ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ನಾನಿಂದು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಕರ್ನಿರೆ ಕೆ ಎಸ್ ಸಯೀದ್ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ವಾಗಿ ಮಂಗಳೂರಿನ ಟ್ಯಾಲೆಂಟ್ ಹಾಲಿನಲ್ಲಿ ಆಯೋಜಿಸಿದ ಸಭೆಯಲ್ಲಿ ಭಾಗಿಯಾಗಿದ್ದೆ.
ಅಲ್ಲಿ ಹೋದಾಗಲೇ ತುಂಬಾ ಸಂತೋಷ ಪಟ್ಟೆ.ಕಾರಣ ಸಮಯಕ್ಕಿಂತ ಮೊದಲೇ ಸುಮಾರು ಐವತ್ತು ಕುಟುಂಬದ ಆಧಾರವಾಗಿರುವ ವಿಧವೆಯರು ನೆರೆದಿದ್ದರು.ಅವರು ಉಚಿತವಾಗಿ ಸಿಗುವ ಹೊಲಿಗೆ ಮೆಷಿನನ್ನು ಪಡೆದುಕೊಳ್ಳಲು ಬಂದಿದ್ದರು. ಟ್ಯಾಲೆಂಟ್ ಸಂಸ್ಥೆ ಹೊಲಿಯುವ ವಿದ್ಯೆಯನ್ನು ಕಲಿಸಿ ಕೊಟ್ಟರು. ಜೊತೆಗೆ ಹೊಲಿಯುವ ಯಂತ್ರ ವನ್ನು ಪಡೆಯುವಂತೆ ಮಾಡಿದರು. ವಿಧವೆಯರು ಅಂದಾಗ ಸಮಾಜದಲ್ಲಿ ರುವ ಕೀಳರಿಮೆ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಅಲ್ಲಗಳೆಯಲಾಗದು.
ಅವರು ಆರೋಗ್ಯ ,ಯೌವ್ವನ,ಇದ್ದರೂ ಪುನಃ ದಾಂಪತ್ಯ ಜೀವನ ಬಯಸುವುದು ಕಷ್ಟ.ಕಾರಣ ಪ್ರಥಮ ಮದುವೆ ಆಗುವಾಗಲೇ ಮೂವತ್ತು ದಾಟುವ ಅವಸ್ಥೆ!. ಆದರೂ ವಿಧವೆಯರು ಸ್ವಾವಲಂಬಿ ಜೀವನ ಸಾಗಿಸಲು ಸರಳವಾದ ವ್ಯವಸ್ಥೆ ಹೊಲಿಗೆಯಾಗಿದೆ. ಈ ನಿಟ್ಟಿನಲ್ಲಿ ಸಹಾಯ ಹಸ್ತವನ್ನು ನೀಡಿದವರು ಕರ್ನಿರೆ ಫ್ಯಾಮಿಲಿ.
ಕರ್ನಿರೆ ಫ್ಯಾಮಿಲಿ ಯ ತಾಯಿ ಮರ್ಹೂಮ್ ಆಮಿನಮ್ಮಾ ಹಜ್ಜುಮ್ಮ ತೀರಿಕೊಂಡ ಮೇಲೆ ಮಾತೃ ವಿಯೋಗದ ದುಃಖ ಆ ಕುಟುಂಬದಿಂದ ಕಳೆದು ಹೋಗಿಲ್ಲ.ಆ ದುಃಖದ ಛಾಯೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಎರಡು ಮಕ್ಕಳಲ್ಲೂ ಎದ್ದು ಕಾಣುತ್ತಿತ್ತು. ಮಗ ಅಶ್ರಫ್ ಮಾತನಾಡುತ್ತಾ ಹೇಳಿದ್ದು ನಾವು ಈ ರೀತಿಯಲ್ಲಿ ಬೆಳೆದಿದ್ದರೆ ಅದು ನಮ್ಮ ತಾಯಿಯ ಮಾರ್ಗದರ್ಶನ ಮಾತ್ರವೆಂದು ಹೇಳುತ್ತಾ ಗದ್ಗದಿತರಾದರು.ವಿದೇಶ ದಲ್ಲಿ ಕಂಪನಿಯನ್ನು ಕಟ್ಟಿ ಸುಮಾರು ಎಂಟು ಸಾವಿರ ಮಂದಿಗೆ ಉದ್ಯೋಗ ನೀಡಿದ ಸಂಸ್ಥೆ ಯ ಮುಖ್ಯ ಸ್ಥರ ಮಾತಿದು.ತಮ್ಮ ಅನ್ಸೀಫ್ ಕೂಡಾ ಅದೇ ಮಾತಿಗೆ ತಲೆದೂಗಿಸುತ್ತಿದ್ದರು.ಚಿಕ್ಕಪ್ಪ ಅಬೂಬಕರ್ ಹಾಜಿಯವರು ಅವರಿಗೆ ಉತ್ತಮ ಪ್ರೇರಣೆಯಾಗಿ ಜೊತೆಗಿದ್ದರು.ಅಲ್ಲಿ ಸೇರಿದ ಐವತ್ತು ಮಂದಿ ವಿಧವೆಯರ ಮುಖದಲ್ಲಿ ನಗು ಅರಳುವಾಗ ಕರ್ನಿರೆಯ ತಾಯಿ ಮರ್ಹೂಮ್ ಆಮಿನಮ್ಮ ಹಜ್ಜುಮ್ಮಾ ಸ್ವರ್ಗೀಯ ಸುಖವನ್ನು ಅನುಭವಿಸುತ್ತಾ ಮಕ್ಕಳ ಬಗ್ಗೆ ಆನಂದಪಡುತ್ತಿರಬಹುದು.ಹಾಗೇ ಮಡದಿಯ ವಿರಹ ದುಃಖ ದಲ್ಲಿರುವ ಕರ್ನಿರೆ ಹಾಜಿಯವರಿಗೂ ಧೀರ್ಘ ಆಯುಷ್ಯ ವನ್ನೂ ಆರೋಗ್ಯ ವನ್ನು ಅಲ್ಲಾಹನು ಕರುಣಿಸಲಿ ಆಮೀನ್. ಪ್ರಾರ್ಥನೆ ಸದಾ ಮಾಡೋಣ.
ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.