ಶಾರ್ಜಾ (ವಿಶ್ವ ಕನ್ನಡಿಗ ನ್ಯೂಸ್): ಪ್ರವಾದಿ ಹಾದಿಯಲ್ಲಿ ಗೆಲುವಿದೆ ಎಂಬ ಘೋಷವಾಕ್ಯದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತಾರಾಷ್ಟ್ರ ಮಟ್ಟದಲ್ಲಿ ಆನ್ಲೈನ್ ಮೂಲಕ ನಡೆಸುವ ಮೀಲಾದ್ ಸಮಾವೇಶದ ಪ್ರಯುಕ್ತ ಶಾರ್ಜಾ ಝೋನ್ ವತಿಯಿಂದ ನಡೆಯುವ ಕಾರ್ಯಕ್ರಮವು ಅ.30ರಂದು ಯುಎಇ ಸಮಯ ಸಂಜೆ 6 ಗಂಟೆಗೆ ಝೋನ್ ಅಧ್ಯಕ್ಷ ಅಬುಸ್ವಾಲಿಹ್ ಸಖಾಫಿಯವರ ದುವಾದೊಂದಿಗೆ ಆರಂಭಗೊಳ್ಳಲಿದೆ.
ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಖ್ಯಾತ ಯುವ ವಾಗ್ಮೀ ನೌಫಲ್ ಸಖಾಫಿ ಕಳಸ ಹುಬ್ಬುರ್ರಸೂಲ್ ಪ್ರಭಾಷಣ ನಡೆಸಿಕೊಡಲಿದ್ದು, ಪ್ರಾರ್ಥನಾ ಸಂಗಮಕ್ಕೆ ಅಸೈಯದ್ ಶಿಹಾಬುದ್ದೀನ್ ಇಂಬಿಚ್ಚಿಕೋಯ ತಂಙಲ್ ನೇತೃತ್ವ ನೀಡಲಿದ್ದಾರೆ. ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಲಿದೆ.
ಯುವ ಹಾಡುಗಾರ ಫಾರೂಕ್ ಕುಂಜಿಲ ತಂಡವು ಬುರ್ದಾ ಆಲಾಪನೆ ಮಾಡಲಿದ್ದು, ಮಾಸ್ಟರ್ ಹಾಫೀಲ್ ಖಿರಾಅತ್ ಪಾರಾಯಣ ನಡೆಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಕೆಸಿಎಫ್ ಶಾರ್ಜಾ ಝೋನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ರಜಬ್ ಉಚ್ಚಿಲ ಸ್ವಾಗತ ಭಾಷಣ ನಡೆಸಲಿದ್ದಾರೆ.
ಮೀಲಾದ್ ಸಮಿತಿ ಅಧ್ಯಕ್ಷ ಝೈನುದ್ದೀನ್ ಹಾಜಿ ಬೆಳ್ಳಾರೆ ಪ್ರಾಸ್ತಾವಿಕವಾಗಿ ಭಾಷಣ ಮಾಡಲಿದ್ದು, ಬಹು ನಿರೀಕ್ಷಿತ ಮರ್ಕಝುಲ್ ಇಸ್ಲಾಮಿ ಸಂಸ್ಥೆಯ ಕುರಿತಾದ ಪೂರ್ಣ ಚಿತ್ರಣವನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಇಬ್ರಾಹೀಂ ಸಖಾಫಿ ಕೆದುಂಬಾಡಿ ವೀಕ್ಷಕರ ಮುಂದಿಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ.ಶೇಖ್ ಬಾವಾ ಹಾಜಿ, ಆರ್ಥಿಕ ವಹಿವಾಟುಗಳ ನಿಯಂತ್ರಕ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ, ಸಂಘಟನಾ ಸಮಿತಿ ಅಧ್ಯಕ್ಷ ಪಿ.ಎಂ.ಅಬ್ದುಲ್ ಹಮೀದ್ ಈಶ್ವರಮಂಗಲ, ಗಲ್ಫ್ ಇಶಾರಾ ಕೋರ್ಡಿನೇಟರ್ ಉಸ್ಮಾನ್ ಹಾಜಿ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರಾ, ಕೋಶಾಧಿಕಾರಿ ಇಬ್ರಾಹೀಂ ಹಾಜಿ ಬ್ರೈಟ್ ಮಾರ್ಬಲ್, ಶಾರ್ಜಾ ಝೋನ್ ಇಹ್ಸಾನ್ ಸಮಿತಿ ಅಧ್ಯಕ್ಷ ಅಬ್ದುರ್ರಝಾಕ್ ಹಾಜಿ ಜೆಲ್ಲಿ, ಕೋಶಾಧಿಕಾರಿ ನಲ್ಕ ಅಬ್ದುಲ್ಲಾ ಹಾಜಿ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮೀಲಾದ್ ಸಮಿತಿ ಪ್ರಧಾನ ಕಾರ್ಯದರ್ಶಿ ನೌಶಾದ್ ಯು.ಟಿ.ಮಾಹಿತಿ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.