ಉಪ್ಪಿನಂಗಡಿ (www.vknews.com) : ಪೈಝಿ ಉಲಮಾಗಳ ಪ್ರತಿಷ್ಟಿತ ಸಂಘಟನೆ ಪೈಝೀಸ್ ಅಸೋಶಿಯೇಶನ್ ಇದರ ರಾಜ್ಯ ಘಟಕದ ವತಿಯಿಂದ ತಿಂಗಳು ಪೂರ್ತಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಮೀಲಾದ್ ಪ್ರಯುಕ್ತ “ಸಮಕಾಲೀನ ಸಮಸ್ಯೆಗೆ ಪ್ರವಾದಿ ಚರ್ಯೆಯಲ್ಲಿ ಪರಿಹಾರ” ಎಂಬ ಪ್ರಮೇಯದೊಂದಿಗೆ ಹಮ್ಮಿಕೊಳ್ಳಲಾದ ರಬೀಅ್ ಕ್ಯಾಂಪಯಿನ್ ಇದರ ಉದ್ಘಾಟನಾ ಕಾರ್ಯಕ್ರಮ ಉಪ್ಪಿನಂಗಡಿ ಸಮೀಪದ ಕರಾಯ ಮಸೀದಿ ವಠಾರದಲ್ಲಿ ಅದ್ದೂರಿಯಾಗಿ ಜರಗಿತು.
ಜಿಲ್ಲೆ ಕಂಡ ಶ್ರೇಷ್ಡ ಪಂಡಿತರೂ ಮುಸ್ಲಿಮರ ಅಭಿಮಾನದ ಕೇಂದ್ರ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜು ಇದರ ಪ್ರಾನ್ಸುಪಾಲರೂ ಆದ ಶೈಖುನಾ ಉಸ್ಮಾನ್ ಪೈಝಿ ಯವರ ಸಾರಥ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನುಗ್ಗುತ್ತಿರುವ ಪೈಝೀಸ್ ರಾಜ್ಯ ಘಟಕವು ಈಗಾಗಲೇ ರಾಜ್ಯದ ಜನತೆಯ ಮನಗೆದ್ದು ಜನರ ಪ್ರಶಂಸೆಗೆ ಪಾತ್ರವಾಗಿದ್ದು ಉಲ್ಲೇಖನೀಯ. ಶ್ರೀಯುತರ ಅದ್ಯಕ್ಷತೆಯಲ್ಲಿ ನಡೆದ ಸದ್ರಿ ಕಾರ್ಯಕ್ರಮವನ್ನು ಸಯ್ಯಿದ್ ಪೂಕೋಯ ತಙಳ್ ಉದ್ಘಾಟಿಸಿದರು.
ಅವರು ಮಾತನಾಡಿ ವಿದ್ಯೆ ದೊರಕಿದರೆ ಸಾಲದು ಅದರೊಂದಿಗೆ ಸಂಸ್ಕಾರವೂ ಲಭಿಸ ಬೇಕು.ಪ್ರವಾದಿಯವರು ಈ ಎರಡನ್ನೂ ಜನರಿಗೆ ನೀಡಿ ಉತ್ತಮ ಸಮಾಜವನ್ನು ನಿರ್ಮಿಸಿದರು ಎಂದು ಅಭಿಪ್ರಾಯ ಪಟ್ಟರು. ಅದ್ಯಕ್ಷೀಯ ಭಾಷಣದಲ್ಲಿ ಇಂದಿನ ಕಲುಷಿತ ಜಗತ್ತಿನಲ್ಲಿ ಹಲವು ಸಮಸ್ಯೆಗಳು ಉಲ್ಭಣವಾಗುತ್ತಿದೆ.ಇದಕ್ಕೆ ನೆಬಿ ಚರ್ಯೆಯಲ್ಲಿ ಪರಿಹಾರ ಇದೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಭಾಷಣಗೈದ ಉಸ್ತಾದ್ ಎಸ್ ಬಿ ದಾರಿಮಿ ಮಾತನಾಡಿ ಜಾಮಿಹ ಪಟ್ಟಿಕಾಡ್ ಸಂಸ್ಥೆ ಇಂದು ಶ್ರೇಷ್ಟ ವಿದ್ಯಾಕೇಂದ್ರವಾಗಿ ಎಲ್ಲರನ್ನೂ ತನ್ಮತ್ತ ಆಕರ್ಷಿಸುತ್ತಿದೆ.
ಧಾರ್ಮಿಕ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗಕ್ಕಾಗಿ ಅಲ್ಲಿಗೆ ತೆರಳುತ್ತಿದ್ದು ಪೂರ್ವಿಕ ಉಲಮಾಗಳು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆರಂಭಿಸಿದ ಈ ಅರಬಿಕ್ ಕಾಲೇಜು ಇತರ ಸಂಸ್ಥೆಗಳ ಮಾತೃ ಸ್ಥಾನದಲ್ಲಿ ನಿಲ್ಲುತ್ತದೆ ಎಂದರಲ್ಲದೇ ಕಾಲದ ಬೇಡಿಕೆಗೆ ಸ್ಪಂದಿಸಿ ದಾವಾ ಕ್ಷೇತ್ರದಲ್ಲಿ ಬದಲಾವಣೆಯ ಹಾದಿಯನ್ನು ಮೈಗೂಡಿಸಿ ಕೊಂಡರೆ ಯಶಸ್ಸು ಸಾದ್ಯ ಎಂದರು.
ಸ್ಥಳೀಯ ಮುದರ್ರಿಸ್ ಹೈದರ್ ದಾರಿಮಿ,ತಬೀಬ್ ಹಬೀಬುರ್ರಹ್ಮಾನ್ ತಂಙಳ್,ಇಸ್ಮಾಯಿಲ್ ಪೈಝಿ ಸೂರಿಂಜೆ ,ಶರೀಪ್ ಪೈಝಿ ಕಡಬ,ಶುಕೂರ್ ದಾರಿಮಿ ಕರಾಯ, ಮೊದಲಾದವರು ಮಾತನಾಡಿದರು. ಸಿದ್ದೀಖ್ ಪೈಝಿ ಕರಾಯ ಸ್ವಾಗತಿಸಿದರು.
ಈಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕರಾಯ,ಅಬ್ದುಲ್ ಖಾದರ್ ಹಾಜಿ ರೈಟರ್,ಆದಂ ದಾರಿಮಿ ಅಜ್ಜಿಕಟ್ಟೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.