ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಪುತ್ತೂರು ನಗರದ ಮುಖ್ಯರಸ್ತೆಯ ಬದಿ ಏಳುಮುಡಿ ಎಂಬಲ್ಲಿ ವಿವಿಯನ್ ಕ್ಯಾಸ್ಟಲಿನೋ, ಡೆಫಿನೋ ಕ್ಯಾಸ್ಟಾಲಿನೋ ಎಂಬವರ ಸ್ಥಳದಲ್ಲಿ ಜಯಕುಮಾರ್ ಎಂಬವರು ಜಾಯಿಂಟ್ ವೆಂಚರ್ ನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತಿದ್ದು. ಈ ವಾಣಿಜ್ಯ ಸಂಕೀರ್ಣವು ಸೆಟ್ ಬ್ಯಾಕ್ ಹಾಗು ರಸ್ತೆ ಮಾರ್ಜಿನ್ ಬಿಡದೆ ನಿರ್ಮಾಣವಾಗುತ್ತಿದ್ದು ಈ ಕಟ್ಟಡದ ಕಾಮಗಾರಿ ಪೂರ್ಣವಾಗುವ ಮೊದಲೇ ನಿರ್ಮಾಣ ಹಂತದಲ್ಲಿರುವಾಗಲೇ, ಕೇವಲ ಕಟ್ಟಡದ ಸ್ಟ್ರೆಚರ್ ಗೆ ಕಟ್ಟಡ ನಂಬರ್ ನೀಡಿ ಕರ್ತವ್ಯಲೋಪ ಎಸಗಳಾಗಿದೆ ಎಂದು ಸ್ಥಳೀಯ ನಿವಾಸಿ ಹಾಗು ಉದ್ಯಮಿ ರಿತೇಶ್ ಪಾಯಸ್ ಎಂಬವರ ದೂರಿನ ಮೇರೆಗೆ ಮಾನ್ಯ ದಕ ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ ಕೆ ವಿ ಯವರು ನೀಡಿರುವ ಆದೇಶದಂತೆ, ಜಿಲ್ಲಾನಗರಾಭಿವೃದ್ದಿ ಕೋಶದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾದ ತೇಜಮೂರ್ತಿ ಯವರು ಪುತ್ತೂರಿಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಈ ವಾಣಿಜ್ಯ ಸಂಕೀರ್ಣದ ಮಾಲಕರು ಕಟ್ಟಡದ ಎಡಬದಿ ಯಲ್ಲಿ ನಗರಸಭೆಯ ಮಾಂಸದ ಮಾರುಕಟ್ಟೆ ಹಾಗು ಕ್ರಿಶ್ಚಿಯನ್ ದಫನ ಭೂಮಿಗೆ ಹೋಗುವ ರಸ್ತೆಗೆ ಪರವಾನಿಗೆ ನಕ್ಷೆ ಯಲ್ಲಿರು ವಂತೆ ಬಿಡಬೇಕಾದ ಸ್ಥಳವನ್ನು ಬಿಟ್ಟಿರುವುದಿಲ್ಲ, ಈ ರಸ್ತೆಗೆ ಸ್ಥಳ ವನ್ನು ಪೂರ್ತಿ ಯಾಗಿ ನನ್ನ ತಂದೆಯವರಾದ ಮೈಕೆಲ್ ಪಾಯಸ್ ರವರು1992ರಲ್ಲಿ ಪುರಸಭೆ ಉಚಿತವಾಗಿ ಬಿಟ್ಟು ಕೊಟ್ಟಿರುತ್ತಾರೆ. ನಮ್ಮ ಜಾಗವನ್ನು ರಸ್ತೆಗೆ ಬಿಟ್ಟು ಕೊಟ್ಟಿದ್ದರೂ.. ನಗರಸಭೆಯವರು ಈ ರಸ್ತೆಯ 