ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ‘1934 ರಲ್ಲಿ ಗಾಂಧಿಜಿಯವರು ದೇಶದ ಸ್ವಾತಂತ್ರ್ಯ ಹೋರಾಟ ಪರ್ಯಟನೆಯ ಭಾಗವಾಗಿ ಪುತ್ತೂರಿನಿಂದ ಸುಳ್ಯದ ವರೆಗೆ ಕಾಲ್ನಡಿಗೆ ಜಾಥ ನಡೆದಿತ್ತು. ಕುಂಬ್ರದ ಕಟ್ಟೆಯಲ್ಲಿ ಗಾಂಧಿಜಿಯ ಭಾಷಣವೂ ಇತ್ತು. ಅಂದು ಗಾಂಧಿಜಿಯೊಂದಿಗೆ ಯಾತ್ರೆ ನಡೆಸಲೂ ನಾನೂ ಇದ್ದೆ. ಅಲ್ಲಿಂದ ಮುಂದೆ ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಚಾಟಿ ಏಟು, ಪ್ರತಿಭಟನೆ ಹೊರಾಟ ಮುಂತಾದವುಗಳಲ್ಲಿ ಭಾಗಿಯಾಗಿದ್ದೆ’ ನನ್ನ ವಿಧ್ಯಾರ್ಥಿ ಕಾಲದಲ್ಲಿ ಅವರ ಸಂದರ್ಶನ ಪಡೆದಾಗ ಹೇಳಿದ ಮಾತುಗಳು!
ಕುಂಬ್ರದ ಶಾಲಾ ಕಾಲೇಜು ನಿರ್ಮಾಣದ ಸಂದರ್ಭದಲ್ಲಿ ಇವರು ಒಳಮುಗ್ರು ಗ್ರಾಮ ಪಂ. ಸದಸ್ಯರಾಗಿದ್ದರು. ಶಾಲಾ ಕಾಲೇಜು ಕಟ್ಟಡ ನಿರ್ಮಾಣ ಸಂಬಂದಿಸಿ ಜಾಗದ ತಕರಾರು ಬಂದಾಗ ಅವರೇ ಮುಂದೆ ನಿಂತು ಹೋರಾಡಿ ಕಾಲೇಜು ಕಟ್ಟಡ ನಿರ್ಮಾಣವಾಗಲು ಕಾರಣಕರ್ತರಾದವರು.
ಕೆಐಸಿ ಮತ್ತು ಇಬ್ರಾಹಿಂ ಹಾಜಿ! ಅವರ 97 ನೇ ವಯಸ್ಸಿನಲ್ಲೂ ದಿನ ನಿತ್ಯ 3 ಕಿ.ಮೀ ನಡೆದುಕೊಂಡು ಬಂದು ಕೆಐಸಿಯನ್ನು ಸಂದರ್ಶಿಸುತ್ತಿದ್ದರು. ಕೆಐಸಿಯ ನಿತ್ಯ ಸಂದರ್ಶಕ ಇವರು. ನಾನು ವಿಧ್ಯಾರ್ಥಿಯಾಗಿದ್ದಾಗಲೂ ನಂತರವೂ ಜುಮಾ ಭಾಷಣದ ನಂತರ ಅವರೇ ಸ್ವತಃ ಕಂಡು ಮಾತನಾಡಿಸಿ ಹುರಿದುಂಬಿಸಿ ದುವಾ ಮಾಡುತ್ತಿದ್ದರು.
ಕೆಐಸಿಯ ಪ್ರತಿಯೊಂದು ಬೆಳವಣಿಗೆಯಲ್ಲೂ ಅವರು ಕಾಣುತ್ತಿದ್ದ ಹರುಷ, ಅಭಿಮಾನ ನಮ್ಮನ್ನೂ ಆಶ್ಚರ್ಯಗೊಳಿಸುತ್ತಿತ್ತು. ಎರಡು ಮೂರು ವಾರಗಳ ಮುಂಚೆ ಅವರನ್ನು ಸಂದರ್ಶಿಸಲು ಹೋದಾಗಲೂ ಕೆಐಸಿಗೆ ಬರಲು ಆಸೆಯಾಗುತ್ತಿದೆ.ಕೋವಿಡ್ ಕಾರಣದಿಂದ ನೀವ್ಯಾರೂ ಅಲ್ಲಿ ಇಲ್ಲ ಎಂದು ಭಾವಿಸಿ ಬಂದಿಲ್ಲ ಎಂದಿದ್ದರು.
ದೇಶಕ್ಕಾಗಿ, ನಾಡಿಗಾಗಿ ಅಪಾರ ಕೊಡುಗೆ ಕೊಡಲು ಸಾಧ್ಯವಾದ ಒಬ್ಬ ಪಕ್ಕಾಗಿ ಹಳ್ಳಿಗ, ರೈತ!
ಆರೋಗ್ಯ! ನೂರರ ಆಸುಪಾಸಿನಲ್ಲೂ ದೃಷ್ಟಿ, ಶ್ರವಣ, ನೆನಪಿನ ಶಕ್ತಿ ಯಾವುದೂ ಏರುಪೇರಾಗದ ಆರೋಗ್ಯ! ನನ್ನ ಮಿತ ಆಹಾರ ಮತ್ತು ಕಾಲ್ನಡಿಗೆ ನನ್ನ ಆರೋಗ್ಯದ ರಹಸ್ಯ ಎಂದು ಹಲವಾರು ಬಾರಿ ನಾನು ವಿಚಾರಿಸುವಾಗ ಅವರು ಹೇಳಿದ್ದುಂಟು. ನನ್ನ ತಂದೆ ಮರಣ ಹೊಂದಿ ಒಂಬತ್ತು ವರ್ಷಗಳು ಕಳೆದವು. ಮೊನ್ನೆ ಹೋದಾಗಲೂ ನನ್ನ ತಂದೆಯ ಕುರಿತು ಹೇಳಲು ಮರೆಯಲಿಲ್ಲ!
ನಾನಂತೂ ಅವರನ್ನು ತುಂಬಾ ಮೆಚ್ಚಿಕೊಂಡಿದ್ದೆ!
ಅಲ್ಲಾಹು ಆಖಿರಾ ಬೆಳಕಾಗಿಸಲಿ. ಸ್ವರ್ಗದಲ್ಲಿ ಒಂದುಗೂಡಿಸಲಿ.
-ಅನೀಸ್ ಕೌಸರಿ ಕೆಐಸಿ ಕುಂಬ್ರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.