ಮುಕ್ಕ (www.vknews.com) : ಮಂಗಳೂರಿನ ಮುಕ್ಕಾದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಏವಿಯೇಶನ್ ಮೈಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ನ್ನು ಆರಂಭಿಸಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ದೃಷ್ಠಿಯಿಂದ ವಿವಿಧ ವಿಮಾನಗಳನ್ನು ಖರೀದಿ ಮಾಡಿದ್ದಾರೆ. ಈಗಾಗಲೇ ಸೆಸ್ನಾ ವಿಮಾನ ಮತ್ತು ಹೆಲಿಕಾಫ್ಟರ್ ಯೂನಿವರ್ಸಿಟಿ ಕ್ಯಾಂಪಸ್ಗೆ ತಲುಪಿದೆ.
ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಸಿಎ.ಎ ರಾಘವೇಂದ್ರ ರಾವ್ ಹಾಗೂ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಅವರು ವಿಮಾನಗಳ ಕೀಗಳನ್ನು ಪಡೆದುಕೊಂಡರು. ಮುಂಬರುವ ದಿನಗಳಲ್ಲಿ ಪೈಲೆಟ್ ಆಗ ಬಯಸುವ ವಿದ್ಯಾರ್ಥಿಗಳಿಗೆ ಪೈಲೆಟ್ ಪರವಾನಗಿ ತರಬೇತಿ ನೀಡಲು ಕ್ಯಾಂಪಸ್ನಲ್ಲಿ ಹೊಸ ಪ್ಲೈಲೆಟ್ ಸಿಮ್ಯುಲೇಟರ್ ಅನ್ನು ಸಹ ಸ್ಥಾಪಿಸಲಾಗುವುದು ಎಂದು ಕುಲಾಧಿಪತಿ ಸಿಎ.ಎ ರಾಘವೇಂದ್ರ ರಾವ್ ತಿಳಿಸಿದರು.
ವಿದ್ಯಾರ್ಥಿಗಳಿಗೆ ಉತ್ತಮ ಮಾನ್ಯತೆ ನೀಡುವ ಸಲುವಾಗಿ ವಿಶ್ವವಿದ್ಯಾನಿಲಯವು ಎಂ.ಹೆಚ್ ಕಾಕ್ಪಿಟ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 3 ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮತ್ತು ಡಿಜಿಸಿಎ ಎಂಪನೇಲ್ ಮಾಡಿದ ಪ್ರಮುಖ ವಿಮಾನಗಳ ಇಂಜಿನಿಯರ್ಗಳು ತರಬೇತಿಯನ್ನು ನೀಡಲಿದ್ದು, 10 ಆಸನಗಳ ಲಿಯರ್ ಜೆಟ್ ವಿಮಾನವು ಶೀಘ್ರದಲ್ಲೇ ಶ್ರೀನಿವಾಸ್ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.