(www.vknews.com) : ಕೋವಿಡ್ ಕಾರಣದಿಂದ ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಒಟ್ಟು 50 ಮದರಸ ಉಸ್ತಾದರಿಗೆ ಸೀಮಿತ ಅವಧಿಯ ಮಾಶಾಸನ ನೀಡುವ ಸಾಂತ್ವನ ಯೋಜನೆಯನ್ನು ಸಮಸ್ತ ಇಸ್ಲಾಮಿಕ್ ಸೆಂಟರ್ (SIC) ಕರ್ನಾಟಕ – ರಿಯಾದ್ ಸಮಿತಿ ಚಾಲನೆ ನೀಡಿತು.
ನವಂಬರ್ 6 ರಂದು ಸಮಿತಿಯ ಮಾಸಿಕ ಮಜಲಿಸುನ್ನೂರ್ ಮತ್ತು ಮೀಲಾದ್ ಸಂಗಮದಲ್ಲಿ ಸಮಿತಿಯ ಚೇರ್ಮನ್ ಹಾಜಿ ಹಸನ್ ಅರ್ಕಾನರವರು ಸಾಂತ್ವನ ಸಮಿತಿಯ ಸಂಚಾಲಕ ಸುನೀರ್ ಕೂರ್ನಡ್ಕರವರಿಗೆ ಮೊದಲ ತಿಂಗಳ ಫಂಡ್ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಕರ್ನಾಟಕದ ಆಯ್ದ ಒಟ್ಟು 50 ಮುಅಲ್ಲಿಂ ಉಸ್ತಾದರಿಗೆ 2020 ನವೆಂಬರ್ ತಿಂಗಳಿನಿಂದ ಪ್ರಾರಂಭಗೊಂಡು 2021 ಮೇ ತಿಂಗಳ ತನಕ ಮಾಸಿಕ ಒಂದು ಸಾವಿರದಂತೆ ಓರ್ವ ಉಸ್ತಾದರಿಗೆ 7 ಸಾವಿರ ರೂಪಾಯಿ ಧನ ಸಹಾಯ ನೀಡುವ ಒಟ್ಟು 3 ಲಕ್ಷದ 50 ಸಾವಿರ ರೂಪಾಯಿ ಆರ್ಥಿಕ ಸಹಕಾರದ ಯೋಜನೆಯಾಗಿದೆ. ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್ ಮತ್ತು SKSSF ಆಯ್ಕೆ ಮಾಡುವ ಅರ್ಹ ಉಸ್ತಾದರಿಗೆ ಈ ಯೋಜನೆ ತಲುಪಲಿದೆ.
ಬಹು. ಮೊಹಮ್ಮದ್ ಬಷೀರ್ ಅಝರಿ ಸಂಬರತೋಟ ಮಜಲಿಸುನ್ನೂರ್ ಮತ್ತು ಮೌಲೂದ್ ಗೆ ನೇತೃತ್ವ ನೀಡಿದರು. ಸಮಿತಿಯ ಅಧ್ಯಕ್ಷ ಬಷೀರ್ ಅರಂಬೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮೊಹಮ್ಮದ್ ರಿಯಾಜ್ ಇನೋಳಿ ವರದಿ ಮಂಡಿಸಿದರು. ಉಬೈದ್ ದೇರಳಕಟ್ಟೆ ಸ್ವಾಗತಿಸಿ, ಮುಸ್ತಫಾ ನಾಟೆಕಲ್ಲು ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.