(www.vknews.in)ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ದಕ್ಷಿಣ ಕನ್ನಡ ಘಟಕದ ವತಿಯಿಂದ ದಿನಾಂಕ 27/10/2020 ಮಂಗಳವಾರದಂದು ಉಪ್ಪಿನಂಗಡಿ ಮಾದರಿ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಪ್ರತಿನಿಧಿಗಳ ಸಭೆ ನಡೆಯಿತು.
ಈ ಸಭೆಯಲ್ಲಿ ಖ್ಯಾತ ಶಿಕ್ಷಣ ತಜ್ಞರು, ಮಗು ಮತ್ತು ಕಾನೂನು ಕೇಂದ್ರ(ನೇಷನಲ್ ಲಾ ಕಾಲೇಜು ಇಂಡಿಯಾ ಯೂನಿವರ್ಸಿಟಿ) ಬೆಂಗಳೂರು ಇದರ ಸೀನಿಯರ್ ಫೆಲೋ ಹಾಗೂ ಎಸ್ಡಿಎಂಸಿ ಸಮನ್ವಯ ವೇದಿಕೆಯ ಮಹಾ ಪೋಷಕರಾದ ಡಾ.ನಿರಂಜನಾರಾಧ್ಯ. ವಿ. ಪಿ ರೊಂದಿಗೆ ವಿಧ್ಯಾಗಮ ಅಥವಾ ಅದರ ಬದಲಿ ವ್ಯವಸ್ಥೆ ಎಂಬುದರ ಬಗ್ಗೆ ಆನ್ಲೈನ್ ನಲ್ಲಿ ವಿಚಾರ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮ ನಡಸಲಾಯಿತು.
ಅದಲ್ಲದೆ ಜಿಲ್ಲೆಯಲ್ಲಿರುವ ಸಂಘಟನೆಯನ್ನು ಗಟ್ಟಿ ಮಾಡುವ ಆವಶ್ಯಕತೆ,ಮತ್ತು ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಕೂಡ ಸಂವಾದದ ವಿಷಯ ವಾಯಿತು.
ದಕ್ಷಿಣ ಕನ್ನಡದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಎಲ್ಲಾ ಎಸ್ಡಿಎಂಸಿ ಯವರು ಕೂಡ ಶಾಲೆ ತೆರೆಯುವುದು,ಅಥವಾ ವಿಧ್ಯಾಗಮವನ್ನು ಮುಂದುವರಿಸಿ ಕೊಂಡು ಹೋಗುವ ಬಗ್ಗೆ ತಮ್ಮ ಸಹಮತವನ್ನು ವ್ಯಕ್ತ ಪಡಿಸಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್ಲೈನ್ ಶಿಕ್ಷಣವು ಮರೀಚಿಕೆ ಆಗಿರುವ ಸಂಧರ್ಭದಲ್ಲಿ ವಿಧ್ಯಾಗಮ ಎನ್ನುವ ಒಂದು ಯೋಜನೆ ತುಂಬಾ ಪ್ರಯೋಜನವಾಗಿದೆ. ಇದರಿಂದ ಹೆಚ್ಚಿನ ಎಲ್ಲಾ ಶಾಲೆಗಳಲ್ಲೂ ದಾಖಲಾತಿಯ ಹೆಚ್ಚಳ ಕೂಡ ಆಗಿರುವ ಬಗ್ಗೆ ಎಸ್ಡಿಎಂಸಿ ಪ್ರತಿನಿಧಿಗಳು ತಮ್ಮ ಶಾಲೆಗಳ ಮತ್ತು ಪ್ರದೇಶಗಳ ವಿವರವನ್ನು ಸಲ್ಲಿಸಿದರು.
ಅದೇ ರೀತಿ ಸರಕಾರಿ ಶಾಲೆಗಳಲ್ಲಿ ರುವ ಶಿಕ್ಷಕರ ಕೊರತೆ, ಪಠ್ಯ ಪುಸ್ತಕಗಳ ಸರಿಯಾದ ವಿತರಣೆ ಆಗದಿರುವುದು, ಮೂಲಭೂತವಾದ ಕೆಲವು ಆವಶ್ಯಕತೆ ಯ ಬಗ್ಗೆ ಕೂಡ ಚರ್ಚೆಗಳು ನಡೆದವು.
