(www.vknews.com) : ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ದುಬೈ ನೋರ್ಥ್ ಝೋನ್ ವತಿಯಿಂದ ಲೋಕಾನುಗ್ರಹಿ ಹಝ್ರತ್ ಪೈಗಂಬರ್ ಮುಹಮ್ಮದ್ ಮುಸ್ತಫಾ (ಸ.ಅ) ರವರ 1495 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಮೀಲಾದ್ ಕಾನ್ಫರೆನ್ಸ್ -2020 ಅತೀ ವಿಜೃಂಭಣೆಯಿಂದ ಅಕ್ಟೊಬರ್ 23ರಂದು ಶುಕ್ರವಾರ ಮದ್ಯಾಹ್ನ ಝೂಮ್ ಆಪ್ ಮುಖಾಂತರ ಆನ್ಲೈನ್ ನಲ್ಲಿ “ಪ್ರವಾದಿ ಹಾದಿಯಲ್ಲಿ ಗೆಲುವಿದೆ” ಎಂಬ ಘೋಷ ವಾಕ್ಯ ದೊಂದಿಗೆ ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಸಾಲೆತ್ತೂರ್ ರವರ ಅಧ್ಯಕ್ಷತೆಯಲ್ಲಿ ಬಹಳ ಯಶಸ್ವಿಯಾಗಿ ನಡಯಿತು. ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಆ ನೆರವೇರಿಸಿದರು. ಮೌಲಿದ್ ಹಾಗೂ ಬುರ್ದಾ ಆಲಪನೆಯನ್ನು ಮುಸ್ತಫ ಮಾಸ್ಟರ್ ಉಳ್ಳಾಲ ಹಾಗೂ ಅಬ್ದುಲ್ಲ ಸಖಾಫಿ ಕೊಡಗು ತಂಡದವರು ನೆರವೇರಿಸಿದರು.
ಉದ್ಘಾಟನೆಯನ್ನು ಕೆಸಿಎಫ್ INC ಅಧ್ಯಕ್ಷರಾದ ಡಾ.ಶೇಕ್ ಭಾವ ಹಾಜಿ ಮಂಗಳೂರು ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಉಡುಪಿ ಚಿಕ್ಮಗಳೂರು ಹಾಗೂ ಹಾಸನ ಜಿಲ್ಲಾ ಸಂಯುಕ್ತ ಖಾಝಿಗಳಾದ ಝೈನುಲ್ ಉಲಮಾ ಮಾಣಿ ಉಸ್ತಾದರನ್ನು ಕೆಸಿಎಫ್ ದುಬೈ ನೋರ್ಥ್ ಝೋನ್ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ಲಾ ಉಸ್ತಾದ್, ಮೆಹಬೂಬ್ ಸಖಾಫಿ ಕಿನ್ಯ, ಕೆಸಿಎಫ್ ದುಬೈ ನೊರ್ತ್ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಲತ್ವೀಫಿ, ಕಾಸಿಂ ಮದನಿ ತೆಕ್ಕಾರು, ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ , ಸಲೀಂ ಸಖಾಫಿ ಮೈದಾನಿಮೂಲೆ ಹಾಗೂ ಕಲಂದರ್ ಕಬಕ ರವರನ್ನೊಳಗೊಂಡ ತಂಡ ಸನ್ಮಾನಿಸಿದರು.
ಕನ್ನಡಿಗರ ಕಣ್ಮಣಿ ಭಾಷಣ ಲೋಕದ ಮಿನುಗುತಾರೆ ಉಸ್ತಾದ್ ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಿದರು. ಸಮಾರೋಪ ಪ್ರಾರ್ಥನೆಗೆ ಸಯ್ಯಿದ್ ಶಿಹಾಬುದ್ದೀನ್ ತಂಘಲ್ ಅಲ್ ಹೈದ್ರೂಸಿ ಕಿಲ್ಲೂರು ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್ INC ಕೋಶಾಧಿಕಾರಿ ಅಬ್ದುಲ್ ಹಮೀದ್ ಸಹದಿ ಈಶ್ವರಮಂಗಲ ,ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ,ಕೆಸಿಎಫ್ ದುಬೈ ನೋರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ನಗರ ಹಾಗು ಇಬ್ರಾಹಿಂ ಮದನಿ ಹೊರ್ಲ್ಯಾನ್ಜ್ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಬ್ರೈಟ್ ,ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿ,ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಶಾಹುಲ್ ಹಮೀದ್ ಸಖಾಫಿ,ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷರಾದ ಇಕ್ಬಾಲ್ ಕಾಜೂರು, ಅಶ್ರಫ್ ಹಾಜಿ ಅಡ್ಯಾರ್, ಅಬ್ದುಲ್ ರಝಾಕ್ ಕಾಂತಡ್ಕ , ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಕೆಸಿಎಫ್ ದುಬೈ ನೋರ್ತ್ ಝೋನ್ ಸಮಿತಿ ಕೋಶಾಧಿಕಾರಿ ಅರಾಫತ್ ನಾಪೋಕ್ಲು , ಕೆಸಿಎಫ್ ದುಬೈ ನೊರ್ತ್ ಝೋನಿನ ಕ್ಯಾಬಿನೆಟ್ ನಾಯಕರುಗಳು ಹಾಗು ಹಲವಾರು ಉಲಮಾ ಉಮಾರಾ ನೇತಾರರು ಭಾಗವಸಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ದುಬೈ ನೋರ್ತ್ ಝೋನ್ ಪ್ರಧಾನ ಕಾರ್ಯದರ್ಶಿ ಹಂಝ ಎಮ್ಮೆಮಾಡು ಸ್ವಾಗತಿಸಿ ಮಿಲಾದ್ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಶಿದ್ ಕುಂಬ್ರ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.