(www.vknews.com) : ರಬೀಱ್ ಕಾರ್ಯಕ್ರಮದ ಪೂರ್ವ ತಯ್ಯಾರಿಯ ಗದ್ಧಲದಲ್ಲಿರುವಾಗ ಗೆಳೆಯನ ಫೋನ್ ಕಾಲ್. ವಿಚಾರ ತಿಳಿದಾಗ ಸಿಡಿಲು ಬಡಿದಂತಾಗಿತ್ತು.
ನಾನು ವೃತ್ತಿಯಲ್ಲಿರುವ ಮಂಗಳೂರಿನ ಇಂಗ್ಲೀಷ್ ಮೀಡಿಯಂ ಮದ್ರಾಸದ ಪ್ರಾರಂಭ ಹಂತದಿಂದ ಉಸ್ತಾದರಾಗಿ ಸೇವೆ ಸಲ್ಲಿಸಿದ್ದ ಹಾಫಿಳ್ ತೌಸೀಫ್ ಉಸ್ತಾದರ ಮರಣ ವಾರ್ತೆ. ಧಾರ್ಮಿಕ ವಿದ್ಯಾರ್ಜನೆಯಲ್ಲಿ Rank ವಿಜೇತರಾದ ತೌಸೀಫ್ ಉಸ್ತಾದರಿಗೆ ಉನ್ನತ ಉದ್ಯೋಗ ಅವಕಾಶ ಬಂದಿದ್ದರೂˌ ಎಲ್ಲವನ್ನೂ ಕೈ ಚೆಲ್ಲಿ ಮಂಗಳೂರಿನ ದಅವಾ ಕ್ರಾಂತಿಯ ಕನಸು ಕಂಡಿದ್ದರು. ತನ್ನದೇ ಖರ್ಚಿನಲ್ಲಿ ಮಂಗಳೂರಿನ ಹೃದಯ ಭಾಗದಲ್ಲಿ “ತರ್ತೀಲ್” ಎಂಬ ಸಸ್ಥೆಯನ್ನೂ ಹುಟ್ಟು ಹಾಕಿದ್ದರು. ಮದ್ರಸಾ ಸಬಲೀಕರಣದ ಅನಿವಾರ್ಯತೆ ಮನಗಂಡು ಆಂಗ್ಲಭಾಷೆಯಲ್ಲಿ ಮದ್ರಸಾ ಪಠ್ಯಪುಸ್ತವು ರಚಿಸಿದ್ದರು.
ಪ್ರತಿಷ್ಠಿತ ಶಾಲೆಯೊಂದರಲ್ಲಿ ಪಾಶ್ಚಾತ್ಯವನ್ನ ದೂರೀಕರೀಸಿ ವಿದ್ಯಾರ್ಥಿಗಳ ಮನಸ್ಸಲ್ಲಿ ಖುರ್ಆನ್ ನೆಲೆಯೂರುವಂತೆ ಮಾಡಿ ಶಾಲಾ ವಿದ್ಯಾರ್ಥಿಗಳನ್ನ ಹಾಫಿಳ್ ಮಾಡುವಂತೆಯೂ ಅವರ ಕಾರ್ಯಾಚರಣೆ ನಡೆದಿತ್ತು. ಅದೆಷ್ಟೋ ವಿದ್ಯಾರ್ಥಿಗಳು ಎಂಟು—ಹತ್ತು ಜುಝುಱ್ ಕಂಠಪಾಠ ಮಾಡಿದ್ದರು. ಅಷ್ಟರಲ್ಲೇ ಉಸ್ತಾದರಿಗೆ ಅಲ್ಲಾಹನ ಆಮಂತ್ರಣ ಬಂದಾಗಿತ್ತು.
ರಬೀಉಲ್ ಅವ್ವಲ್ 22 ರಲ್ಲಿನ ಅಲ್ಲಾಹನ ಅನುಲ್ಲಂಘನೀಯ ಆಮಂತ್ರಣವ ಸ್ವೀಕರಿಸಿ ನಗುಮುಖದೊಂದಿಗೆ ಉಸ್ತಾದ್ ಹೊರಟೇ ಬಿಟ್ಟರು. ಮಂಗಳೂರಿನಲ್ಲಿ ಉಸ್ತಾದ್ ಕ್ರಾಂತಿ ಮಾಡುವುದರಲ್ಲಿ ಸಂಶಯವಿಲ್ಲವೆಂಬ ನಮ್ಮ ನಂಬಿಕೆ ನುಚ್ಚು ನೂರಾಯ್ತು. ಅಷ್ಟಕ್ಕೂ ಮಂಗಳೂರು ಕಳೆದುಕೊಂಡದ್ದು ಒಬ್ಬ ನಿಷ್ಕಳಂಕˌ ನಿಸ್ವಾರ್ಥ ಮನೋಭಾವದ ಒಬ್ಬ ದಾಈಯನ್ನ.
ಅಲ್ಲಾಹನು ಹಾಫಿಳ್ ತೌಸೀಫ್ ಹಿಮಮಿ ಸಅದಿ ಉಸ್ತಾದ ಬರ್ಝಖ್ ಸಂತುಷ್ಠಗೊಳಿಸಲಿ. ಉಸ್ತಾದರ ಕನಸು ನನಸಾಗಲಿ.ಆಮೀನ್
— ಎಂ.ಕೆ.ಸಿನಾನ್ ಸಖಾಫಿ ಅಜಿಲಮೊಗರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.