ಅದಲ್ಲದೆ ಮಕ್ಕಳ ಅಕ್ಷರದಾಸೋಹದ ಅಕ್ಕಿ ,ಹಾಲು ಮತ್ತು ದಿನಸಿ ಸಾಮಾನುಗಳು ಗ್ರಾಮಾಂತರ ಮಕ್ಕಳ ಪೌಷ್ಟಿಕತೆ ಗೆ ಅಗತ್ಯವಾಗಿದ್ದುಅದು ಇನ್ನೂ ಕೂಡ ವಿತರಣೆ ಆಗದಿರುವ ಬಗ್ಗೆ ಆಶಂಕೆ ವ್ಯಕ್ತವಾಯಿತು,
ಸರಕಾರ ಇದರ ಬಗ್ಗೆ ಆದಷ್ಟು ಬೇಗ ಕ್ರಮ ಜರಗಿಸಲು ಒತ್ತಾಯಿಸಲು ನಿರ್ಣಯಿಸಲಾಯಿತು. ಸರಕಾರಿ ಶಾಲೆಗಳ ವಿದ್ಯಾಗಮವು ಯಾವುದೋ ಲಾಬಿಯ ಕಾರಣದಿಂದ ತಾತ್ಕಾಲಿಕ ವಾಗಿ ನಿಲ್ಲಿಸಿರುವುದನ್ನು ಆದಷ್ಟು ಬೇಗ ಶಾಲಾ ವರಾಂಡದಲ್ಲಿ ಅಥವಾ ಶಾಲೆಯಲ್ಲೇ ದಿನಕ್ಕೆ ಒಂದು ತರಗತಿ ಅಥವಾ ಪಾಲಿ ಪದ್ಧತಿಯಲ್ಲಿ ನಡೆಸುವ ಬಗ್ಗೆ ಕೂಡ ಅಭಿಪ್ರಾಯ ವ್ಯಕ್ತವಾಯಿತು.
ಅದಲ್ಲದೆ ಕಿರಿಯ ಪ್ರಾಥಮಿಕ ಶಾಲೆಗಳು, ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ಮಧ್ಯಾಹ್ನದ ಊಟ ದೊಂದಿಗೆ ಶಾಲೆಯನ್ನು ತೆರೆಯುವುದು ಕೂಡ ಸೂಕ್ತ ವಾಗಿರುವ ಬಗ್ಗೆ ಕೂಡ ಚರ್ಚೆಗಳು ನಡೆಯಿತು.
ಶಾಲೆಗಳನ್ನು ತೆರೆಯುವುದಾದರೆ ಮಾಸ್ಕ್, ಸಾನಿಟೈ ಜರ್ ,ಶುದ್ಧ ಬಿಸಿನೀರು ಮುಂತಾದ ಆವಶ್ಯಕ ಮುಂಜಾಗರೂಕತೆ ಯನ್ನು ಸ್ಥಳೀಯ ಪಂಚಾಯತ್ ಗಳ ಸಹಕಾರ ,ಪೋಷಕರ ಮತ್ತು ಎಸ್ಡಿಎಂಸಿ ಯವರ ಸಹಕಾರದೊಂದಿಗೆ ನಡೆಸುವ ಬಗ್ಗೆ ಕೂಡ ಅಭಿಪ್ರಾಯ ವ್ಯಕ್ತವಾಗಿತ್ತು.
ಇದರ ಬಗ್ಗೆ ಸರಕಾರಕ್ಕೆ ಮತ್ತು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕರಿಗೆ ಮನವಿಯನ್ನು ಕೊಡುವುದು ಎಂದು ತೀರ್ಮಾನಿಸಲಾಯಿತು.
ಈ ಸಮಯದಲ್ಲಿ ಜಿಲ್ಲಾ ಘಟಕವನ್ನು ಪುನರ್ ರಚಿಸಲಾಯಿತು. ಅಧ್ಯಕ್ಷರಾಗಿ ಎಸ್ ಎಂ ಇಸ್ಮಾಯಿಲ್
, ಉಪಾಧ್ಯಕ್ಷರಾಗಿ ಪ್ರಮೀಳಾ ಎಂ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.