿ ಹೊರಹೊಮ್ಮಿತು. ಯುನೈಟೆಡ್ ಎಫ್ಸಿ ಕೆಮ್ಮಾರ ತಂಡವು ನಾಕೌಟ್ ಹಂತದಲ್ಲಿ ಕೊನೇಯ ಎರಡು ನಿಮಿಷ ಬಾಕಿಯಿರುವಂತೆಯೇ ಬಾಶೀತ್ ಕೆಮ್ಮಾರ ದಾಖಲಿಸಿದ ವಿರೋಚಿತ ಗೋಲು ಮತ್ತು ಸೆಮಿಫೈನಲ್ಸ್ ಹಂತದಲ್ಲಿ ಜಝ್ಬೀರ್ ದಾಖಲಿಸಿದ ರಿವರ್ಸ್ ಕಿಕ್ ಗೋಲಿನ ಮೂಲಕ ಯುನೈಟೆಡ್ ಎಫ್ಸಿ ತಂಡವು ಫೈನಲ್ ಹಂತಕ್ಕೆ ತಲುಪಿತು. ಫೈನಲ್ ಪಂದ್ಯಾಟದಲ್ಲಿ ಯುನೈಟೆಡ್ ಎಫ್ಸಿ ಕೆಮ್ಮಾರ ತಂಡದ ಜಝ್ಬೀರ್ ಆಕರ್ಷಕ ಎರಡು ಅಮೋಘ ಗೋಲು ಬಾರಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಕೊನೇಯ ಹಂತದಲ್ಲಿ ನೌಷಾದ್ ಒಂದು ಗೋಲು ಬಾರಿಸುವ ಮೂಲಕ 3:0 ಅಂತರದ ಗೆಲುವಿಗೆ ಕಾರಣರಾದರು. ಪಂದ್ಯಾಕೂಟದ ಬೆಸ್ಟ್ ಡಿಫೆಂಡರ್ ಆಗಿ ಬಾಶಿತ್ ಅಲಿ ಕೆಮ್ಮಾರ, ಬೆಸ್ಟ್ ಆಲ್ ರೌಂಡರ್ ಆಗಿ ಜಝ್ಬೀರ್ ಕೆಮ್ಮಾರ, ಮತ್ತು ಬೆಸ್ಟ್ ಗೋಲ್ ಕೀಪರ್ ಆಗಿ ಶಂಶೀರ್ ಮಠ ವಿಶೇಷ ಪ್ರಶಸ್ತಿಗೆ ಆಯ್ಕೆಯಾದರು. ಕೊನೆಗೆ ಸಮಾರೋಪ ಸಮಾರಂಭದಲ್ಲಿ ಸಿದ್ದೀಕ್ ಹ್ಯಾಪಿ ಟೈಮ್ಸ್, ಖಲಂದರ್ ಎಸ್ಪಿ, ಇಮ್ರಾನ್ ಇಮ್ಮಿ ಉಪ್ಪಿನಂಗಡಿ, ಇಬ್ಬ ಸಿಟಿಪ್ಯಾನ್ಸಿ, ಸಾಮಾಜಿಕ ಚಿಂತಕ ಅಬ್ದುಲ್ ಗಫ್ಪಾರ್ ಕೆಮ್ಮಾರ, ಸೌಕತ್ ಅಲಿ ಜೇಡರಪೇಟೆ, ಹೀಗೆ ಹಲವಾರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.