7.50 ಮೀಟರ್ ಉಳಿಕೆ ಅಗಲಕ್ಕೆ ಈ ವಾಣಿಜ್ಯ ಸಂಕೀರ್ಣ ಮಾಲಕರ ಸ್ಥಳದಿಂದ ಬಿಡಲು ಸೂಚಿಸಬೇಕಾಗಿತ್ತು ಆದರೆ ಈ ನಕ್ಷೆ ಯಲ್ಲಿ 7.30 ಮೀಟರ್ ಅಗಲಕ್ಕೆ ಬೇಕಾಗುವ ಸ್ಥಳದ ಅರ್ಧ ಅಂಶ ಬಾಗವನ್ನು ಕಟ್ಟಡದ ಮಾಲಕರಿಗೆ ಹಾಗು ಇನ್ನು ಉಳಿದ ಬಾಗವನ್ನು ನಮಗೆ ಬಿಡಲು ಗುರುತಿಸಲಾಗಿದೆ. ಇದರಿಂದ ಈಗಾಗಲೇ ಪುರಸಭೆಗೆ ರಸ್ತೆಗಾಗಿ 10 ಅಡಿ ಸ್ಥಳ ವನ್ನು ನೀಡಿರುವ ನಮಗೆ ಅನ್ಯಾಯ ಎಸಗಿದಂತಾಗಿದೆ. ಆದರೆ ಈ ರಸ್ತೆಗೆ ಸ್ಥಳ ಬಿಡುವ ಬದಲು ಕಟ್ಟಡದ ಮಾಲಕರು ಈ ರಸ್ತೆಯನ್ನ ಆಕ್ರಮಿಸಿ ರಸ್ತೆ ಅಂಚಿಗೆ ತಡೆಗೋಡೆ ನಿರ್ಮಿಸಿ ರಸ್ತೆಯನ್ನು ಕಿರಿದಾಗಿಸಿದ್ದಾರೆ.
ಬಲ ಭಾಗ ದಲ್ಲಿ ತೋಡಿನ ಪಕ್ಕದಲ್ಲಿರುವ ಸರಕಾರಿ ಜಾಗವನ್ನು ಆಕ್ರಮಿಸಿದ್ದು, ಈ ಆಕ್ರಮಣವನ್ನು ತೆರವುಗೊಳಿಸಲು ಗ್ರಾಮಕರಣಿಕರು ಈಗಾಗಲೇ ನೋಟೀಸ್ ಜ್ಯಾರಿ ಗೊಳಿಸಿರುತ್ತಾರೆ
ಸದ್ರಿ ಕಟ್ಟಡದ ಮಾಲಕರು ಅವರ ಸ್ಥಳದ ಹಿಂದೆ ಇರುವ ನನ್ನ ದೊಡ್ಡಪ್ಪ ವಲೇರಿಯನ್ ಪಾಯಸ್ ರವರಿಗೆ ಸೇರಿದ 4 ಸೆಂಟ್ಸ್ ಸ್ಥಳವನ್ನು ಆಕ್ರಮಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದ್ದಾರೆ.
ಮುಖ್ಯರಸ್ತೆಯ ಮದ್ಯ ಭಾಗದಿಂದ 12 ಮೀಟರ್ ಹಾಗು ಕಟ್ಟಡ ಮಾಲಕರ ಸ್ಥಳದ ಅಂಚಿನಿಂದ 6 ಮೀಟರ್, ಒಟ್ಟು 18 ಮೀಟರ್ ಬಿಟ್ಟು ಕಟ್ಟಡ ಕಟ್ಟ ಬೇಕಾಗಿದ್ದು. ಇದನ್ನೆಲ್ಲಾ ಉಲ್ಲಂಘಿಸಿ ಕಾನೂನು ಬಾಹಿರ ವಾಗಿ ವಾಣಿಜ್ಯಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ
