ಪುತ್ತೂರು(www.vknews.in): ಹಿದಾಯತುಲ್ ಇಸ್ಲಾಂ ಮದ್ರಸದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಈ ವರ್ಷದ SSLC ಹಾಗೂ ದ್ವಿತೀಯ PUCಯಲ್ಲಿ ಉತ್ತಮ ಅಂಕವನ್ನ ಗಳಿಸಿ ತೇರ್ಗಡೆಯಾದ ಹಾಗೂ ಮದರಸಾ ಪಬ್ಲಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಳಕೆಮಜಲು ಜಮಾತ್ನ 18 ವಿದ್ಯಾರ್ಥಿಗಳನ್ನ ಗುರುತಿಸಿ ಸನ್ಮಾನಿಸಲಾಯಿತು. ಈ ವರ್ಷದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನ ಪಡೆದ ಅಳಕೆಮಜಲು ಶಾಲೆಯ ಶಿಕ್ಷಕರಾದ ಇಸ್ಮಾಯಿಲ್ ಮಾಸ್ಟರ್ ಅವರನ್ನ ಹಾಗೂ P.A ಬುಸಿನೆಸ್ ಮ್ಯಾನೇಜ್ಮೆಂಟ್ ನಿರ್ದೇಶಕರಾದ ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲದಿಂದ ಗೌರವ ಡಾಕ್ಟರೇಟ್ ಪಡೆದ ಡಾ.ಸಯ್ಯದ್ ಅಮೀನ್ ಅಹಮದ್ ಹಾಗೂ SDM ಕಾನೂನು ಕಾಲೇಜಿಂದ ಈ ವರ್ಷ ವಕೀಲರಾಗಿ ತೇರ್ಗಡೆಯಾದ ನಮ್ಮೂರಿನ ಯುವಕ ಯೂನುಸ್ ಬಗ್ಗುಮೂಲೆಯವರನ್ನ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಊರಿನ ಪ್ರಮುಖ ಉಮರಾ ಉಲಮಾ ನಾಯಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.