(www.vknews.com) : ಕರ್ನಾಟಕದ ಮಣ್ಣಿನಲ್ಲಿ SSF ಅಧಿಕೃತವಾಗಿ ಘೋಷಿಣೆಯಾದ ದಿನ, ಈ ದಿನವನ್ನು ಕರ್ನಾಟಕದಲ್ಲಿ SSF ಧ್ವಜ ದಿನವೆಂಬ ಹೆಸರಿನಿಂದ ಆಚರಿಸಲಾಗುತ್ತದೆ. SSF ಕರ್ನಾಟಕ ರಾಜ್ಯದ ಯುನಿಟ್ಗಳಲ್ಲೊಂದಾದ ಜೋಗಿಬೆಟ್ಟು ಎಂಬಲ್ಲಿ ಧ್ವಜ ದಿನ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು, SYS ಸರಳಿಕಟ್ಟೆ ಸೆಂಟರ್ ಅಧ್ಯಕ್ಷರೂ, ಜೋಗಿಬೆಟ್ಟು ಘಟಕದ ಪ್ರಧಾನ ಕಾರ್ಯದರ್ಶಿಯೂ ಆದ ಜಿ. ಮುಹಮ್ಮದ್ ಕುಂಞಿಯವರ ಮನೆಯ ವಠಾರದಲ್ಲಿ ಧ್ವಜಾರೋಹಣ ಮಾಡಲಾಯಿತು.
SSF ಜೋಗಿಬೆಟ್ಟು ಯುನಿಟ್ ಅಧ್ಯಕ್ಷರಾದ ಅಬ್ದುಲ್ ಸಾಬಿತ್ ತ್ರಿವರ್ಣ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ವರುಣನ ಸಾನಿಧ್ಯ ಸಜೀವವಾದುದರಿಂದ ತದನಂತರದ ಕಾರ್ಯಕ್ರಮವನ್ನು ಮನೆಯ ಹೊರ ಜಗಲಿಯಲ್ಲಿ ನಡೆಸಲಾಯಿತು. SYS, SSF, SBS ನೇತಾರರು ಹಾಗೂ ಕಾರ್ಯಕರ್ತರೆಲ್ಲರೂ ಒಗ್ಗೂಡಿದ್ದರು. ಸಭೆಯಲ್ಲಿ SYS ಜೋಗಿಬೆಟ್ಟು ಘಟಕದ ಕೋಶಾಧಿಕಾರಿ ಅಬ್ದುಲ್ ಖಾದರ್ ಉಸ್ತಾದ್, ಸರಳಿಕಟ್ಟೆ ಸೆಂಟರ್ ಅಧ್ಯಕ್ಷರಾದ ಜಿ.ಎಂ ಕುಂಞಿಯವರು ಉಪದೇಶವಿತ್ತರು. SSF ಉಪಾಧ್ಯಕ್ಷರಲ್ಲೊಬ್ಬರಾದ ಜೆ ಮುಹಮ್ಮದ್ ಹಕೀಂ ಕಾರ್ಯಕರ್ತರಾದ ಮುಹಮ್ಮದ್ ಸಿನಾನ್ ಸಖಾಫಿ, ಹೈದರ್ ಮುಸ್ಲಿಯಾರ್, ಶಿಹಾಬುದ್ದೀನ್ ಮುಸ್ಲಿಯಾರ್, ಸಫುವಾನ್ ಅಝ್ಹರಿ, ಉಸಾಮ ಒಕೆ, ಔಸ್ ಒಕೆ, ಮಾತನಾಡಿದರು. ಎಲ್ಲರೂ ಉಪದೇಶವನ್ನು ಕೇಳಿ, ಅಗಲಿದ ಎಲ್ಲರ ಹೆಸರಿನಲ್ಲೂ ಖುರ್’ಆನ್ ಹಾಗೂ ತಹ್ಲೀಲ್ ಸಮರ್ಪಿಸಿ ಈ ದಿನದ ಮುಂಜಾನೆಯನ್ನು ಧನ್ಯವಾಗಿಸಿದರು, ಯುನಿಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಹಿದ್ ಸಖಾಫಿ ಸ್ವಾಗತಿಸಿದರು ಹಾಗೂ ಜೊತೆ ಕಾರ್ಯದರ್ಶಿ ಮುಹಮ್ಮದ್ ಸೆಲೀಂ ಧನ್ಯವಾದವಿತ್ತರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.