ಯಾರನ್ನೂ ದ್ವೇಷಿಸಬೇಡಿ, ಎಲ್ಲರನ್ನೂ ಪ್ರೀತಿಸಿ
“ಜಮಾತೆ ಅಹ್ಲೇ ಸುನ್ನತ್ ಕರ್ನಾಟಕ” ಸಂಘಟನೆಯ ಬೆಂಗಳೂರು ಶಾಖೆಯನ್ನು ಇಂದು ಅದರ ಅಧ್ಯಕ್ಷರಾದ ಹಜ್ರತ್ ತನ್ವೀರ್ ಹಾಶಿಮಿರವರು ಬೆಂಗಳೂರಿನಲ್ಲಿ ಉದ್ಘಾಟಿಸಿದರು. ಅನೇಕ ಮಂದಿ ಸಂಘಟನೆಗೆ ಸೇರ್ಪಡೆಗೊಂಡರು. ಅವರಿಗೆ ಐಡಿ ಕಾರ್ಡ್ಗಳನ್ನು ವಿತರಿಸಲಾಯಿತು. ಅದರ ಜೊತೆಗೆ ಜಾಗೃತಿ ಮತ್ತು ಶಿಸ್ತು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೇಶದಲ್ಲಿ ಮತ್ತು ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಬೆಳೆಸುವುದು, ಪ್ರೀತಿ ವಿಶ್ವಾಸದ ವಾತಾವರಣವನ್ನು ಬಲಪಡಿಸುವುದು, ಮಾನವೀಯ ನೆಲೆಯಲ್ಲಿ ಪರಸ್ಪರ ಆದರ, ಗೌರವದ ಸಂಸ್ಕೃತಿಯನ್ನು ಪೋಷಿಸುವುದರ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಯುವ ಜನಾಂಗದ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಮತ್ತು ತರಬೇತಿಗಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ತಲಾಕ್, ವರದಕ್ಷಿಣೆ, ಗುಟ್ಕಾ , ಮದ್ಯಪಾನ ಮತ್ತು ಮಾದಕ ವ್ಯಸನ ಮುಂತಾದ ಅನಿಷ್ಟಗಳಿಂದ ಯುವ ಜನಾಂಗವನ್ನು ದೂರವಿಡಲಿಕ್ಕಾಗಿ ಜಾಗೃತಿ ಅಭಿಯಾನವನ್ನು ನಡೆಸಬೇಕಾಗಿದೆ. ದೇಶಪ್ರೇಮ ಹಾಗೂ ಸಂವಿಧಾನಕ್ಕೆ ಭದ್ದತೆಯ ಭಾವನೆಗಳನ್ನು ಪೋಷಿಸಿ ದೇಶದ ರಕ್ಷಣೆ ಹಾಗೂ ಸಮೃದ್ಧಿಗಾಗಿ ಎಲ್ಲ ಬಗೆಯ ತ್ಯಾಗ ಬಲಿದಾನಗಳನ್ನು ನೀಡುವುದಕ್ಕೆ ಸಜ್ಜಾಗಿರುವಂತೆ ಸಮಾಜವನ್ನು ಪ್ರೋತ್ಸಾಹಿಸಬೇಕಾಗಿದೆ. ದ್ವೇಷದ ಭಾವನೆಗಳನ್ನು ಇಲ್ಲವಾಗಿಸಿ ಎಲ್ಲೆಡೆ ಪ್ರೀತಿ ವಿಶ್ವಾಸದ ಭಾವನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಎಲ್ಲ ಬಗೆಯ ಅನಿಷ್ಟಗಳಿಂದ ಮುಕ್ತಗೊಳಿಸಿ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆ ತರುವ ನಿಟ್ಟಿನಲ್ಲಿ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ.
ಯಾರನ್ನೂ ದ್ವೇಷಿಸಬೇಡಿ, ಎಲ್ಲರನ್ನೂ ಪ್ರೀತಿಸಿ – ಎಂಬ ಸೂಫಿ ಸಂತ ಹಜ್ರತ್ ಖ್ವಾಜ ಮೊಯಿನುದ್ದೀನ್ ಚಿಷ್ಟಿರವರ(ರ) ಭವ್ಯ ಆದೇಶವೇ ಈ ಸಂಘಟನೆಯ ಆದೇಶವಾಗಿದೆ.
ಒಮ್ಮೆ ಹಜ್ರತ್ ಬಾಬಾ ಫರೀದರಿಗೆ(ರ) ಓರ್ವರು ಕತ್ತರಿಯನ್ನು ಕಾಣಿಕೆಯಾಗಿ ಕೊಟ್ಟರು. ಅವರು ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಅದರ ಬದಲು ಸೂಜಿ ದಾರ ಕೊಡು ಎಂದರು. ಕತ್ತರಿಯ ಕೆಲಸ ಬೇರ್ಪಡಿಸುವುದು. ಸೂಜಿಯ ಕೆಲಸ ಜೋಡಿಸುವುದು. ಹಾಗೇ ನಾವು ಮನಸ್ಸುಗಳನ್ನು ಜೋಡಿಸುವಂತಹ ಕೆಲಸ ಮಾಡಬೇಕೇ ಹೊರತು, ದ್ವೇಷದ ಅಗ್ನಿಯಿಂದ ಅವನ್ನು ವಿಚ್ಚೇದಿಸಬಾರದು. ಎಲ್ಲರು ಸಮಾನರು, ಪ್ರತಿಯೊಬ್ಬರಿಗೂ ಗೌರವ ಕೊಡಬೇಕು. ಈ ನಡುವೆ ಆನ್ಲೈನ್ ನಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿ ಪ್ರಚಾರವಾಗುತ್ತಿವೆ. ಗಾಳಿ ಮಾತುಗಳಿಗೆ ಬಲಿಯಾಗಬಾರದು. ಬೇರೆಯವರಿಗೆ ಸಹಾಯ ಮಾಡಿದರೆ ಅವರು ಅತ್ಯುತ್ತಮ ಮನುಷ್ಯರಾಗಲು ಸಾಧ್ಯ. ನೀವೆಲ್ಲ ಉತ್ತಮ ಪ್ರಜೆಗಳಾಗಿ ಸಂಘಟನೆಯನ್ನು ಬಲಪಡಿಸುತ್ತೀರಿ ಎಂದು ನಂಬಿದ್ದೇನೆ. ಸಂಘನೆಯ ಇನ್ನೂ ಅನೇಕ ವಿಷಯಗಳ ಬಗ್ಗೆ ಮಾತನಾಡಿ, ಕೊನೆಗೆ ದುವಾ ಮಾಡಿ ತನ್ನ ಭಾಷಣವನ್ನು ಅಧ್ಯಕ್ಷರು ಮುಗಿಸಿದರು.
ಸಭೆಯಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಅವರಲ್ಲಿ ಮುಖ್ಯವಾಗಿ ಮುಫ್ತಿ ಮಹಮ್ಮದ್ ಅಲಿ ಖಾಝಿ, ಉಸ್ಮಾನ್ ಷರೀಫ್, ಮೌಲಾನಾ ಹಸ್ಸಾನ್ ಆಮೀರಿ, ಸಿಕಂದರ್, ಸಯ್ಯದ್ ಝಬಿವುಲ್ಲಾ, ಮೌಲಾನಾ ಮುಸ್ತಫಾ ಕಮಾಲ್, ಸಯ್ಯದ್ ನಜೀರ್
– Zabiulla Khan
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.