ನಕ್ಷೆಯಲ್ಲಿ ತೋರಿಸಿದಂತೆ Rain Water haarvesting, Soak pit, S.T.P pit ನಿರ್ಮಿಸಿ ರುವುದಿಲ್ಲ. ಅಲ್ಲಿರುವ ಸರಕಾರಿ ಸ್ಥಳವನ್ನು ಆಕ್ರಮಿಸಲಾಗಿದೆ. ಈ ಕುರಿತು ಸ್ಥಳೀಯ ನಾಗರಿಕರು ನಗರ ಸಭೆಗೆ ದೂರು ನೀಡಿದ್ದರೂ.ಈ ಬಗ್ಗೆ ಪುತ್ತೂರು ಸಹಾಯಕ ಕಮೀಶನರರು ಲಿಖಿತ ಸೂಚನೆ ನೀಡಿದ್ದರೂ, ಇದನ್ನೆಲ್ಲಾ ಧಿಕ್ಕರಿಸಿ ನಗರಸಭೆಯ ಅಧಿಕಾರಿಗಳು ಕಟ್ಟಡದ ಕಾಮಗಾರಿ ಪೂರ್ಣವಾಗುವ ಮೊದಲೇ ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣದ ಬಿಲ್ಡಿಂಗ್ ಸ್ಟ್ರಚರ್’ ಗೆ ಕಟ್ಟಡ ನಂಬ್ರ ನೀಡಿ ಗಂಭೀರ ಕರ್ತವ್ಯ ಲೋಪ ಎಸಗಿರುತ್ತಾರೆ
ಈ ಕುರಿತು ನಾನು ಈಗಾಗಲೇ ಪುತ್ತೂರು ಸಿವಿಲ್ ನ್ಯಾಯಾಲಯಲ್ಲಿ ಮೊಕದ್ದಮೆ ಹೂಡಿದ್ದು. ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಕಟ್ಟಡದ ಮಾಲಕರ ಆಮಿಷಕ್ಕೆ ಬಲಿಯಾಗಿ ಕಾನೂನುಬಾಹಿರ ಕೃತ್ಯ ನಡೆಸಿರುವ ನಗರಸಭಾ ಪೌರಾಯುಕ್ತ ರೂಪ ಟಿ ಶೆಟ್ಟಿ ಹಾಗು ಕಿ. ಅಭಿಯಂತರಾದ ಕೆ. ದಿವಾಕರ್ ರ ವಿರುದ್ದ ಶಿಸ್ತು ಕ್ರಮಜರುಗಿಸಬೇಕೆಂದು ರಿತೇಶ್ ಪಾಯಸ್ ರವರು ಜಿಲ್ಲಾಧಿಕಾರಿ ಗಳಿಗೆ ಸಲ್ಲಿಸಿರುವ ದೂರಿನಲ್ಲಿ ಕೋರಿರುತ್ತಾರೆ
ಅನಧಿಕೃ ಕಟ್ಟಡ ನಿರ್ಮಾಣ ಹಾಗು ನಿಯಮ ಬಾಹಿರ ಕಟ್ಟಡ ನಂಬ್ರ ನೀಡಿರುವ ಈ ಪ್ರಕರಣವನ್ನು ಗಂಭೀರವೆಂದು ಪರಿಗಣಿಸಿ ಖಡಕ್ ಆಧಿಕಾರಿಯೆಂದು ಹೆಸರುಗಳಿಸಿರುವ ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ ಕೆ. ವಿ ಯವರು ತನಿಖೆಗೆ ಆದೇಶಿದ್ದಾರೆ* ಎಂದು ತಿಳಿದು ಬಂದಿದೆ.
ಇದರಂತೆ ಸಹಾಯ ಕಾರ್ಯ ಪಾಲಕ ಇಂಜಿನಿಯರ್ ರಾದ ತೇಜಮೂರ್ತಿಯವರು ಪುತ್ತೂರಿಗೆ ಭೇಟಿ ನೀಡಿ ನಡೆಸಿರುವ ತನಿಖೆ ನಡೆಸಿರುತ್ತಾರೆ ಈ ಸಂದರ್ಭದಲ್ಲಿ ದೂರುದಾರ ರಿತೇಶ್ ಪಾಯಸ್, ನಗರಸಭಾ AEE ಅರುಣ, JE ಶ್ರೀಧರ್ ನಾಯ್ಕ್ ಉಪಸ್ಥಿತರಿದ್ದರು ಎಂದು ವರದಿಯಾಗಿರುತ್ತದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.