(ವಿಶ್ವ ಕನ್ನಡಿಗ ನ್ಯೂಸ್ ): ಪ್ರಸ್ತುತ ಐಪಿಎಲ್ ಸೇರಿದಂತೆ ದೇಶಿಯ ಪಂದ್ಯಾವಳಿಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರು ಸೂರ್ಯಕುಮಾರ್ ಯಾದವ್ ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ದೊರಕದೆ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ಅನೇಕ ವರ್ಷದಿಂದ ಮುಂಬೈ ರಣಜಿ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಸೂರ್ಯ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ನ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು, ಆದರೆ ಟೀಮ್ ಇಂಡಿಯಾ ಆಯ್ಕೆ ಮಂಡಳಿ ಮಾತ್ರ ಸೂರ್ಯನ ಕಡೆಗೆ ತಿರುಗಿ ಕೂಡ ನೋಡದೆ ಇರುವುದಕ್ಕೆ ಕಾರಣ ಏನು ಎಂಬುದರಬಗ್ಗೆ ಅನುಮಾನಗಳು ಮೂಡತೊಡಗಿದೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಕೂಡ ಸೂರ್ಯ ಕುಮಾರ್ ಆಯ್ಕೆಯಾಗದೆ ಇರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆಯೇ ಎಂಬ ಅನುಮಾನ ಮೂಡತೊಡಗಿದೆ.
ನಿನ್ನೆ ನಡೆದ ಆರ್ ಸಿ ಬಿ ವಿರುದ್ದದ ಪಂದ್ಯದಲ್ಲಿ ಸೂರ್ಯಕುಮಾರ್ ಪರೋಕ್ಷವಾಗಿ ತನ್ನ ಬೇಸರ ವ್ಯಕತಪಡಿಸಿದ್ದು ಇದೀಗ ಆ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಸೂರ್ಯ ನ ಪರವಾಗಿ ಗೌತಮ್ ಗಂಭೀರ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಮಾತುಗಳನ್ನೆತ್ತಿದ್ದು ಟೀಮ್ ಇಂಡಿಯಾ ದ ಆಯ್ಕೆ ಮಂಡಳಿ ಇನ್ನಾದರೂ ಈ ಪ್ರತಿಭಾವಂತ ಆಟಗಾರನ ಕಡೆಗೆ ಗಮನಹರಿಸಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.