(www.vknews.in) ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಗಳಾಗಲಿ ಎಂಬ ದ್ಯೆಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿದೆ.
ಇದರಮಹಾ ಪೋಷಕರಾಗಿರುವ ಖ್ಯಾತ ಶಿಕ್ಷಣ ತಜ್ಞರಾದ ಡಾ.ನಿರಂಜನಾರಾಧ್ಯ ವಿ ಪಿ ರವರ ಮಾರ್ಗದರ್ಶನ ದಲ್ಲಿ ಸರಕಾರಿ ಶಾಲೆಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲೆಯಲ್ಲಿರುವ ಎಸ್ಡಿಎಂಸಿ ಯವರನ್ನು ಸೇರಿಸಿಕೊಂಡು ತರಭೇತಿ, ವಿಚಾರ ಸಂಕಿರಣ ದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಸ್ಡಿಎಂಸಿ ಸದಸ್ಯರಿಗೆ ಮಾಹಿತಿಗಳನ್ನು ತಲುಪಿಸುವ ಕೆಲಸವನ್ನು ಸುಮಾರು 15 ವರ್ಷದಿಂದ ಮಾಡುತ್ತಾ ಬಂದಿದ್ದೇವೆ.
ಇದಕ್ಕೆ ಪೂರಕವಾಗಿ ದಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನಲ್ಲಿ ,ಎಸ್ಡಿಎಂಸಿ ಸಮನ್ವಯ ವೇದಿಕೆಯ ಧಾರವಾಡ ಜಿಲ್ಲಾ ಉಸ್ತುವಾರಿ ಮತ್ತು ಜಿಲ್ಲಾಧ್ಯಕ್ಷ ರಾದ ಈರಣ್ಣ ಮುರಗೋಡ ರವರ ಅಧ್ಯಕ್ಷತಯಲ್ಲಿ ತಾಲೂಕು ಘಟಕವನ್ನು ರಚಿಸಲಾಯಿತು.
ಆಳ್ನಾವರ ತಾಲೂಕಿನ ಸರಕಾರಿ ಶಾಲೆಗಳ ಎಸ್, ಡಿ, ಎಮ್, ಸಿ ಸದಸ್ಯರ ಉಪಸ್ಥತಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಪ್ರವೀಣ ಪವಾರ , ಫಕ್ಕೀರಪ್ಪ ಕಲ್ಲಪ್ಪನವರ ಉಪಾಧ್ಯಕ್ಷ , ವಾಸಂತಿ ಬೇಕ್ವಾಡಕರ ಕಾರ್ಯದರ್ಶಿ , ಚನ್ನಬಸಪ್ಪ ಕುಬಸದ ಸಹ ಕಾರ್ಯದರ್ಶಿ , ಕಲೀಲ ಸನದಿ ಖಜಾಂಚಿ ಗಳನ್ನಾಗಿ ಆಯ್ಕೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.