(www.vknews.com) : “ಏನು ಮಾಡಲ್ಯಾ ಕೃಷ್ಣಾ ಪೋಗುತಿದೆ ಆಯುಷ್ಯ” ಎಂಬ ದಾಸವಾಣಿಯಂತೆ ಈ ಮಾನವ ಜನ್ಮ ಸಾರ್ಥಕಗೊಳಿಸ ಬೇಕಾದರೆ ಹರಿ ನಾಮಾಮೃತವನ್ನು ಉಚ್ಚರಿಸಿ ಕಳೆದ ಎಲ್ಲ ಜನ್ಮದಲ್ಲಿ ಮಾಡಿದ ಪಾಪವನ್ನು ನಾವು ಕಳೆಯಬೇಕು. ಹಾಗೆ “ದಾಸ ದಾಸರ ಮನೆಯ ದಾಸನು ದಾಸನಯ್ಯ” ಎಂದು ಅಂದು ಹರಿಯನ್ನು ದಾಸವರೇಣ್ಯರು ಹಾಡಿ ಹೊಗಳಿದ್ದಾರೆ. ಈ ಕಲಿಯುಗದಲ್ಲಿ ನಾಮಾವೃತದಿಂದ ಸಾಯುಜ್ಯವನ್ನು ಹೊಂದಬಹುದು. ಹಿಂದೆ ಕೃತಯುಗದಲ್ಲಿ ದೇವರನ್ನು ಸತ್ಯ-ಧರ್ಮ,ನ್ಯಾಯದಿಂದ ದೇವರನ್ನು ಕಾಣುತ್ತಿದ್ದರೇನಂತೆ, ತ್ರೇತ್ರಾಯುಗದಲ್ಲಿ ಯಜ್ಞ ಯಾಗಾದಿಗಳಿಂದ ದೇವರನ್ನು ಒಲಿಸುತ್ತಿದ್ದರಂತೆ, ದ್ವಾಪರಯುಗದಲ್ಲಿ ತನ್ನ ಬಾಹು ಬಲದಿಂದ ಹಾಗು ಭಕ್ತಿಯಿಂದ ದೇವರನ್ನು ಒಲಿಸುತ್ತಿದ್ದರಂತೆ, ಈ ಕಲಿಯುಗದಲ್ಲಿ ಭಜನೆ, ಹರಿಕಥೆ, ಸಂಕೀರ್ತನೆಯಿಂದ ದೇವರ ನಾಮಗಳನ್ನು ಶ್ರವಣ ಮಾಡುದರಿಂದ ದೇವರನ್ನು ಒಲಿಸಿಕೊಳ್ಳುತ್ತಾರೆ. ಅದೇ ಪರಂಪರೆಯನ್ನು ಉಳಿಸಿ ಬೆಳೆಸಿದವರು ದಾಸ ಶ್ರೇಷ್ಠರೆನಿಸಿದರು ಕನಕದಾಸರು, ಪುರಂದರದಾಸರು, ವಿಜಯದಾಸರು, ವಿಠ್ಠಲದಾಸರಾದರು. ಇಂತಹ ಸಂಕೀರ್ತನೆಯ ಒಂದು ಭಾಗ ಹರಿಕಥೆಯನ್ನು ಜನರು ನಮ್ಮ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯಕ್ಷಗಾನ, ಹರಿಕಥೆ, ತಾಳಮದ್ದಳೆ, ಭಜನೆ, ಗಮಕವಾಚನಗಳು ಮುಂತಾದ ಭಕ್ತಿ ಸಂಗೀತವು ಒಳಗೊಂಡಿದೆ.
“ಮಧುಕರ ವೃತ್ತಿ ಎನ್ನದು ಬಲು ಚೆನ್ನದು ಮಧುಕರ ವೃತ್ತಿಯನ್ನದು” ಎಂಬ ದಾಸವಾಣಿಯಲ್ಲೇ ಇರುವ ಹಾಗೆ ಹರಿದಾಸ ಹಾಗು ಯಕ್ಷಗಾನ ಅರ್ಥದಾರಿಕೆಯ ಪರಂಪರೆಯನ್ನು ಉಳಿಸಿ ಬೆಳೆಸಿದವರು. ಸುಮಾರು ಐದುಸಾವಿರದೊಂದಕ್ಕೂ ಹೆಚ್ಚು ಹರಿಕಥೆಯನ್ನು ಹಾಗು ಯಕ್ಷಗಾನ ಅರ್ಥಗಾರಿಕೆಯನ್ನು, ಹೂವಿನಕೋಲು, ತಾಳಮದ್ದಳೆ, ಬಾಮಿನಿ ಷಟ್ಟದಿ ರಚನೆ, ಭಾಷಣ, ಯಕ್ಷಗಾನ ಪ್ರಸಂಗಕರ್ತರು, ಗಮಕವಾಚನ, ಧಾರ್ಮಿಕ ಪ್ರವಚನ, ಯಕ್ಷಗಾನ ವೇಷಧಾರಿ, ಹಾಗೂ ಕವಿಗಳಾಗಿ ಶ್ರೀಯುತ ಮರೂರು ನಾರಾಯಣ ಹೆಬ್ಬಾರ್ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಹೀಗೆ ತನ್ನ ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ಮೂಲಕ ಜನಾನುರಾಗಿದ್ದರೆ. ಭಾಗವತ ಮತ್ತು ರಾಮಾಯಣ, ಮಹಾಭಾರತ ಗ್ರಂಥದ ಅಧ್ಯಯನದ ಮೂಲಕ ತನ್ನ ಉಪನ್ಯಾಸಕ ವೃತ್ತಿಗೆ ನ್ಯಾಯ ಒದಗಿಸಿಕೊಟ್ಟರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.