(www.vknews.com) : ದಂತ ದಾರ ಅಥವಾ ದಂತ ಬಳ್ಳಿ ದಿನನಿತ್ಯ ಬಳಸುವುದರಿಂದ ಹಲ್ಲಿನ ಆರೋಗ್ಯ ವೃದ್ಧಿಸುತ್ತದೆ. ಹಲ್ಲುಗಳ ನಡುವೆ ಸಿಕ್ಕಿ ಹಾಕಿಕೊಂಡ ಸಣ್ಣ ಸಣ್ಣ ಆಹಾರ ಕಣಗಳು ದಂತ ಕ್ಷಯಕ್ಕೆ ಕಾರಣವಾಗುತ್ತದೆ. ಪ್ರತೀ ದಿನ ದಂತದಾರ ಬಳಸಿ ಹಲ್ಲನ್ನು ಶುಚಿಗೊಳಿಸಿದರೆ ದಂತ ಕ್ಷಯವಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ದೈನಂದಿನ ಜೀವನದಲ್ಲಿ ಪ್ರತೀ ನಿತ್ಯ ಹಲ್ಲು ಉಜ್ಜುವುದರ ಜೊತೆಗೆ ದಂತ ಬಳ್ಳಿಯ ಬಳಕೆ ಅತೀ ಅವಶ್ಯಕ ಎಂದು ಸರೋಜಿನಿ ಪ್ರತಿಷ್ಠಾನ (ರಿ.) ಮಂಗಳೂರು ಇದರ ಕಾರ್ಯದರ್ಶಿ ಹಾಗೂ ಸುರಕ್ಷಾ ದಂತ ಚಿಕಿತ್ಸಾಲಯದ ವೈದ್ಯರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.
ಪ್ರತೀ ವರ್ಷ ನವಂಬರ್ ತಿಂಗಳ 4ನೇ ಶುಕ್ರವಾರದಂದು ವಿಶ್ವದಾದ್ಯಂತ ‘ವಿಶ್ವ ದಂತ ಬಳ್ಳಿ ತಿಳುವಳಿಕಾ ದಿನ’ ಎಂದು ಆಚರಿಸಿ ಜನರಲ್ಲಿ ದಂತ ಬಳ್ಳಿಯ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ದಿನಾಚರಣೆಯ ಅಂಗವಾಗಿ ದಿನಾಂಕ 27-11-2020ನೇ ಶುಕ್ರವಾರದಂದು ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಉಚಿತವಾಗಿ ದಾರಬಳ್ಳಿ ವಿತರಿಸಲಾಯಿತು. ಚೂಂತಾರು ಸರೋಜಿನಿ ಪ್ರತಿಷ್ಠಾನ (ರಿ.) ಮಂಗಳೂರು ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ ಇದರ ಸಂಯುಕ್ತ ಅಶ್ರಯದಲ್ಲಿ ಈ ಆಚರಣೆ ನಡೆಯಿತು.
ಕಳೆದ 5 ವರ್ಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ನಿರಂತರವಾಗಿ ಈ ಆಚರಣೆ ನಡೆಯುತ್ತಿದ್ದು, ಜನರಲ್ಲಿ ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನ ನಡೆಯುತ್ತಿದೆ. ದಂತ ಚಿಕಿತ್ಸೆಯ ಜೊತೆಗೆ ರಕ್ತದಾನ ಶಿಬಿರ, ವನಮಹೋತ್ಸವ, ಧೂಮಪಾನ ವರ್ಜನ ಶಿಬಿರ, ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ ಹೀಗೆ ಹತ್ತು ಹಲವು ಸಮಾಜಮುಖಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ನಿರಂತರವಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ವೈದ್ಯರಾದ ಡಾ|| ರಾಜಶ್ರೀ ಮೋಹನ್ ದಂತ ಚಿಕಿತ್ಸಾಲಯ ಸಹಾಯಕರಾದ ರಮ್ಯಾ, ಸುಶ್ಮಿತಾ, ಚೈತ್ರ ಮತ್ತು ಶ್ವೇತಾ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.