ಇಸ್ಲಾಮಾಬಾದ್(ವಿಶ್ವ ಕನ್ನಡಿಗ ನ್ಯೂಸ್): ಹೊಸ ಮಂದಿರವನ್ನು ಕಟ್ಟಲು ಅನುಮತಿಯನ್ನು ನೀಡುವಂತೆ ಪಾಕಿಸ್ತಾನ ಸರಕಾರಕ್ಕೆ ಧಾರ್ಮಿಕ ಸಭೆ ಸೂಚಿಸಿದೆ.ಈ ನಡೆಯನ್ನು ಹಿಂದೂ ಮುಖಂಡ,ಸಂಸತ್ ಸದಸ್ಯ ಲಾಲ್ ಮಲ್ಹಿ ಸ್ವಾಗತಿಸಿದ್ದಾರೆ.ಪಾಕಿಸ್ತಾನದ ಸಾಂವಿಧಾನಿಕ ಹಕ್ಕಿನಂತೆ ಎಲ್ಲಾ ಧರ್ಮದವರಿಗೂ ಅವರವರ ಧಾರ್ಮಿಕ ವಿಧಿಯಂತೆ ಅಂತ್ಯ ಕ್ರಿಯೆ ನಡೆಸಬಹುದು,ಈ ಹಕ್ಕಿನ ಆಧಾರದಲ್ಲಿ ಹಿಂದೂಗಳಿಗೆ ಅವರ ಧಾರ್ಮಿಕ ಮಂದಿರವನ್ನು ನಿರ್ಮಿಸಬಹುದು.ಇದರ ಜೊತೆಗೆ ಹಿಂದೂ ಸಮುದಾಯ ಭವನಗಳನ್ನು ನಿರ್ಮಿಸುವುದಕ್ಕೆ ಸಂವಿಧಾನ ಹಕ್ಕು ನೀಡಿದೆ ಎಂದೂ ಉಲ್ಲೇಖಿಸಿದೆ.
3000 ದಷ್ಟು ಹಿಂದೂಗಳು ಇಸ್ಲಾಮಾಬಾದ್ ನಲ್ಲಿ ವಾಸವಿದ್ದರೂ ಯಾವುದೇ ಮಂದಿರವಿಲ್ಲ.ಇಮ್ರಾನ್ ಖಾನ್ ಮಂದಿರ ಕಟ್ಟುವುದಕ್ಕೆ ಧನ ಸಹಾಯ ನೀಡುವುದಾಗಿ ಈ ಹಿಂದೆ ಘೋಷಿಸಿದ್ದರು.ಆದರೆ ಜೂನ್ ನಲ್ಲಿ ಇಸ್ಲಾಮಾಬಾದ್ ನಲ್ಲಿ ಮಂದಿರ ನಿರ್ಮಾಣದ ಆರಂಭವಾದಾಗ ಕೆಲವು ಬೆದರಿಕೆ ಹಾಗು ವಿವಾದಗಳು ಎದ್ದಾಗ ಪ್ರಧಾನಿ ಇಮ್ರಾನ್ ಖಾನ್ ತಡೆಹಿಡಿಯುವಂತೆ ಸೂಚಿಸಿ,ಧಾರ್ಮಿಕ ಸಭೆಯ ತೀರ್ಪಿಗೆ ಬಿಟ್ಟಿದ್ದರು.ಇದೀಗ ಬಂದ ತೀರ್ಪು ವಿವಾದವನ್ನು ಬಗೆಹರಿಸಲಿದೆ ಎಂದು ಅಂದಾಜಿಸಲಾಗಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.